ಆ್ಯಪ್ನಗರ

ಅಜಯ್ ರಾವ್ 'ಕೃಷ್ಣ ಟಾಕೀಸ್' ಸೇರಿಕೊಂಡ ಸಿಂಧು ಲೋಕನಾಥ್!

ನಟಿ ಸಿಂಧು ಲೋಕನಾಥ್ ಅವರು ವೈವಾಹಿಕ ಜೀವನದ ಬಗ್ಗೆ ಕೆಲವು ಗಾಸಿಪ್ ಗಳು ಹರಿದಾಡಿದ್ದವು. ಅದೇನಾಯಿತೋ ಏನೋ, ಸಿಂಧು ಮಾತ್ರ ಮತ್ತೆ ತಮ್ಮ ಸಿನಿಮಾ ಜರ್ನಿಯನ್ನು ಮುಂದುವರಿಸಿದ್ದಾರೆ. ಕೃಷ್ಣ ಖ್ಯಾತಿಯ ಅಜಯ್ ರಾವ್ ನಾಯಕತ್ವದ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ತೆರೆ ಹಂಚಿಕೊಳ್ಳಲಿದ್ದು, ಸಿಂಧು ಜೊತೆ ಅಪೂರ್ವ ಕೂಡ ನಟಿಸಲಿದ್ದಾರೆ.

Vijaya Karnataka Web 9 May 2019, 9:12 pm
ಕನ್ನಡದ ನಟಿ ಸಿಂಧು ಲೋಕನಾಥ್ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅಜಯ್ ರಾವ್ ನಾಯಕತ್ವದ 'ಕೃಷ್ಣ ಟಾಕೀಸ್' ಚಿತ್ರದಲ್ಲಿ ನಟಿ ಸಿಂಧು ಲೋಕನಾಥ್ ನಟಿಸಲಿದ್ದು, ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರವೇರಿದೆ.
Vijaya Karnataka Web sindhu-ajay0905


ನಟಿ ಸಿಂಧು ಲೋಕನಾಥ್ ಅವರು ವೈವಾಹಿಕ ಜೀವನದ ಬಗ್ಗೆ ಕೆಲವು ಗಾಸಿಪ್ ಗಳು ಹರಿದಾಡಿದ್ದವು. ಅದೇನಾಯಿತೋ ಏನೋ, ಸಿಂಧು ಮಾತ್ರ ಮತ್ತೆ ತಮ್ಮ ಸಿನಿಮಾ ಜರ್ನಿಯನ್ನು ಮುಂದುವರಿಸಿದ್ದಾರೆ. ಕೃಷ್ಣ ಖ್ಯಾತಿಯ ಅಜಯ್ ರಾವ್ ನಾಯಕತ್ವದ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ತೆರೆ ಹಂಚಿಕೊಳ್ಳಲಿದ್ದು, ಸಿಂಧು ಜೊತೆ ಅಪೂರ್ವ ಕೂಡ ನಟಿಸಲಿದ್ದಾರೆ.

ಈ ಮೊದಲು, ಸಿಂದು-ಅಜಯ್ ರಾವ್ ಜೋಡಿ 'ಜೈ ಭಜರಂಗ ಬಲಿ' ಸಿನಿಮಾದಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ಈಗ ಮತ್ತೆ ಈ ಜೋಡಿ ಸಿನಿಮಾ ಮಾಡುತ್ತಿರುವುದು ಈ ಜೋಡಿಯ ಅಭಿಮಾನಿಗಳಿಗೆ ಹಬ್ಬದೂಟ ಎನ್ನಬಹುದು. ನಟ ಅಜಯ್ ರಾವ್ ಎಂದಿನಂತೆ 'ಕೃಷ್ಣ' ಟೈಟಲ್ ಜೊತೆ ತಮ್ಮ ಸಿನಿಮಾಯಾನ ಮುಂದುವರಿಸಿದ್ದಾರೆ. ಈ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ ನೆಲಮಂಗಲದ ಬಳಿ ನೆರವೇರಿದ್ದು, ಈ ಚಿತ್ರವನ್ನು ಆನಂದ್ ಪ್ರಿಯಾ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದ ಮೂಲಕ ಅವರು ತಮ್ಮ ಹೆಸರನ್ನು ವಿಜಯಾನಂದ ಎಂದು ಬದಲಿಸಿಕೊಂಡಿದ್ದಾರೆ.

ಗೋಕುಲ ಎಂಟಟೈನರ್ಸ್ ಬ್ಯಾನರ್ ನಲ್ಲಿ ಅಜಯ್ ಹೊಸ ಸಿನಿಮಾವನ್ನು ಮಾಡುತ್ತಿದ್ದಾರೆ. ಶ್ರೀಧರ್ ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಗೋವಿಂದ ರಾಜು ಎಹೆಚ್ ಹಾಗೂ ಕೃಷ್ಣಮೂರ್ತಿ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. 'ಇರುವುದೆಲ್ಲವ ಬಿಟ್ಟು' ಹಾಗೂ 'ರಂಗಿತರಂಗ' ಚಿತ್ರಗಳಿಗೆ ಕೆಲಸ ಮಾಡಿದ್ದ ವಿಲಿಯಂ ಡೇವಿಡ್ ಈ ಸಿನಿಮಾಕ್ಕೆ ಛಾಯಾಗ್ರಾಹಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌