ಆ್ಯಪ್ನಗರ

ಉಪೇಂದ್ರ-ರಚಿತಾ 'I Love You' ಬಗ್ಗೆ ಆರ್ ಚಂದ್ರು ಹೇಳಿದ್ದೇನು?

ಐ ಲವ್ ಯೂ ಚಿತ್ರವು ಜೂನ್‌ 14ರಂದು ಕನ್ನಡ-ತೆಲುಗು ಭಾಷೆಗಳಲ್ಲಿ ತೆರೆ ಕಾಣುತ್ತಿದ್ದು, ಒಟ್ಟು 1000 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡದಷ್ಟೇ ತೆಲುಗಿನಲ್ಲೂ ಚಿತ್ರಕ್ಕೆ ತುಂಬಾ ಬೇಡಿಕೆ ಬಂದಿದೆ. ಈ ಕಾರಣಕ್ಕೆ ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

Vijaya Karnataka Web 31 May 2019, 5:12 pm
ನಿರ್ದೇಶಕ ಆರ್ ಚಂದ್ರು ಅವರು ಉಪೇಂದ್ರ-ರಚಿತಾ ರಾಮ್ ಜೋಡಿಯ 'ಐ ಲವ್ ಯೂ' ಚಿತ್ರವನ್ನು ಗ್ರಾಂಡ್ ಆಗಿ ತೆರೆಗೆ ತರಲಿರುವುದು ಬಹಳಷ್ಟು ಜನರಿಗೆ ಗೊತ್ತೇ ಇದೆ. ಈ ಚಿತ್ರವನ್ನು ಆರ್ ಚಂದ್ರು ಅವರು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣವನ್ನು ಸಹ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿ ಸೋನು ಗೌಡ ಸಹ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಆರ್ ಚಂದ್ರು ಅವರು ತಮ್ಮ ಕನಸಿನ ಚಿತ್ರವಾದ 'ಐ ಲವ್ ಯೂ'ವನ್ನು ಅದ್ದೂರಿಯಾಗಿ ತೆರೆಗೆ ತರಲಿದ್ದು, ಕನ್ನಡ ಮಾತ್ರವಲ್ಲದೇ ಇದು ತೆಲುಗಿನಲ್ಲೂ ತೆರೆ ಕಾಣಲಿದೆ.
Vijaya Karnataka Web upendra3105


ತಮ್ಮ ಚಿತ್ರದ ಬಗ್ಗೆ ಆರ್ ಚಂದ್ರು "ನಮ್ಮ ಐ ಲವ್ ಯೂ ಚಿತ್ರವು ಜೂನ್‌ 14ರಂದು ಕನ್ನಡ-ತೆಲುಗು ಭಾಷೆಗಳಲ್ಲಿ ತೆರೆ ಕಾಣುತ್ತಿದ್ದು, ಒಟ್ಟು 1000 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡದಷ್ಟೇ ತೆಲುಗಿನಲ್ಲೂ ಚಿತ್ರಕ್ಕೆ ತುಂಬಾ ಬೇಡಿಕೆ ಬಂದಿದೆ. ಈ ಕಾರಣಕ್ಕೆ ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈಗ ಚಿತ್ರದ ಎರಡನೇ ಟ್ರೇಲರ್‌ ಅನ್ನು ಸುದೀಪ್‌ ಅವರಿಂದ ಬಿಡುಗಡೆ ಮಾಡಿದ್ದರಿಂದ ಚಿತ್ರದ ಬಗ್ಗೆ ಬಹಳಷ್ಟು ಕತೂಹಲ ಮೂಡಿದೆ. ಪ್ರೇಮಿಗಳೂ ಸೇರಿದಂತೆ, ಎಲ್ಲರಿಗೂ ಇಷ್ಟವಾಗುವ ಸಿನಿಮಾ ಇದು" ಎಂದು ಹೇಳಿದ್ದಾರೆ.

ಇನ್ನು ಈ ಚಿತ್ರದ ಬಗ್ಗೆ ನಾಯಕ ನಟ ಉಪೇಂದ್ರ ಅವರು "ಇದು ನಿರ್ದೇಶಕ ಚಂದ್ರು ಅವರ ಸಿನಿಮಾ. ಅವರು ತಾವು ಕನಸು ಕಂಡಂತೆ ಈ ಚಿತ್ರವನ್ನು ಮಾಡಿದ್ದಾರೆ. ನಿರ್ದೇಶನದ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರೂ ಎಲ್ಲೂ ರಾಜಿಯಾಗದೆ ದೊಡ್ಡ ಮಟ್ಟದಲ್ಲಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಈ ಜನರೇಷನ್‌ಗೆ ತಕ್ಕಂತೆ ಒಂದು ಪ್ರೇಮ ಕತೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದಾರೆ. ಚಿತ್ರದ ಹೆಸರು, ಕತೆ ಕೇಳಿದಾಗ ನನಗೂ ಕುತೂಹಲ ಉಂಟಾಗಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಇದೊಂದು ವಿಭಿನ್ನ ರೀತಿಯ ಲವ್‌ ಸ್ಟೋರಿ. ಆರ್‌ ಚಂದ್ರು ಅವರ ಕೆರಿಯರ್‌ನಲ್ಲೇ ಒಂದು ದೊಡ್ಡ ಸಿನಿಮಾ ಇದಾಗಲಿದೆ" ಎಂದಿದ್ದಾರೆ.

ಒಟ್ಟಿನಲ್ಲಿ ಜೂನ್ 14ರಂದು ತೆರೆಗೆ ಬರಲಿರುವ ಆರ್ ಚಂದ್ರು ನಿರ್ದೇಶನ-ನಿರ್ಮಾಣದ 'ಐ ಲವ್ ಯೂ' ಚಿತ್ರವು ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿಕೊಂಡಿದೆ. ಉಪೇಂದ್ರ-ರಚಿತಾ ರಾಮ್ ಜೋಡಿಯ ಈ ಚಿತ್ರದಲ್ಲಿ ಸೋನು ಗೌಡ ಸಹ ನಟಿಸಿದ್ದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ಈ ಚಿತ್ರದ ಎರಡನೇ ಟ್ರೇಲರ್‌ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌