ಆ್ಯಪ್ನಗರ

ಪ್ರೇಕ್ಷಕರ ಪ್ರತಿಕ್ರಿಯೆ ನಿರೀಕ್ಷೆಯಲ್ಲಿ 'ಕದ್ದು ಮುಚ್ಚಿ' ವಿಜಯ್ ಸೂರ್ಯ

"ಇಂದು ಕನ್ನಡ ಚಿತ್ರಗಳಲ್ಲಿ ಉತ್ತಮ ಜೀವನಕ್ಕೆ ಬೇಕಾದ ಮೌಲ್ಯಗಳು ಕಡಿಮೆಯಾಗುತ್ತಿವೆ. ಇಂಥ ಸಮಯದಲ್ಲಿ ಬಂದಿರುವ ಉತ್ತಮ ಚಿತ್ರಕ್ಕೆ ನಾವೆಲ್ಲರೈ ಸಾಥ್ ನೀಡಬೇಕು. ನಾನು ಪೋಸ್ಟ್ ಪ್ರೊಡಕ್ಷನ್ ಟೈಮ್‌ನಲ್ಲೇ ಚಿತ್ರವನ್ನು ನೋಡಿದ್ದೇನೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ" ಎಂದಿದ್ದಾರೆ ಹಿರಿ ಸಂಗೀತ ನಿರ್ದೇಶಕ ಹಂಸಲೇಖಾ.

Vijaya Karnataka Web 22 Feb 2019, 10:14 am
ಕಿರುತೆರೆ ಸ್ಟಾರ್ ನಟ ವಿಜಯ್ ಸೂರ್ಯ ಮತ್ತು ಮೇಘಶ್ರೀ ಜೋಡಿ ಅಭಿನಯಿಸಿರುವ 'ಕದ್ದು ಮುಚ್ಚಿ' ಚಿತ್ರವು ಇಂದು, ಫೆಬ್ರವರಿ 22, 2019ರಂದು ಕರ್ನಾಟಕದ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು 'ಸದಭಿರುಚಿ ಚಿತ್ರಗಳ ಸಾಲಿಗೆ ಸೇರಲಿದೆ' ಎಂದು ಈ ಚಿತ್ರದ ಸಂಗೀತ ನಿರ್ದೇಶಕ ಹಂಸಲೇಖಾ ಅವರು ಹೇಳಿದ್ದಾರೆ. ಇದೊಂದು ಉತ್ತಮ ಸಂದೇಶವಿರುವ ಚಿತ್ರ ಎಂಬ ಕಾರಣಕ್ಕೇ ತಾವು ಈ ಚಿತ್ರದ ಬಗ್ಗೆ ಮಾತನಾಡುತ್ತಿರುವುದಾಗಿ ಹಿರಿಯ ಗೀತ ಸಾಹಿತಿ ಮತ್ತು ಸಂಗೀತ ನಿರ್ದೇಶಕ ಹಂಸಲೇಖಾ ಹೇಳಿದ್ದಾರೆ.
Vijaya Karnataka Web vijaysuray22


"ಇಂದು ಕನ್ನಡ ಚಿತ್ರಗಳಲ್ಲಿ ಉತ್ತಮ ಜೀವನಕ್ಕೆ ಬೇಕಾದ ಮೌಲ್ಯಗಳು ಕಡಿಮೆಯಾಗುತ್ತಿವೆ. ಇಂಥ ಸಮಯದಲ್ಲಿ ಬಂದಿರುವ ಉತ್ತಮ ಚಿತ್ರಕ್ಕೆ ನಾವೆಲ್ಲರೈ ಸಾಥ್ ನೀಡಬೇಕು. ನಾನು ಪೋಸ್ಟ್ ಪ್ರೊಡಕ್ಷನ್ ಟೈಮ್‌ನಲ್ಲೇ ಚಿತ್ರವನ್ನು ನೋಡಿದ್ದೇನೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಚಿತ್ರವನ್ನು ಮಾಡಿರುವುದು ಹೊಸಬರ ತಂಡವಾದರೂ ಅನುಭವಿಗಳಿಂತೆ ಮಾಡಿದ್ದಾರೆ. ನಿಜವಾಗಿಯೂ 'ಕದ್ದು ಮುಚ್ಚಿ' ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಹಾಗೂ ನೋಡಬೇಕಾದ ಚಿತ್ರ" ಎಂದಿದ್ದಾರೆ ಹಂಸಲೇಖಾ.
ಕದ್ದು ಮುಚ್ಚಿ ಚಿತ್ರಕ್ಕೆ ಹಂಸಲೇಖಾ ಅವರು ಈ ಚಿತ್ರಕ್ಕೆ 6 ಹಾಡುಗಳನ್ನು ರಚಿಸಿ ಸಂಗೀತ ನೀಡಿದ್ದಾರೆ. ಹಂಸಲೇಖಾ ಅವರ ಶಿಷ್ಯರಾದ ವಸಂತ್ ರಾಜ್ ಈ ಕದ್ದು ಮುಚ್ಚಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರವನ್ನು ಶಿವಮೊಗ್ಗದ ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು ನಿಸರ್ಗದ ಸೌಂದರ್ಯ ಹಾಗೂ ರಮಣೀಯ ದೃಶ್ಯಗಳನ್ನು ಈ ಚಿತ್ರದಲ್ಲಿ ನೋಡಿ ಖುಷಿಪಡಬಹುದಾಗಿದೆ.

ಕಿರುತೆರೆ ಅತ್ಯಂತ ಬೇಡಿಕೆ ನಟರಾದ ವಿಜಯ್ ಸೂರ್ಯ ನಾಯಕರಾಗಿರುವ ಈ ಚಿತ್ರಕ್ಕೆ ಮೇಘಶ್ರೀ ನಾಯಕಿ. ಹಿರಿಯ ನಟರಾದ ಉಮೇಶ್, ಅಶ್ವಿನಿ ಗೌಡ ಮುಖ್ಯ ಪೋಷಕ ಪಾತ್ರದಲ್ಲಿದ್ದಾರೆ. ಹಂಸಲೇಖಾ ಅವರ ಗರಡಿಯಲ್ಲಿ ಮೂಡಿ ಬಂದಿರುವ ಹಾಡುಗಳು ಸಖತ್ ಮೋಡಿ ಮಾಡುವಂತಿದ್ದು ಇಂದು ಬಿಡುಗಡೆಯಾಗಿರುವ 'ಕದ್ದು ಮುಚ್ಚಿ' ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದಷ್ಟೇ ಕಾದು ನೋಡಬೇಕಾದ ಸಂಗತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌