ಆ್ಯಪ್ನಗರ

ಈ ವಾರ ಬಿಡುಗಡೆ

ರಾಜರಥÜ ನಿರೂಪ್‌ ಭಂಡಾರಿ ಮುಖ್ಯ ಭೂಮಿಕೆಯ 'ರಾಜರಥ' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ...

Vijaya Karnataka Web 23 Mar 2018, 5:00 am
ರಾಜರಥ
Vijaya Karnataka Web kannada movies release on 23rd march
ಈ ವಾರ ಬಿಡುಗಡೆ


ನಿರೂಪ್‌ ಭಂಡಾರಿ ಮುಖ್ಯ ಭೂಮಿಕೆಯ 'ರಾಜರಥ' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ಕಾಲೇಜ್‌ ಲವ್‌ಸ್ಟೋರಿಯನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕ ಅನೂಪ್‌ ಭಂಡಾರಿ. ಈ ಸಿನಿಮಾ ಎರಡು ಭಾಷೆಯಲ್ಲಿ ನಿರ್ಮಾಣವಾಗಿದ್ದು, ಏಕಕಾಲದಲ್ಲಿ ಅವೆರಡೂ ಬಿಡುಗಡೆ ಆಗುತ್ತಿವೆ.

ಅಜಯ್‌ ರೆಡ್ಡಿ , ಅಶು ದಕಪ್ಪಗಾರಿ, ಅಂಜು ವಲ್ಲಭನೇನಿ ಮತ್ತು ಸತೀಶ್‌ ಶಾಸ್ತ್ರಿ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರವಿದು. ನಿರ್ದೇಶಕರೇ ಚಿತ್ರಕ್ಕೆ ಕಥೆ , ಗೀತರಚನೆ ಹಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಲಯಂ ಡೇಡ್‌ ಸಿನಿಮಾಟೋಗ್ರಫಿಯಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ, ಅಜನೀಶ್‌ ಲೋಕನಾಥ್‌ ಹಿನ್ನಲೆ ಸಂಗೀತ ನೀಡಿದ್ದಾರೆ. ಪುನೀತ್‌ ರಾಜಕುಮಾರ್‌, ಆವಂತಿಕಾ ಶೆಟ್ಟಿ, ರವಿಶಂಕರ್‌, ಆರ್ಯ(ತುಳು) ಹೀಗೆ ಹೆಸರಾಂತ ತಾರಾಬಳಗವೇ ಈ ಸಿನಿಮಾದಲ್ಲಿದೆ.

ಯೋಗಿ ದುನಿಯಾ

ದಶಕದ ನಂತರ ಮತ್ತೊಂದು ದುನಿಯಾ ಸೃಷ್ಟಿ ಮಾಡಿದ್ದಾರೆ ನಿರ್ಮಾಪಕ ಸಿದ್ಧರಾಜು. ತಮ್ಮ ಮಗನಿಗಾಗಿ ಇವರು ತಮ್ಮ ಸ್ನೇಹಿತರ ಜತೆಗೂಡಿ 'ಯೋಗಿ ದುನಿಯಾ' ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಇಂದು ರಿಲೀಸ್‌ ಆಗುತ್ತಿದೆ. ಲೂಸ್‌ಮಾದ ಖ್ಯಾತಿಯ ಯೋಗೀಶ್‌ ಈ ಚಿತ್ರದ ನಾಯಕ. ಬೆಂಗಳೂರಿನ ಮಜೆಸ್ಟಿಕ್‌ನಲ್ಲಿ ನಡೆಯುವಂತಹ ಘಟನೆಗಳನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕ ಹರಿ. ಅಪರೂಪದ ಲವ್‌ಸ್ಟೋರಿ ಸಿನಿಮಾದಲ್ಲಿದ್ದು, ಯೋಗಿ ಜತೆ ಹಿತಾ ಚಂದ್ರಶೇಖರ್‌ ನಾಯಕಿಯಾಗಿ ನಟಿಸಿದ್ದಾರೆ.

ಮಹೇಶ್‌ ಸಿದ್ದರಾಜು, ವೆಂಕಟೇಶ್‌ ಬಾಬು, ಚಂದ್ರಶೇಖರ್‌ ಪಾಟೀಲ್‌ ಮತ್ತು ನಾರಾಯಣ ಮೂರ್ತಿ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ಭರತ್‌ ಬಿ.ಜೆ ಸಂಗೀತ ನೀಡಿದ್ದಾರೆ. ಮಂಜುನಾಥ್‌ ನಾಯಕ್‌ ಅವರ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿ ಬಂದಿದೆ. ವಸಿಷ್ಟ ಸಿಂಹ, ನೀನಾಸಂ ಅಶ್ವತ್‌, ಸಂದೀಪ್‌ ಮುಂತಾದವರು ತಾರಾಬಳ ಸಿನಿಮಾದಲ್ಲಿದೆ.

ಮುಖ್ಯಮಂತ್ರಿ ಕಳದೊದ್ನಪ್ಪೋ


ರಾಜಕೀಯ ವಿಡಂಬನೆಯ ಸಿನಿಮಾ 'ಮುಖ್ಯಮಂತ್ರಿ ಕಳದೊದ್ನಪ್ಪೋ' ಇಂದು ಬಿಡುಗಡೆ ಆಗುತ್ತಿದೆ. ಶಿವಕುಮಾರ್‌ ಭದ್ರಯ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ಚಿತ್ರವಿದು. ಕುರುಡು ದೇಶ, ಅನಾಥ ರಾಜ್ಯ ಎಂದು ಸಹ ಶೀರ್ಷಿಕೆ ಹೊತ್ತು ಬಂದಿರುವ ಸಿನಿಮಾದಲ್ಲಿ ಪ್ರಸ್ತುತ ರಾಜಕೀಯ ಘಟನೆಗಳನ್ನೂ ಸೇರಿಸಿದ್ದಾರಂತೆ ನಿರ್ದೇಶಕರು.

ಮಾಸ್ಟರ್‌ ಹಿರಣ್ಣಯ್ಯ ಪುತ್ರ ಬಾಬು ಹಿರಣ್ಣಯ್ಯ ಪ್ರಮುಖ ಪಾತ್ರ ಮಾಡಿದ್ದು, ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಭರತ್‌ ಭದ್ರಯ್ಯ ಚಿತ್ರದ ನಾಯಕ. ಅಮೂಲ್ಯ ರೈ ನಾಯಕಿಯಾಗಿ ನಟಿಸಿದ್ದಾರೆ.

ನಯನ್‌ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದ್ದು, ಹರೀಶ್‌ ಸಿನಿಮಾಟೋಗ್ರಾಫರ್‌.

ಅತೃಪ್ತ

ಅರ್ಜುನ್‌ ಯೋಗಿ ಮುಖ್ಯ ಭೂಮಿಕೆಯ 'ಅತೃಪ್ತ' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಇದೊಂದು ಹಾರರ್‌ ಸಿನಿಮಾವಾಗಿದ್ದು, ನಾಗೇಶ್‌ ಕ್ಯಾಲನೂರು ನಿರ್ದೇಶನ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ವಿಜ್ಞಾನ ಮತ್ತು ಆತ್ಮಗಳ ಘರ್ಷಣೆಯಲ್ಲಿ ಯಾವುದು ನಿಜ ಯಾವುದು ಸುಳ್ಳು ಎಂಬುದಕ್ಕೆ ವಿವರ ನೀಡಿದ್ದಾರಂತೆ. ಮಧುಚಂದ್ರಕ್ಕೆ ಹೋದ ದಂಪತಿಗಳು ಉಳಿದುಕೊಂಡಿದ್ದ ವಿಲ್ಲಾದಲ್ಲಿ ವಿಚಿತ್ರ ಅನುಭವಗಳು ನಡೆಯುತ್ತವೆ. ಅದರಿಂದ ಅವರು ತಪ್ಪಿಸಿಕೊಂಡು ಹೇಗೆ ಹೊರಗೆ ಬರುತ್ತಾರೆ ಎಂಬುದೇ ಸಿನಿಮಾ.

ಶೃತಿ ನಾಯಕಿ ನಟಿಸಿದ್ದು, ಸಿಹಿಕಹಿ ಚಂದ್ರು, ಗೀತಾ, ಶೈಲಜಾ ಜೋಷಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌