ಆ್ಯಪ್ನಗರ

ಬ್ಲ್ಯಾಕ್‌ ಮ್ಯಾಜಿಷಿಯನ್‌ ಆದ 'ಅವತಾರ ಪುರುಷ' ಶ್ರೀನಗರ ಕಿಟ್ಟಿ

ಸುನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಅವತಾರ ಪುರುಷ' ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅವನೇ ಶ್ರೀಮನ್ನಾರಾಯಣ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದ್ದು, ಆಶಿಕಾ ರಂಗನಾಥ್‌ ನಾಯಕಿಯಾಗಿ ನಟಿಸಿದ್ದಾರೆ.

Vijaya Karnataka 7 Jul 2019, 5:29 pm
ಸುನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಅವತಾರ ಪುರುಷ' ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಬ್ಲ್ಯಾಕ್‌ ಮ್ಯಾಜಿಷಿಯನ್‌ ಪಾತ್ರ. ಇದೊಂದು ಮಹತ್ವದ ಪಾತ್ರವಾಗಿದ್ದು, ಕಥೆಗೆ ಗಂಭೀರತೆಯನ್ನು ತಂದುಕೊಡುವಂಥದ್ದು ಎಂದಿದ್ದಾರೆ ನಿರ್ದೇಶಕರು.
Vijaya Karnataka Web srinagarakitty0707


'ಶ್ರೀನಗರ ಕಿಟ್ಟಿ ಅವರದ್ದು ಅತಿಥಿ ಪಾತ್ರ ಎಂದರೆ, ಹಾಗೆ ಬಂದು ಹೀಗೆ ಹೋಗುವಂಥದ್ದು ಅಲ್ಲ. ಒಂದು ಉದ್ದೇಶಕ್ಕಾಗಿ ಬರುವಂಥ ಪಾತ್ರವದು. ಕಥೆಗೆ ತುಂಬಾ ಸಹಾಯ ಮಾಡುತ್ತದೆ. ಈ ಸಿನಿಮಾದಲ್ಲಿ ಶರಣ್‌ ನಾಯಕ. ಇವರು ವಿಭಿನ್ನ ಅವತಾರ. ನಾನಾ ಅವತಾರದಲ್ಲಿ ಶರಣ್‌ ಕಾಣಿಸಿಕೊಳ್ಳುವುದಕ್ಕೆ ಒಂದು ಉದ್ದೇಶವಿರುತ್ತದೆ. ಅದನ್ನು ರಿವಿಲ್‌ ಮಾಡುವುದೇ ಶ್ರೀನಗರ ಕಿಟ್ಟಿ ನಿರ್ವಹಿಸಿದ ಪಾತ್ರ' ಎನ್ನುತ್ತಾರೆ ಸುನಿ.

ಬ್ಲ್ಯಾಕ್‌ ಮ್ಯಾಜಿಷನ್‌ಗಳ ಬಗ್ಗೆ ಈಗಾಗಲೇ ಹಲವು ಕಥೆಗಳನ್ನು ಕೇಳಿದ್ದೇವೆ. ಅವರ ವಿದ್ಯೆಯ ಬಗ್ಗೆಯೂ ನೋಡಿದ್ದೇವೆ. ಅಂತಹ ರಿಯಲ್‌ ಇನ್ಸಿಡೆಂಟ್‌ ಅನ್ನು ಈ ಪಾತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಈ ಪಾತ್ರದ ಮತ್ತೊಂದು ವಿಶೇಷ ಅಂದರೆ, ಸಿನಿಮಾ ಪೂರ್ತಿ ಕಿಟ್ಟಿ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಾರಂತೆ.

'ಸುನಿ ಈ ಪಾತ್ರದ ಬಗ್ಗೆ ಹೇಳಿದಾಗ ತುಂಬಾ ಖುಷಿ ಆಯಿತು. ಅವರು ಹೇಳುತ್ತಿರುವ ಘಟನೆಗಳು ಕೂಡ ವಾಸ್ತವಕ್ಕೆ ಹತ್ತಿರವಾದಂಥವು. ಹಾಗಾಗಿ ಈ ಸಿನಿಮಾದಲ್ಲಿ ನಟಿಸಲು ನಾನು ಒಪ್ಪಿಕೊಂಡೆ. ಒಂದು ಬಗೆಯ ವಿಭಿನ್ನ ಅನುಭವ ನೀಡಿದಂತಹ ಪಾತ್ರ ಇದಾಗಿದೆ' ಎನ್ನುತ್ತಾರೆ ಶ್ರೀನಗರ ಕಿಟ್ಟಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌