ಆ್ಯಪ್ನಗರ

ಮಾರ್ಚ್ 29ರಂದು ತೆರೆಯ ಮೇಲೆ ಸದ್ದು ಮಾಡಲಿರುವ ಪಂಚತಂತ್ರ

ಕನ್ನಡದ ಮೊಟ್ಟ ಮೊದಲ ಕಾರ್‌ ರೇಸ್‌ ಸಿನಿಮಾ ಎಂಬ ಖ್ಯಾತಿ ಹೊಂದಿರುವ ಪಂಚತಂತ್ರ ಚಿತ್ರವು ಮಕ್ಕಳಿಂದು ಹಿಡಿದು ಮುದುಕರವವರೆಗೂ ತಲುಪುವ ಸಿನಿಮಾ ಎನ್ನಲಾಗುತ್ತಿದೆ. ಈ ಸನಿಮಾದ ಕಥೆಯೇ 'ವಯೋವೃದ್ಧರು ಮತ್ತು ಯುವಕರ ನಡುವೆ ನಡೆಯುವ ಜಿದ್ದಾ ಜಿದ್ದಿ'ಯೇ ಆಗಿದೆ ಎನ್ನಲಾಗಿದೆ.

Vijaya Karnataka Web 4 Mar 2019, 3:37 pm
ಯೋಗರಾಜ್‌ ಭಟ್‌ ನಿರ್ದೇಶನದ 'ಪಂಚತಂತ್ರ' ಸಿನಿಮಾ ಮಾರ್ಚ್‌ 29, 2019ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ. ಸೋನಲ್‌, ವಿಹಾನ್‌ ಗೌಡ, ರಂಗಾಯಣ ರಘು ಮಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು ಈಗಾಗಲೇ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ನಟ ಗಣೇಶ್ ಹಾಗೂ ಯೋಗರಾಜ್ ಭಟ್ ಸಂಗಮದ 'ಮುಗುಳುನಗೆ' ಚಿತ್ರದ ನಂತರ ಭಟ್ಟರ ಯಾವುದೇ ಚಿತ್ರವು ತರೆಗೆ ಬಂದಿಲ್ಲ. ಹೀಗಾಗಿ, ಸಹಜವಾಗಿಯೇ ಯೋಗರಾಜ್ ಭಟ್ಟರ ಅಭಿಮಾನಿಗಳು ಬಿಡುಗಡೆಯಾಗಲಿರುವ 'ಪಂಚತಂತ್ರ' ಚಿತ್ರವನ್ನು ಕಣ್ಣಿನಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ.
Vijaya Karnataka Web panchatantra27


ಕನ್ನಡದ ಮೊಟ್ಟ ಮೊದಲ ಕಾರ್‌ ರೇಸ್‌ ಸಿನಿಮಾ ಎಂಬ ಖ್ಯಾತಿ ಹೊಂದಿರುವ 'ಪಂಚತಂತ್ರ' ಚಿತ್ರವು ಮಕ್ಕಳಿಂದು ಹಿಡಿದು ಮುದುಕರವವರೆಗೂ ತಲುಪುವ ಸಿನಿಮಾ ಎನ್ನಲಾಗುತ್ತಿದೆ. ಅಚ್ಚರಿ ಎಂಬಂತೆ, ಈ ಸನಿಮಾದ ಕಥೆಯೇ 'ವಯೋವೃದ್ಧರು ಮತ್ತು ಯುವಕರ ನಡುವೆ ನಡೆಯುವ ಜಿದ್ದಾ ಜಿದ್ದಿ'ಯೇ ಆಗಿದೆ ಎನ್ನಲಾಗಿದೆ. 'ಪಂಚತಂತ್ರ' ಚಿತ್ರದ ಕಥೆಯನ್ನು 'ಟಗರು' ಖ್ಯಾತಿಯ ಬರಹಗಾರ 'ಮಾಸ್ತಿ' ಮತ್ತು ರೈಟರ್ ಕಾಂತರಾಜ್ ಬರೆದಿದ್ದಾರೆ.

ವಿ ಹರಿಕೃಷ್ಣ ಮತ್ತು ಯೋಗರಾಜ್‌ ಭಟ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ 'ಪಂಚತಂತ್ರ' ಚಿತ್ರದ ಹಾಡುಗಳು ಸೋಷಿಯಲ್‌ ಮೀಡಿಯಾದಲ್ಲಿ ಈಗಾಗಲೇ ವೈರಲ್‌ ಆಗಿವೆ. ಸ್ವತಃ ಯೋಗರಾಜ್ ಭಟ್ ಬರೆದು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿರುವ 'ಶ್ರಂಗಾರದ ಹೊಂಗೇಮರ ಹೂ ಬಿಟ್ಟಿದೆ..' ಹಾಡು ಫುಲ್ ಕರ್ನಾಟಕವನ್ನು ಕುಣಿಸತೊಡಗಿದೆ ಎಂದರೆ ಅತಿಶಯೋಕ್ತಿಯಲ್ಲ. ಹೇಮಂತ್‌ ಪರಾಡ್ಕರ್‌ ಮತ್ತು ಹರಿಪ್ರಸಾದ್‌ ಜಯಣ್ಣ 'ಪಂಚತಂತ್ರ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಸಿನಿಪ್ರೇಕ್ಷಕರು ಸಖತ್ ಖುಷಿಯಾಗಿದ್ದಾರೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌