ಆ್ಯಪ್ನಗರ

ಲಂಡನ್‌ ತಲುಪಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್

ಬಲಭುಜದ ನೋವಿನ ಚಿಕಿತ್ಸೆಗಾಗಿ ಲಂಡನ್‌ಗೆ ನಿನ್ನೆ ಹೊರಟಿದ್ದ ನಟ ಶಿವರಾಜ್‌ಕುಮಾರ್ ಅವರು ಸುರಕ್ಷಿತವಾಗಿ ಲಂಡನ್ ತಲುಪಿದ್ದಾರೆ. ಅಲ್ಲಿ ಅವರು ತಲುಪಿದ ಬಳಿಕ ಫೋಟೋವನ್ನು ಕಳುಹಿಸಿದ್ದು, ಈ ವಿಷಯ ತಿಳಿದು ಅವರ ಅಭಿಮಾನಿಗಳು ಸೇರಿದಂತೆ ಕನ್ನಡದ ಎಲ್ಲ ಸಿನಿಮಾ ಪ್ರೇಮಿಗಳು ಖುಷಿಯಾಗಿದ್ದಾರೆ.

Vijaya Karnataka Web 7 Jul 2019, 8:40 pm
ಕರುನಾಡ ಚಕ್ರವರ್ತಿ ಖ್ಯಾತಿಯ ನಟ ನಟ ಶಿವರಾಜಕುಮಾರ್ ಅವರು ಶಸ್ತ್ರಚಿಕಿತ್ಸೆಗೆಂದು ಲಂಡನ್‌ಗೆ ನಿನ್ನೆ (ಜುಲೈ 6) ಹೊರಟಿದ್ದು ಬಹಳಷ್ಟು ಜನರಿಗೆ ಗೊತ್ತಿದೆ.ಇದೀಗ ಅವರು ಲಂಡನ್ ತಲುಪಿದ್ದು, ಅಲ್ಲಿಂದ ಫೋಟೋ ಸಹ ಕಳಿಸಿದ್ದಾರೆ. ಇತ್ತೀಚೆಗೆ ನಟ ಶಿವಣ್ಣ ಅವರನ್ನು ಭೇಟಿಯಾಗಿದ್ದ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾದ ಗುಬ್ಬಿ ಜಯರಾಜ್ ಹಾಗೂ ಪದಾಧಿಕಾರಿಗಳು ಅವರು ಶೀಘ್ರ ಗುಣಮುಖರಾಗಲಿ ಹಾರೈಸಿದ್ದಾರೆ.
Vijaya Karnataka Web shiavnna0707


ನಟ ಶಿವರಾಜ್‌ಕುಮಾರ್ ಅವರು ತಮ್ಮ ಬಲಭುಜದ ನೋವಿನ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದು, ಅಲ್ಲಿ ಭುಜದ ನೋವಿನ ಹಿನ್ನೆಲೆಯಲ್ಲಿ ಆಪರೇ‍ಷನ್‌ಗೆ ಒಳಗಾಗಲಿದ್ದಾರೆ ಎನ್ನಲಾಗಿದೆ. ಸಿನಿಮಾ ಸಾಹಸ ದೃಶ್ಯದ ಶೂಟಿಂಗ್‌ ವೇಳೆ ಅವರ ಬಲ ಭುಜಕ್ಕೆ ಗಾಯವಾಗಿದ್ದು, ಅವರು ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಕಷ್ಟಪಡುವಂತಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಡೆಯುವ ಶಸ್ತ್ರಚಿಕಿತ್ಸೆ ಶಿವಣ್ಣರ ಮುಂದಿನ ಜೀವನಕ್ಕೆ ಅನುಕೂಲಕರವಾಗಲಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಹಾಗೂ ಬಾಲಿವುಡ್ ನಟ ಶಾರುಖ್‌ ಖಾನ್ ಅವರಿಗೆ ಈ ಮೊದಲು ಲಂಡನ್‌ನಲ್ಲಿ ಟ್ರೀಟ್ಮೆಂಟ್ ಮಾಡಿದ್ದ ವೈದ್ಯರೇ ನಟ ಶಿವಣ್ಣ ಅವರನ್ನು ಟ್ರೀಟ್ ಮಾಡಲಿದ್ದಾರಂತೆ. ಜುಲೈ 10ರಂದು ಶಿವಣ್ಣ ಅವರು ಈ ಆಪರೇ‍ನ್‌ಗೆ ಒಳಗಾಗಲಿದ್ದು, ಆ ಬಳಿಕ ಅವರು 3 ತಿಂಗಳುಗಳ ಕಾಲ ಯಾವುದೇ ಚಿತ್ರದ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲವಂತೆ. ಹೀಗಾಗಿ ತಮ್ಮ ಚಿತ್ರದ ಸಾಹಸ ದಶ್ಯಗಳನ್ನು ಆದಷ್ಟು ಬೇಗ ಮುಗಿಸಿಕೊಂಡು ನಟ ಶಿವಣ್ಣ ಅವರು ಇದೀಗ ಲಂಡನ್‌ ಸೇರಿಕೊಂಡಿದ್ದಾರೆ. ನಟ ಶಿವರಾಜ್‌ಕುಮಾರ್ ಅವರು ಶೀಘ್ರ ಗುಣಮುಖರಾಗಲೆಂದು ಇಡೀ ಕರ್ನಾಟಕ ಹಾರೈಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌