ಆ್ಯಪ್ನಗರ

ಕನ್ನಡ ಸಿನಿಮಾ ಯಾವ ಬಾಲಿವುಡ್‌ ಸಿನಿಮಾಗೆ ಕಡಿಮೆ ಇಲ್ಲ: ಶಿವಣ್ಣ

ಟ್ರೇಲರ್‌ ಬಹಳ ಚೆನ್ನಾಗಿದೆ. ಈ ಮಟ್ಟದಲ್ಲಿಇರುತ್ತೆ ಎಂದುಕೊಂಡಿರಲಿಲ್ಲ. ಡಿಫರೆಂಟ್‌ ಸ್ಟೋರಿ ಇದೆ ಅನ್ನೋದು ಗೊತ್ತಾಗ್ತಿದೆ. ಸಿನಿಮಾ ಬಗ್ಗೆ ನಂಗೆ ಕುತೂಹಲ ಹೆಚ್ಚಾಗಿದೆ ಎಂದಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್‌.

Vijaya Karnataka 3 Oct 2019, 6:07 pm
ಸಿಪಾಯಿ ಹೀರೊ ಸಿದ್ದಾರ್ಥ್ ಮಹೇಶ್‌ ಮತ್ತು ಶ್ರೀನಗರ ಕಿಟ್ಟಿ ನಟನೆಯ ಗರುಡ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿದ ನಟ ಶಿವರಾಜ್‌ಕುಮಾರ್‌ ಟ್ರೇಲರ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುಟ್ಯೂಬ್‌ನಲ್ಲಿ ಟ್ರೇಲರ್‌ ಸದ್ದು ಮಾಡುತ್ತಿದೆ. ನಂದಕುಮಾರ್‌ ನಿರ್ದೇಶನದ ಚಿತ್ರ ಇದು.
Vijaya Karnataka Web shiva-rajkumar


ಟ್ರೇಲರ್‌ ನೋಡಿದ ಶಿವಣ್ಣ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 'ನಾನು ಟ್ರೇಲರ್‌ ಈ ಲೆವೆಲ್‌ಗೆ ಇರುತ್ತೆ ಎಂದುಕೊಂಡಿರಲಿಲ್ಲ. ಬಹಳ ಚೆನ್ನಾಗಿದೆ. ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ನಮ್ಮ ಕನ್ನಡ ಸಿನಿಮಾಗಳು ಯಾವ ಬಾಲಿವುಡ್‌ಗೂ ಕಡಿಮೆ ಇಲ್ಲ. ಸಿದ್ದಾರ್ಥ್ ಮತ್ತು ಶ್ರೀನಗರ ಕಿಟ್ಟಿ ಬಹಳ ಡಿಫರೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಕಿಟ್ಟಿ ಬಹಳ ಫಿಟ್‌ ಅಂಡ್‌ ಫೈನ್‌ ಆಗಿ ಕಾಣಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮತ್ತೆ ಅವರು ಬ್ಯುಸಿ ಆಗ್ಬೇಕು ಅನ್ನೋದು ನನ್ನ ಬಯಕೆ. ಸಿದ್ದಾರ್ಥ್ ಗೆಟಪ್‌ ಕೂಡಾ ' ಎಂದಿದ್ದಾರೆ. ಎಲ್ಲರ ಜೀವಕ್ಕೂ ಒಂದೇ ಬೆಲೆ ಎಂದ ಶಿವರಾಜ್‌ ಕುಮಾರ್‌

'ಸಿನಿಮಾ ಬಹಳ ಸ್ಟೈಲಿಂಗ್‌ ಆಗಿದೆ. ನಟರ ಅಪಿಯರೆನ್ಸ್‌ ಕೂಡಾ. ಮೊದಲ ದಿನವೇ ಈ ಸಿನಿಮಾ ನೋಡುತ್ತೇನೆ. ಧನು ಕುಮಾರ್‌ಗೆ ಇದು ಮೊದಲ ಚಿತ್ರ. ಆದರೆ, ನಾನು ಭಜರಂಗಿ ಸಮಯದಿಂದ ಅವರನ್ನು ಬಲ್ಲೆ. ಡಾನ್ಸ್‌ ಮಾಸ್ಟರ್‌ ಆಗಿ ಕೆಲಸ ಮಾಡಿದ್ದಾರೆ. ಹಲವು ವರ್ಷಗಳ ಅವರ ಅನುಭವ ಈ ಟ್ರೇಲರ್‌ನಲ್ಲಿ ಕಾಣ್ತಿದೆ' ಎಂದಿದ್ದಾರೆ ಶಿವರಾಜ್‌ಕುಮಾರ್‌.

ಸಿಪಾಯಿ ಚಿತ್ರದ ನಂತರ ಸಿದ್ದಾರ್ಥ್ ಹೀರೊ ಆಗಿ ನಟಿಸಿರುವ ಚಿತ್ರ ಗರುಡ. ಇದರಲ್ಲಿ ಅವರು ನಾಲ್ಕು ಶೇಡ್‌ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಟೆರರಿಸಂ ಮತ್ತು ಅಂಡರ್‌ ವರ್ಲ್ಡ್ ಕತೆ ಚಿತ್ರದಲ್ಲಿದೆ. ಟೆರರಿಸ್ಟ್‌ ಮತ್ತು ನೇವಿ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೆರಡು ಗೆಟಪ್‌ಗಳನ್ನು ಇನ್ನೂ ರಿವೀಲ್‌ ಮಾಡಿಲ್ಲ. ಡಿಫರೆಂಟ್‌ ಸ್ಟೋರಿ ಇರುವ ಚಿತ್ರ ಎನ್ನುವುದನ್ನು ಟ್ರೇಲರ್‌ ಹೇಳುತ್ತಿದೆ. ಛಾಯಾಗ್ರಹಣ, ದೃಶ್ಯಗಳ ಕ್ಲಿಪಿಂಗ್‌ ಚಿತ್ರದ ಬಗ್ಗೆ ಭರವಸೆ ಮೂಡಿಸಿದೆ. ಇಂದು ಶಿವಣ್ಣ, ಚಿರಂಜೀವಿ ಮುಖಾಮುಖಿ; ಕಾರಣವೇನು?

ಚಿತ್ರದಲ್ಲಿ ಸಿದ್ಧಾರ್ಥ್ಗೆ ಜೋಡಿಯಾಗಿ ಆಶಿಕಾ ರಂಗನಾಥ್‌ ಮತ್ತು ಐಂದ್ರಿತಾ ರೇ ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ಪವರ್‌ಫುಲ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅವರು ದೊಡ್ಡ ಮಟ್ಟದ ಆ್ಯಕ್ಷನ್‌ ಸಿನಿಮಾದಲ್ಲಿ ನಟಿಸಿರುವುದು. ಇವರಿಗೆ ಜೋಡಿಯಾಗಿ ಕಾಮ್ನಾ ಜೇಠ್ಮಲಾನಿ ನಟಿಸಿದ್ದಾರೆ. "ಮೊದಲು ನಾವು ಭಾರತೀಯರು, ಆಮೇಲೆ ಮಾತೃಭಾಷೆ" ; ಸೈರಾ ಸಿನಿಮಾ ಇವೆಂಟ್‌ನಲ್ಲಿ ನಟ ಶಿವಣ್ಣ ಹೇಳಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌