ಆ್ಯಪ್ನಗರ

ಚಂಬಲ್‌ ವಿರುದ್ಧ ದೂರು ದಾಖಲು: ಆತಂಕದಲ್ಲಿ ಡಿಕೆ ರವಿ ಫ್ಯಾನ್ಸ್

"ಚಂಬಲ್' ಚಿತ್ರದ ಚಿತ್ರಕಥೆಗೆ ದಕ್ಷ ಪೊಲೀಸ್ ಅಧಿಕಾರಿಗಳೇ ಸ್ಪೂರ್ತಿ" ಎಂಬುದು ಚಿತ್ರತಂಡದಿಂದಲೇ ಬಂದಿರುವ ಮಾಹಿತಿ. ಹೀಗಿರುವಾಗ ಗೌರಮ್ಮ ಅವರು ಫಿಲಂ ಚೇಂಬರಿಗೆ ಕೊಟ್ಟಿರುವ ದೂರು ತುಂಬಾ ಪ್ರಾಮುಖ್ಯತೆ ಪಡೆಯಲಿದೆ. ಇನ್ನೇನು ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗಿದ್ದ 'ಚಂಬಲ್' ಚಿತ್ರದ ಬಗ್ಗೆ ಈಗ ಪ್ರೇಕ್ಷಕರಿಗೆ ತುಂಬಾ ಆತಂಕ ಶುರುವಾಗಿದೆ.

Vijaya Karnataka Web 10 Feb 2019, 11:00 am
'ಚಂಬಲ್' ಚಿತ್ರ ಶುರುವಾದಾಗಿನಿಂದ ಸ್ಯಾಂಡಲ್‌ವುಡ್ ಪ್ರೇಕ್ಷಕರು ಭಾರೀ ನಿರೀಕ್ಷೆಯಲ್ಲಿದ್ದರು. ಕಾರಣಗಳು ಹಲವಾರು. ಮೊದಲನೆಯದಾಗಿ ಚಿತ್ರದ ಶೀರ್ಷಿಕೆ ವಿಭಿನ್ನವಾಗಿದ್ದು ಥಟ್ಟನೇ ಸೆಳೆಯುವಂತಿದೆ. ಇನ್ನೊಂದು ಸಂಗತಿ ಎಂದರೆ 'ಅಯೋಗ್ಯ' ಸಕ್ಸಸ್ ನಂತರ ನೀನಾಸಂ ಸತೀಶ್ ನಟನೆಯ ಚಿತ್ರವಿದು. ಅಷ್ಟೇ ಅಲ್ಲ, ಟ್ರೇಲರ್ ನೋಡಿದ ಮಂದಿಗೆ ಇದು 'ಡಿಕೆ ರವಿ ಕಥೆ' ಎಂದು ಅನ್ನಿಸಿದ್ದು. ಈ ಎಲ್ಲ ಅಂಶಗಳು 'ಚಂಬಲ್' ಚಿತ್ರವನ್ನು ಆದಷ್ಟು ಬೇಗ ನೋಡಬೇಕು ಎಂದು ಕನ್ನಡ ಚಿತ್ರ ಪ್ರೇಮಿಗಳು ಕಾಯುವಂತೆ ಮಾಡಿದ್ದವು.
Vijaya Karnataka Web satish10


ಆದರೆ ಈಗ 'ಚಂಬಲ್' ಚಿತ್ರದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ಡಿಕೆ ರವಿ ತಾಯಿ ಗೌರಮ್ಮದೂರು ಸಲ್ಲಿಸಿದ್ದಾರೆ. "ಇತ್ತೀಚಿಗೆ ಬಿಡುಗಡೆಯಾದ ಚಂಬಲ್ ಟ್ರೇಲರ್‌ನಲ್ಲಿ ನನ್ನ ಮಗನ ಕಥೆ, ಸಂಭಾಷಣೆ ಹಾಗೂ ಜೀವನ ಶೈಲಿಯನ್ನು ನನ್ನ ಅನುಮತಿಯಿಲ್ಲದೇ ಚಿತ್ರೀಕರಣ ಮಾಡಲಾಗಿದೆ. ಆದಕಾರಣ, ಈ ಚಿತ್ರ ಬಿಡಗಡೆಗೂ ಮುನ್ನ ಒಮ್ಮೆ ಚಿತ್ರವನ್ನು ವೀಕ್ಷಿಸಲು ಇಚ್ಛಿಸುತ್ತೇನೆ" ಎಂದು ಗೌರಮ್ಮನವರು ಹೇಳಿದ್ದಾರೆ.

ಕಳೆದ ತಿಂಗಳು, ಜನವರಿ 31 2019ಕ್ಕೆ, ನೀನಾಸಂ ಸತೀಶ್ ಹಾಗೂ ಸೋನು ಗೌಡ ಅಭಿನಯದ 'ಚಂಬಲ್' ಕನ್ನಡ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಜೇಕಬ್ ವರ್ಗೀಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 'ಚಂಬಲ್' ಟ್ರೇಲರ್ ಬಿಡುಗಡೆ ಬಳಿಕ ಅದನ್ನು ಹಲವಾರು ಜನ ಸಹಜವಾಗಿ ವೀಕ್ಷಿಸಿದ್ದಾರೆ. ರಿಲೀಸ್ ಆಗಿರುವ 'ಟ್ರೇಲರ್' ನೋಡಿದರೆ 'ಚಂಬಲ್ 'ಚಿತ್ರಕಥೆ ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ದಕ್ಷ ಅಧಿಕಾರಿ ಡಿಕೆ ರವಿ ಅವರದು ಎಂಬುದು ಹಲವು ಜನರ ಅಭಿಪ್ರಾಯವಾಗಿದೆ. ಈಗ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಫಿಲಂ ಛೇಂಬರ್ ಮೆಟ್ಟಿಲೇರಿದ್ದಾರೆ.

ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿರುವ ಗೌರಮ್ಮ "ಇತ್ತೀಚಿಗೆ ಬಿಡುಗಡೆಯಾದ 'ಚಂಬಲ್' ಟ್ರೇಲರ್‌ನಲ್ಲಿ ನನ್ನ ಮಗನ ಕಥೆ, ಸಂಭಾಷಣೆ ಹಾಗೂ ಜೀವನ ಶೈಲಿಯನ್ನು ನನ್ನ ಅನುಮತಿಯಿಲ್ಲದೇ ಚಿತ್ರೀಕರಣ ಮಾಡಲಾಗಿದೆ. ಆದಕಾರಣ, ಈ ಚಿತ್ರ ಬಿಡಗಡೆಗೂ ಮುನ್ನ ಒಮ್ಮೆ ಚಿತ್ರವನ್ನು ವೀಕ್ಷಿಸಲು ಇಚ್ಛಿಸುತ್ತೇನೆ. ಒಮ್ಮೆ ಚಿತ್ರದಲ್ಲಿ ಸತ್ಯಕ್ಕೆ ದೂರವಾದ ಅಂಶಗಳಿದ್ದಲ್ಲಿ ಚಿತ್ರ ಪ್ರದರ್ಶನಕ್ಕೆ ತಡೆ ತರುವ ಬಗ್ಗೆ ಹಾಗೂ ಚಿತ್ರ ಸರಿ ಇರದಿದ್ದಲ್ಲಿ ಚಿತ್ರದ ನಿರ್ಮಾಪಕರಾದ ಎನ್ ದಿನೇಸ್ ರಾಜ್‌ಕುಮಾರ್ ಮತ್ತು ಮ್ಯಾತ್ಯು ಮತ್ತು ನಿರ್ದೇಶಕರಾದ ಜೇಕಬ್ ವರ್ಗೀಸ್ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ನನ್ನ ಮಗ ಡಿಕೆ ರವಿ ಕುಟುಂಬಸ್ಥರಿಗೆ ರಾಯಲ್ಟಿ ಪಾವತಿಸಬೇಕಾಗಿ ಕೋರುತ್ತಿದ್ದೇನೆ" ಎಂದು ಪತ್ರ ಬರೆದಿದ್ದಾರೆ.

ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಡಿಕೆ ರವಿ ಅವರು ಅಲ್ಲಿ ಕರ್ತವ್ಯದಲ್ಲಿದ್ದಾಗ ಅಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಕಷ್ಟು ಶ್ರಮಿಸಿದ್ದರು. ಆದರೆ, ಅವರ ಪ್ರಾಮಾಣಿಕ ಕರ್ತವ್ಯಕ್ಕೆ ಸಿಕ್ಕ ಬೆಲೆ ಏನು ಎಂಬುದು ಇಡೀ ಕರ್ನಾಟಕಕ್ಕೇ ಗೊತ್ತಿದೆ. ಇಂಥ ದಕ್ಷ ಅಧಿಕಾರಿಯ ಕಥೆಯೇ ಚಂಬಲ್ ಎನ್ನಲಾಗುತ್ತಿದೆ. ಈಗ ಆಗಿರುವ ಬೆಳವಣಿಗೆಯಿಂದ ಚಿತ್ರ ಪ್ರೇಮಿಗಳಿಗೆ ಭಾರೀ ಆತಂಕ ಎದುರಾಗಿದೆ. ಏಕೆಂದರೆ, ಡಿಕೆ ರವಿ ಅವರ 'ರಿಯಲ್ ಕಥೆ' ತುಂಬಾ ಜನ ಅವರ ಫ್ಯಾನ್ಸ್'ಗಳಿಗೆ ಗೊತ್ತಿಲ್ಲ. ಆ ಬಗ್ಗೆ ತುಂಬಾ ಜನರಿಗೆ ತೀವ್ರ ಕುತೂಹಲವಿದೆ. ಅದನ್ನು ಸಿನಿಮಾ ಮೂಲಕ ನೋಡಬಹುದು ಎಂದುಕೊಂಡಿದ್ದ ತುಂಬಾ ಜನರು ಈಗ ಚಿತ್ರ ಬಿಡುಗಡೆ ಆಗುತ್ತೋ ಇಲ್ಲವೋ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.

'ಚಂಬಲ್' ಚಿತ್ರದಲ್ಲಿ ನಾಯಕ ನೀನಾಸಂ ಸತೀಶ್ 'ಐಎಸ್ ಅಧಿಕಾರಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಚಂಬಲ್' ಚಿತ್ರದ ಚಿತ್ರಕಥೆಗೆ ದಕ್ಷ ಪೊಲೀಸ್ ಅಧಿಕಾರಿಗಳೇ ಸ್ಪೂರ್ತಿ" ಎಂಬುದು ಚಿತ್ರತಂಡದಿಂದಲೇ ಬಂದಿರುವ ಮಾಹಿತಿ. ಹೀಗಿರುವಾಗ ಗೌರಮ್ಮ ಅವರು ಫಿಲಂ ಚೇಂಬರಿಗೆ ಕೊಟ್ಟಿರುವ ದೂರು ತುಂಬಾ ಪ್ರಾಮುಖ್ಯತೆ ಪಡೆಯಲಿದೆ. ಇನ್ನೇನು ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗಿದ್ದ 'ಚಂಬಲ್' ಚಿತ್ರದ ಬಗ್ಗೆ ಈಗ ಪ್ರೇಕ್ಷಕರಿಗೆ ತುಂಬಾ ಆತಂಕ ಶುರುವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌