ಭಾರೀ ಗ್ಯಾಪ್ ಬಳಿಕ 'ಜಗ್ಗಿ ಜಗನ್ನಾಥ್' ಜತೆಯಾದ ದುನಿಯಾ ರಶ್ಮಿ!
ತುಂಬಾ ದಿನಗಳ ಗ್ಯಾಪ್ ಬಳಿಕ ಮತ್ತೆ ಕನ್ನಡ ಸಿನಿಮಾರಂಗದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ದುನಿಯಾ ಖ್ಯಾತಿಯ ರಶ್ಮಿ. ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಮುಂಬರುವ 'ಜಗ್ಗಿ ಜಗನ್ನಾಥ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಪಕ್ಕಾ ಆ್ಯಕ್ಷನ್ ಮತ್ತು ಲವ್ಸ್ಟೋರಿಯನ್ನು ಆಧರಿಸಿದ ಸಿನಿಮಾ ಎನ್ನುವುದು ವಿಶೇಷ. ಸೆಂಟಿಮೆಂಟ್ ಸಿನಿಮಾಗಳಿಗೆ ಹೆಸರಾಗಿರುವ ಓಂ ಸಾಯಿ ಪ್ರಕಾಶ್, ಈಗ ಆ್ಯಕ್ಷನ್ ಸಿನಿಮಾಗಳತ್ತ ಮುಖ ಮಾಡಿರುವುದು ಸಹಜವಾಗಿಯೇ ನಿರೀಕ್ಷೆ ಮೂಡಿಸಿದೆ.
Vijaya Karnataka 24 Jul 2019, 2:17 pm
ತುಂಬಾ ದಿನಗಳ ನಂತರ ಮತ್ತೆ ಕನ್ನಡ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ ದುನಿಯಾ ರಶ್ಮಿ. ಸದ್ಯ ಅವರು ಓಂ ಸಾಯಿ ಪ್ರಕಾಶ್ ನಿರ್ದೇಶನದ 'ಜಗ್ಗಿ ಜಗನ್ನಾಥ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಪಕ್ಕಾ ಆ್ಯಕ್ಷನ್ ಮತ್ತು ಲವ್ಸ್ಟೋರಿಯನ್ನು ಆಧರಿಸಿದ ಸಿನಿಮಾ ಎನ್ನುವುದು ವಿಶೇಷ. ಸೆಂಟಿಮೆಂಟ್ ಸಿನಿಮಾಗಳಿಗೆ ಹೆಸರಾಗಿರುವ ಓಂ ಸಾಯಿ ಪ್ರಕಾಶ್, ಈಗ ಆ್ಯಕ್ಷನ್ ಸಿನಿಮಾಗಳತ್ತ ಮುಖ ಮಾಡಿರುವುದು ಸಹಜವಾಗಿಯೇ ನಿರೀಕ್ಷೆ ಮೂಡಿಸಿದೆ.
'ಈ ಸಿನಿಮಾದಲ್ಲಿ ನಾನು ಹೊಸ ಬಗೆಯ ಪಾತ್ರ ಮಾಡುತ್ತಿದ್ದೇನೆ. ಈ ಸಿನಿಮಾದಲ್ಲಿ ವಿಭಿನ್ನ ಪ್ರೇಮಕಥೆಯಿದ್ದು, ಅದನ್ನು ಕಮರ್ಷಿಯಲ್ ಮಾದರಿಯಲ್ಲಿ ಹೇಳುತ್ತಿದ್ದಾರೆ. ಭೂಗತ ಜಗತ್ತಿನ ಕಥೆ ಕೂಡ ಇದ್ದು, ಹೆಸರಾಂತ ನಟರು ಪಾತ್ರ ಮಾಡಿದ್ದಾರೆ' ಎನ್ನುತ್ತಾರೆ ನಟಿ ದುನಿಯಾ ರಶ್ಮಿ. ಅಂದಹಾಗೆ, ನಟಿ ದುನಿಯಾ ರಶ್ಮಿ ಅವರು ಇತ್ತೀಚೆಗೆ ಸಖತ್ ಚೂಸಿಯಾಗಿದ್ದಾರೋ ಎನೋ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿಲ್ಲ ಎನ್ನಬಹುದು.
ಡೈಲಾಗ್ ಕಿಂಗ್ ಸಾಯಿ ಕುಮಾರ್ ಕೂಡ ಪ್ರಮುಖ ಪಾತ್ರ ಮಾಡಿದ್ದು, ಪೇಪರ್ ಆಯುವ ಸಾಮಾನ್ಯ ಹುಡುಗನೊಬ್ಬ ಅಘೋರಿಯಾದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದಿದ್ದಾರೆ ನಿರ್ದೇಶಕರು. ಲಿಖಿತ್ ರಾಜ್ ನಾಯಕನಾಗಿ ನಟಿಸಿದ್ದು, ತಬಲಾ ನಾಣಿ, ಮಜ ಟಾಕೀಸ್ ಪವನ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.
'ಈ ಸಿನಿಮಾದಲ್ಲಿ ನಾನು ಹೊಸ ಬಗೆಯ ಪಾತ್ರ ಮಾಡುತ್ತಿದ್ದೇನೆ. ಈ ಸಿನಿಮಾದಲ್ಲಿ ವಿಭಿನ್ನ ಪ್ರೇಮಕಥೆಯಿದ್ದು, ಅದನ್ನು ಕಮರ್ಷಿಯಲ್ ಮಾದರಿಯಲ್ಲಿ ಹೇಳುತ್ತಿದ್ದಾರೆ. ಭೂಗತ ಜಗತ್ತಿನ ಕಥೆ ಕೂಡ ಇದ್ದು, ಹೆಸರಾಂತ ನಟರು ಪಾತ್ರ ಮಾಡಿದ್ದಾರೆ' ಎನ್ನುತ್ತಾರೆ ನಟಿ ದುನಿಯಾ ರಶ್ಮಿ. ಅಂದಹಾಗೆ, ನಟಿ ದುನಿಯಾ ರಶ್ಮಿ ಅವರು ಇತ್ತೀಚೆಗೆ ಸಖತ್ ಚೂಸಿಯಾಗಿದ್ದಾರೋ ಎನೋ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿಲ್ಲ ಎನ್ನಬಹುದು.
ಡೈಲಾಗ್ ಕಿಂಗ್ ಸಾಯಿ ಕುಮಾರ್ ಕೂಡ ಪ್ರಮುಖ ಪಾತ್ರ ಮಾಡಿದ್ದು, ಪೇಪರ್ ಆಯುವ ಸಾಮಾನ್ಯ ಹುಡುಗನೊಬ್ಬ ಅಘೋರಿಯಾದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದಿದ್ದಾರೆ ನಿರ್ದೇಶಕರು. ಲಿಖಿತ್ ರಾಜ್ ನಾಯಕನಾಗಿ ನಟಿಸಿದ್ದು, ತಬಲಾ ನಾಣಿ, ಮಜ ಟಾಕೀಸ್ ಪವನ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.