ಆ್ಯಪ್ನಗರ

ರಿಲೀಸ್ ಆಯ್ತು ನೋಡಿ 'ನಿಖಿಲ್ ಎಲ್ಲಿದ್ದಿಯಪ್ಪಾ' ಪೋಸ್ಟರ್

ಸಪ್ತಗಿರಿ ಕ್ರಿಯೇಷನ್ಸ್ ನಿರ್ಮಾಣದ ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಕೃಷ್ಣೇಗೌಡ ಹೊತ್ತಿದ್ದಾರೆ. ಅಶೋಕ್ ಕೆ ಕಡಬ ನಿರ್ದೇಶನದ ಸಿನಿಮಾ ಪೋಸ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ಗಮನಸೆಳೆದಿದೆ.

Vijaya Karnataka Web 15 May 2019, 5:36 pm
'ನಿಖಿಲ್‌ ಎಲ್ಲಿದ್ದೀಯಪ್ಪಾ?' ಹೆಸರಿನಲ್ಲಿ ನಾನೇ ಸಿನಿಮಾ ಮಾಡ್ತೀನಿ ಎಂದು ಮಂಡ್ಯ ಲೋಕಸಭಾ ಚುನಾವಣೆ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ತಮಾಷೆ ಮಾಡಿದ್ದರು. ಈಗ ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.
Vijaya Karnataka Web nikhil-elliddiyappa


ಸಪ್ತಗಿರಿ ಕ್ರಿಯೇಷನ್ಸ್ ನಿರ್ಮಾಣದ ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಕೃಷ್ಣೇಗೌಡ ಹೊತ್ತಿದ್ದಾರೆ. ಅಶೋಕ್ ಕೆ ಕಡಬ ನಿರ್ದೇಶನದ ಸಿನಿಮಾ ಪೋಸ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ಗಮನಸೆಳೆದಿದೆ.

ಮೇಲ್ಭಾಗದಲ್ಲಿ ಪಾರ್ಲಿಮೆಂಟ್ ಭವನ, ಕೆಳಗೆ ಇಂಡಿಯಾ ಗೇಟ್ ಮುಂದೆ ನಡೆದು ಹೋಗುತ್ತಿರು ಹೀರೋ ಇರುವ ಪೋಸ್ಟರ್ ಹರಿದಾಡುತ್ತಿದೆ. ಈಗಾಗಲೆ ನಿಖಿಲ್ ಎಲ್ಲಿದ್ದೀಯಪ್ಪಾ, ಜೋಡೆತ್ತು ಮತ್ತು ಕಳ್ಳೆತ್ತು ಸಿನಿಮಾಗಳಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಪೋಸ್ಟರ್ ರಿಲೀಸ್ ಆಗಿರುವುದು ವಿಶೇಷ.

ಇತ್ತೀಚೆಗೆ ಕೆ.ಆರ್‌.ಪೇಟೆ ತಾಲೂಕಿನಲ್ಲಿ ನಡೆದ ಜೆಡಿಎಸ್‌ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ''ನಿಖಿಲ್‌ ಎಲ್ಲಿದ್ದೀಯಪ್ಪಾ ಟೈಟಲ್‌ಗೆ ಭಾರೀ ಬೇಡಿಕೆ ಇದೆ. ಹೀಗಾಗಿ ಈ ಟೈಟಲ್‌ ಅನ್ನು ಬೇರೆ ಯಾರಿಗೂ ಕೊಡಬೇಡಿ ಎಂದು ಸಿನಿಮಾ ಛೇಂಬರ್‌ಗೆ ತಿಳಿಸಿದ್ದೇನೆ,''ಎನ್ನುತ್ತಿದ್ದಂತೆ, ಸಚಿವ ಸಿ.ಎಸ್‌.ಪುಟ್ಟರಾಜು ನಿಖಿಲ್‌ ಮಾತಿಗೆ ಧ್ವನಿಗೂಡಿಸಿ ನಾನೇ ನಿರ್ಮಾಪಕನಾಗುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿದರು.

ಸ್ಯಾಂಡಲ್‍ವುಡ್‌ನಲ್ಲಿ ಈ ಹಿಂದೆಯೂ ಇದೇ ರೀತಿ ಸಾಕಷ್ಟು ಸಿನಿಮಾಗಳು ಶೀರ್ಷಿಕೆಗಷ್ಟೇ ಸೀಮಿತವಾಗಿವೆ. ಅವುಗಳಲ್ಲಿ ಮುಖ್ಯವಾಗಿ ಡಿ.ಕೆ ರವಿ
, ರೂಪಾ ಐಪಿಎಸ್ , ಮಲ್ಲಿಕಾರ್ಜುನ ಬಂಡೆ, ಬೆಂಗಳೂರು ಬಾಂಬ್ ಬ್ಲಾಸ್ಟ್, ಮೀಟೂ ಟು ಮುಂತಾದ ಸಿನಿಮಾಗಳು ಸೆಟ್ಟೇರಲೇ ಇಲ್ಲ ಎಂಬುದು ಗಮನಾರ್ಹ ಸಂಗತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌