ಆ್ಯಪ್ನಗರ

ಸಿನಿಮಾ ಹೆಸರು ರಣಕಣಕ, ಇದಕ್ಕೆ ವಿಶೇಷ ಅರ್ಥವೂ ಇದೆಯಂತೆ

ಸುಧಾಕರ ಬನ್ನಂಜೆ ನಿರ್ದೇಶನದ ಹೊಸ ಚಿತ್ರದ ಟೈಟಲ್‌ ಕುತೂಹಲ ಮೂಡಿಸುತ್ತಿದೆ. ರಣರಣಕ ಎಂಬ ಕ್ಯಾಚಿ ಶೀರ್ಷಿಕೆ ಇಟ್ಟಿರುವ ನಿರ್ದೇಶಕರು ಅದರ ಅರ್ಥವನ್ನೂ ವಿವರಿಸಿದ್ದಾರೆ.

Vijaya Karnataka 3 Aug 2018, 12:00 pm
ಕನ್ನಡದಲ್ಲಿ ಕ್ಯಾಚಿ ಶೀರ್ಷಿಕೆಗಳು ಸದ್ಯ ಸದ್ದು ಮಾಡುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ರಣರಣಕ. ಸುಧಾಕರ ಬನ್ನಂಜೆ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಪ್ರೇಮಕಥೆಯಿದ್ದು, ಪ್ರೇಮಿಗಳಿಬ್ಬರ ವೇದನೆಯನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದಾರಂತೆ ನಿರ್ದೇಶಕರು.
Vijaya Karnataka Web ranakanaka


ತಮ್ಮ ಚಿತ್ರಕ್ಕೆ ಇಂಥದ್ದೊಂದು ಶೀರ್ಷಿಕೆ ಇಟ್ಟಿದ್ದಕ್ಕೆ ನಿರ್ದೇಶಕರು ಹೇಳುವುದು ಹೀಗೆ, 'ರಣಕಣಕ ಪದಕ್ಕೆ ನಿಘಂಟಿನಲ್ಲಿ ವಿಶೇಷ ಅರ್ಥವಿದೆ. ಅತಿಯಾದ ಕಾತುರವನ್ನು ಹೀಗೆ ಕರೆಯುತ್ತಾರೆ. ಅಲ್ಲದೇ, ಪ್ರೀತಿಸಿದವಳು ಕೈಕೊಟ್ಟಾಗ ಆ ಪ್ರೇಮಿಗಳು ಅನುಭವಿಸುವ ವೇದನೆಗೂ ಕೂಡ ಇದೇ ಹೆಸರಿನಲ್ಲಿ ಕರೆಯುತ್ತಾರೆ. ಸಿನಿಮಾದ ಕಥೆಯಲ್ಲೂ ಈ ವೇದನೆಯಿದೆ. ಹಾಗಾಗಿ ಇಂಥದ್ದೊಂದು ಶೀರ್ಷಿಕೆ ಇಡಬೇಕಾಯಿತು' ಅಂತಾರೆ ನಿರ್ದೇಶಕರು.

ಹುಡುಗನೊಬ್ಬನ ಬದುಕಿನಲ್ಲಿ ಹುಡುಗಿ ಪ್ರವೇಶ ಮಾಡುತ್ತಾಳೆ. ಅಲ್ಲಿಂದ ಆತನ ಜೀವನ ಬದಲಾಗುತ್ತದೆ. ಆಕೆಯ ಸಹಕಾರದಿಂದ ಇವನು ಏನೆಲ್ಲ ಕೆಲಸಗಳನ್ನು ಮಾಡುತ್ತಾನೆ ಎನ್ನುವ ಕಥೆ ಸಿನಿಮಾದಲ್ಲಿದೆ. ಬಹುತೇಕ ಹೊಸಬರೇ ಚಿತ್ರದಲ್ಲಿದ್ದಾರೆ. ಸಾವಿರದ ಐನೂರು ಕಲಾವಿದರನ್ನು ಆಡಿಷನ್‌ ಮಾಡಿ ಪ್ರಮುಖ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು.

ಮಂಡ್ಯ ಮೂಲದ ನಟ ಶಶಿಕಾಂತ್‌ ನಾಯಕನಾಗಿ ನಟಿಸಿದ್ದರೆ, ತುಮಕೂರಿನ ಹುಡುಗಿ ದಿವ್ಯಾ ನಾಯಕಿ. ಹಳಿಯಿಂದ ಪಟ್ಟಣಕ್ಕೆ ಓದಲು ಬರುವ ವಿದ್ಯಾರ್ಥಿನಿಯಾಗಿ ದಿವ್ಯಾ ಕಾಣಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌