ಆ್ಯಪ್ನಗರ

ತೆಲುಗಿನಲ್ಲಿ ಸಖತ್ ಮಿಂಚುತ್ತಿರುವ ಶ್ರದ್ಧಾ ಶ್ರೀನಾಥ್!

ನಟ ನಾಗಚೈತನ್ಯ ಅಕ್ಕಿನೇನಿ ಮುಂದಿನ ಚಿತ್ರಕ್ಕೆ ಶ್ರದ್ಧಾ ಅವರನ್ನು ಕರೆತರಲು ನಿರ್ದೇಶಕ, ನಿರ್ಮಾಪಕ ದಿಲ್ ರಾಜು ಪ್ಲ್ಯಾನ್ ಮಾಡಿದ್ದಾರಂತೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ನಟಿ ಶ್ರದ್ಧಾ ಶ್ರೀನಾಥ್ ನಾಯಕಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಲಾಗಿದೆ.

Vijaya Karnataka Web 24 Apr 2019, 5:26 pm
ಸ್ಯಾಂಡಲ್‌ವುಡ್‌ನಲ್ಲಿ 'ಯೂ ಟರ್ನ್' ಚಿತ್ರದ ಮೂಲಕ ಸದ್ದು ಮಾಡಿದ್ದ ಚೆಲುವೆ ಶ್ರದ್ಧಾ ಶ್ರೀನಾಥ್ ಟಾಲಿವುಡ್ ಚಿತ್ರೋದ್ಯಮದಲ್ಲಿ ಮಿಂಚಲು ಹೊರಟಿದ್ದಾರೆ. ಶ್ರದ್ಧಾ ಅಭಿನಯದ ಮೊದಲ ತೆಲುಗು ಚಿತ್ರ 'ಜರ್ಸಿ' ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಶ್ರದ್ಧಾ ಮೇಲೆ ಟಾಲಿವುಡ್ ನಿರ್ದೇಶಕರುಗಳ ಕಣ್ಣು ಬಿದ್ದಿದೆ. ಹೀಗಾಗಿ ಅಲ್ಲಿ ಶ್ರದ್ಧಾಗೆ ಬಹಳಷ್ಟು ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ.
Vijaya Karnataka Web shraddha2404


ತೆಲುಗು ಚಿತ್ರರಂಗದಲ್ಲಿ ತಮ್ಮ ಮೊದಲ ಚಿತ್ರದಲ್ಲಿ ಯಶಸ್ಸು ಪಡೆದ ನಟಿಯರ ಸಂಖ್ಯೆ ತೀರಾ ವಿರಳ. ನಟಿ ಸಮಂತಾ ಬಣ್ಣ ಹಚ್ಚಿದ್ದ ಮೊದಲ ಚಿತ್ರ ಸೂಪರ್ ಹಿಟ್ ಆಗಿತ್ತು. ಇದಾದ ನಂತರ ಸಾಯಿ ಪಲ್ಲವಿ ಅವರ ಮೊದಲ ಸಿನಿಮಾ 'ಫಿದಾ' ಕೂಡ ಸೂಪರ್ ಹಿಟ್ ದಾಖಲಿಸಿತ್ತು. ಇದೀಗ, ಕನ್ನಡತಿ ಶ್ರದ್ಧಾ ಶ್ರೀನಾಥ್ ಸರದಿ. ನಟಿಸಿದ ಮೊದಲ ಚಿತ್ರವೇ ಸೂಪರ್ ಹಿಟ್ ಆಗುವ ಹಾದಿಯಲ್ಲಿದ್ದು, ನಟಿ ಶ್ರದ್ಧಾ ಶ್ರೀನಾಥ್ ಅಪ್ಪಟ ಗೃಣಿಣಿಯ ಪಾತ್ರದಲ್ಲಿ ಸಖತ್ ಮಿಂಚಿದ್ದಾರೆ.

ಈ ಮೂಲಕ ಮತ್ತೊಂದು ಟಾಲಿವುಡ್ ಚಿತ್ರಕ್ಕೆ ಶ್ರದ್ಧಾಗೆ ಆಫರ್ ಬಂದಿದೆ ಎನ್ನಲಾಗಿದೆ. ನಟ ನಾಗಚೈತನ್ಯ ಅಕ್ಕಿನೇನಿ ಮುಂದಿನ ಚಿತ್ರಕ್ಕೆ ಶ್ರದ್ಧಾ ಅವರನ್ನು ಕರೆತರಲು ನಿರ್ದೇಶಕ, ನಿರ್ಮಾಪಕ ದಿಲ್ ರಾಜು ಪ್ಲ್ಯಾನ್ ಮಾಡಿದ್ದಾರಂತೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ನಟಿ ಶ್ರದ್ಧಾ ಶ್ರೀನಾಥ್ ನಾಯಕಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಲಾಗಿದೆ.

ಒಟ್ಟಿನಲ್ಲಿ, ಕನ್ನಡತಿ ಶ್ರದ್ಧಾ ಶ್ರೀನಾಥ್ ತೆಲುಗು ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿರುವುದು ಕನ್ನಡ ಸಿನಿ ಪ್ರೇಕ್ಷಕರಿಗೆ ತುಂಬಾ ಸಂತೋಷದ ಸಂಗತಿ. ನಟಿ ಶ್ರದ್ಧಾ ಶ್ರೀನಾಥ್ ಟಾಲಿವುಡ್ ಪ್ರಯಾಣವೀಗ ಎಲ್ಲ ಕಡೆ ಸುದ್ದಿಯಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌