ಆ್ಯಪ್ನಗರ

ಶೀಘ್ರದಲ್ಲೇ ತೆರೆಗೆ ಸುನೀಲ್ ಕುಮಾರ್ ದೇಸಾಯಿ 'ಉದ್ಘರ್ಷ'

ಸುನೀಲ್‌ ಕುಮಾರ್‌ ದೇಸಾಯಿ ಅವರ 'ಉದ್ಘರ್ಷ' ಸಿನಿಮಾಗೆ ಸೆನ್ಸಾರ್‌ ಮಂಡಳಿಯು ಎ ಪ್ರಮಾಣ ಪತ್ರ ನೀಡಿದ್ದು, ಇದೇ ತಿಂಗಳಲ್ಲೇ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಯಿದೆ.

Vijaya Karnataka 28 Feb 2019, 7:40 pm
ದಕ್ಷಿಣ ಭಾರತದ ತಾರೆಯರು ನಟಿಸಿರುವ 'ಉದ್ಘರ್ಷ' ಸಿನಿಮಾ ಇದೇ ತಿಂಗಳಲ್ಲೇ ಬಿಡುಗಡೆ ಆಗಲಿದೆ. ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯು ಈಗಾಗಲೇ ಎ ಪ್ರಮಾಣ ಪತ್ರ ನೀಡಿದೆ. ಇದೊಂದು ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯ ಚಿತ್ರವಾಗಿದ್ದು, ನಾಲ್ಕು ಭಾಷೆಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ನಿರ್ದೇಶಕರು.
Vijaya Karnataka Web udhgarsha


'ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಕಥಾವಸ್ತು ಹೊಂದಿರುವ ಸಿನಿಮಾ ಇದಾಗಿದ್ದರೂ, ಪಕ್ಕಾ ಕಮರ್ಷಿಯಲ್‌ ಆಗಿ ಚಿತ್ರ ಮಾಡಿದ್ದೇವೆ. ಪ್ರೀತಿ, ದುಃಖ, ವಿರಹ ಹೀಗೆ ಅನೇಕ ಅಂಶಗಳನ್ನು ಸೇರಿಸಿಕೊಂಡು ಮಾಡಿರುವ ಸಿನಿಮಾವಿದು. ಕಥೆಗೆ ತಕ್ಕಂತೆ ಪಾತ್ರಧಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ' ಎಂದಿದ್ದಾರೆ ನಿರ್ದೇಶಕರು.

ಬಾಲಿವುಡ್‌ನ ನಟ ಮತ್ತು ಬಾಡಿಬಿಲ್ಡ್‌ನಲ್ಲಿ ಬಂಗಾರದ ಪದಕ ಪಡೆದಿರುವ ಠಾಕೂರ್‌ ಅನೂಪ್‌ ಸಿಂಗ್‌ ಸಿನಿಮಾದ ನಾಯಕ. ಕಬಾಲಿ ಖ್ಯಾತಿಯ ನಟಿ ಧನಿಷ್ಕಾ ನಾಯಕಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಬಾಲಿವುಡ್‌ ಖಳನಟ ಕಬೀರ್‌ ಸಿಂಗ್‌ ದುಹಾನ್‌, ದಕ್ಷಿಣ ಭಾರತದ ಖ್ಯಾತಿಯ ಪ್ರಭಾಕರ್‌, ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಹೀಗೆ ಅನೇಕ ತಾರೆಯರು ನಟಿಸಿದ್ದಾರೆ.

ಅನಿವಾರ್ಯ ಕಾರಣದಿಂದ ಜೋಡಿಯೊಂದು ಹಠಾತ್ತಾಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಅದರಿಂದ ಅದು ಹೇಗೆ ಪಾರಾಗುತ್ತದೆ ಅನ್ನುವುದು ಸಿನಿಮಾದ ಒನ್‌ಲೈನ್‌ ಸ್ಟೋರಿ. ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂನಲ್ಲಿ ಈ ಸಿನಿಮಾವನ್ನು ಏಕಕಾಲಕ್ಕೆ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಆರ್ ದೇವರಾಜ್ ತಿಳಿಸಿದ್ದಾರೆ.

ಕನ್ನಡದ ಸಿನಿಮಾವನ್ನು ಹೆಮ್ಮೆಯಿಂದ ಬೇರೆ ಭಾಷೆಯ ನೋಡುಗರಿಗೆ ತೋರಿಸಬೇಕು ಎಂಬ ಉದ್ದೇಶವೇ ಹಲವು ಭಾಷೆಗಳಲ್ಲಿ ನಿರ್ಮಾಣ ಮಾಡಲು ಕಾರಣ. ಇಂಥದ್ದೊಂದು ಸಿನಿಮಾ ನನ್ನ ಬ್ಯಾನರ್‌ನಲ್ಲಿ ಮೂಡಿ ಬಂದಿದ್ದಕ್ಕೆ ಹೆಮ್ಮೆ ಪಡುತ್ತೇನೆ' ಎಂದಿದ್ದಾರೆ ನಿರ್ಮಾಪಕರು. ಡಿ ಕ್ರಿಯೇಷನ್‌ ಲಾಂಛನದಲ್ಲಿ ಈ ಸಿನಿಮಾ ತಯಾರಾಗಿದ್ದು, ಧನ್ಸಿಕಾ, ಠಾಕೂರ್‌ ಅನೂಪ್‌ ಸಿಂಗ್‌ ಮೊದಲಾದವರ ತಾರಾಗಣವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌