ಜಾನಿ ಜಾನಿ ಎಸ್ ಪಪ್ಪಾ
ದುನಿಯಾ ವಿಜಯ್ ಮುಖ್ಯ ಭೂಮಿಕೆಯ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ದುನಿಯಾ ಟಾಕೀಸ್ ಲಾಂಛನದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶಕರು. ಇದು ಪಕ್ಕಾ ಮನರಂಜನೆಯ ಸಿನಿಮಾವಾಗಿದ್ದು, ಪಾತ್ರಗಳಿಂದಾಗಿಯೇ ಚಿತ್ರ ಗಮನ ಸೆಳೆದಿದೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ತಬಲಾ ನಾಣಿ ಸಂಭಾಷಣೆ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶ®ದಲ್ಲಿ ಹಾಡುಗಳು ಮೂಡಿ ಬಂದಿದ್ದು, ಕರುಣಾಕರ್ ಅವರ ಛಾಯಾಗ್ರಹಣದೆ. ರಚಿತಾರಾಮ್ ನಾಯಕಿಯಾದರೆ, ರಂಗಾಯಣ ರಘು, ಸಾಧುಕೋಕಿಲಾ, ಅಚ್ಯುತಕುಮಾರ್, ಗಡ್ಡಪ್ಪ ಮುಂತಾದವರಿದ್ದಾರೆ.
ಇದೀಗ ಬಂದ ಸುದ್ದಿ
ಹೊಸ ತಂಡದ ಸಿನಿಮಾ 'ಇದೀಗ ಬಂದ ಸುದ್ದಿ' ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ವಿಭಿನ್ನ ಕಥೆಯನ್ನು ಈ ಸಿನಿಮಾದ ಮೂಲಕ ಹೇಳುತ್ತಿದ್ದಾರೆ ನಿರ್ದೇಶಕ ಎಸ್.ಆರ್.ಪಾಟೀಲ್. ಬಲರಾಮ್ ಮುಖ್ಯ ಭೂಮಿಕೆಯ ಚಿತ್ರಕ್ಕೆ ಸತೀಶ್ ರಾಜೇಂದ್ರನ್ ಅವರ ಛಾಯಾಗ್ರಹಣವಿದೆ. ಜೋಯ್ಸ್ ಸ್ಯಾಮುಯಲ್ ಸಂಗೀತ ನಿರ್ದೇಶನವಿದೆ. ಮಾಧವ್, ಶಿವಕುಮಾರ್, ಕಾವ್ಯ, ಲೋಕೇಶ್ವರಿ ತಾರಾಗಣದಲ್ಲಿ ಇದ್ದಾರೆ.
ಗುಳ್ಟು
ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಗುಳ್ಟು ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಇಂಟರ್ನೆಟ್ ಯುಗದ ತಲ್ಲಣಗಳನ್ನು ಸಿನಿಮಾವಾಗಿಸಿದ್ದಾರೆ ನಿರ್ದೇಶಕರು. ಡಿಜಿಟಲ್ ಮೋಸದ ಬಗೆಗಿನ ಸಿನಿಮಾ ಇದಾಗಿದ್ದು, ಪ್ರಶಾಂತ್ರೆಡ್ಡಿ, ದೇವರಾಜ್ ಚಿಕ್ಕಣ್ಣ ನಿರ್ಮಿಸಿದ್ದಾರೆ. ಶಾಂತಿಸಾಗರ್ ಛಾಯಾಗ್ರಹಣ, ಅಮಿತ್ ಆನಂದ್ ಅವರ ಸಂಗೀತ ಚಿತ್ರಕ್ಕಿದೆ. ನವೀನ್ಶಂಕರ್ ನಾಯಕ. ಸೋನುಗೌಡ ನಾಯಕಿ. ಅವಿನಾಶ್, ರಂಗಾಯಣರಘು, ರಾಮ್ಧನುಷ್, ಅಪೂರ್ವ ಮುಂತಾದವರು ತಾರಾಗಣದಲ್ಲಿ ಇದ್ದಾರೆ.
ಹೀಗೊಂದು ದಿನ
ಸಿಂಧು ಲೋಕನಾಥ್ ಮುಖ್ಯ ಭೂಮಿಕೆಯ 'ಹೀಗೊಂದು ದಿನ' ಚಿತ್ರ ಇಂದು ಬಿಡುಗಡೆ ಆಗಲಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ವಿಕ್ರಮ್ ಯೋಗಾನಂದ್ ಅವರ ನಿರ್ದೇಶನವಿದೆ. ಇಡೀ ಸಿನಿಮಾದಲ್ಲಿ ಒಂದೇ ಜೊತೆ ಬಟ್ಟೆ ಹಾಕಿದ್ದಾರೆ ನಾಯಕಿ. ಪ್ರವೀಣ್ ತೇಜ್ ಮುಖ್ಯ ಭೂಮಿಕೆಯಲ್ಲಿದ್ದು, ಗುರುಪ್ರಸಾದ್, ಪದ್ಮಜ ರಾವ್, ನಾಗೇಂದ್ರ ಶಾ, ಶೋಭರಾಜ್, ಮಿತ್ರ, ಗಿರಿ ಮುಂತಾದವರ ತಾರಾಗಣವಿದೆ.
ವಿಕಾಸ್ ಅವರ ಕಥೆಗೆ, ಅಭಿಲಾಷ್ ಗುಪ್ತ ಸಂಗೀತ ನೀಡಿದ್ದಾರೆ. ವಿಕ್ರಮ್ ಯೋಗಾನಂದ್ ಅವರ ಸಿನಿಮಾಟೋಗ್ರಫಿ ಇದೆ.
ದುನಿಯಾ ವಿಜಯ್ ಮುಖ್ಯ ಭೂಮಿಕೆಯ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ದುನಿಯಾ ಟಾಕೀಸ್ ಲಾಂಛನದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶಕರು. ಇದು ಪಕ್ಕಾ ಮನರಂಜನೆಯ ಸಿನಿಮಾವಾಗಿದ್ದು, ಪಾತ್ರಗಳಿಂದಾಗಿಯೇ ಚಿತ್ರ ಗಮನ ಸೆಳೆದಿದೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ತಬಲಾ ನಾಣಿ ಸಂಭಾಷಣೆ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶ®ದಲ್ಲಿ ಹಾಡುಗಳು ಮೂಡಿ ಬಂದಿದ್ದು, ಕರುಣಾಕರ್ ಅವರ ಛಾಯಾಗ್ರಹಣದೆ. ರಚಿತಾರಾಮ್ ನಾಯಕಿಯಾದರೆ, ರಂಗಾಯಣ ರಘು, ಸಾಧುಕೋಕಿಲಾ, ಅಚ್ಯುತಕುಮಾರ್, ಗಡ್ಡಪ್ಪ ಮುಂತಾದವರಿದ್ದಾರೆ.
ಇದೀಗ ಬಂದ ಸುದ್ದಿ
ಹೊಸ ತಂಡದ ಸಿನಿಮಾ 'ಇದೀಗ ಬಂದ ಸುದ್ದಿ' ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ವಿಭಿನ್ನ ಕಥೆಯನ್ನು ಈ ಸಿನಿಮಾದ ಮೂಲಕ ಹೇಳುತ್ತಿದ್ದಾರೆ ನಿರ್ದೇಶಕ ಎಸ್.ಆರ್.ಪಾಟೀಲ್. ಬಲರಾಮ್ ಮುಖ್ಯ ಭೂಮಿಕೆಯ ಚಿತ್ರಕ್ಕೆ ಸತೀಶ್ ರಾಜೇಂದ್ರನ್ ಅವರ ಛಾಯಾಗ್ರಹಣವಿದೆ. ಜೋಯ್ಸ್ ಸ್ಯಾಮುಯಲ್ ಸಂಗೀತ ನಿರ್ದೇಶನವಿದೆ. ಮಾಧವ್, ಶಿವಕುಮಾರ್, ಕಾವ್ಯ, ಲೋಕೇಶ್ವರಿ ತಾರಾಗಣದಲ್ಲಿ ಇದ್ದಾರೆ.
ಗುಳ್ಟು
ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಗುಳ್ಟು ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಇಂಟರ್ನೆಟ್ ಯುಗದ ತಲ್ಲಣಗಳನ್ನು ಸಿನಿಮಾವಾಗಿಸಿದ್ದಾರೆ ನಿರ್ದೇಶಕರು. ಡಿಜಿಟಲ್ ಮೋಸದ ಬಗೆಗಿನ ಸಿನಿಮಾ ಇದಾಗಿದ್ದು, ಪ್ರಶಾಂತ್ರೆಡ್ಡಿ, ದೇವರಾಜ್ ಚಿಕ್ಕಣ್ಣ ನಿರ್ಮಿಸಿದ್ದಾರೆ. ಶಾಂತಿಸಾಗರ್ ಛಾಯಾಗ್ರಹಣ, ಅಮಿತ್ ಆನಂದ್ ಅವರ ಸಂಗೀತ ಚಿತ್ರಕ್ಕಿದೆ. ನವೀನ್ಶಂಕರ್ ನಾಯಕ. ಸೋನುಗೌಡ ನಾಯಕಿ. ಅವಿನಾಶ್, ರಂಗಾಯಣರಘು, ರಾಮ್ಧನುಷ್, ಅಪೂರ್ವ ಮುಂತಾದವರು ತಾರಾಗಣದಲ್ಲಿ ಇದ್ದಾರೆ.
ಹೀಗೊಂದು ದಿನ
ಸಿಂಧು ಲೋಕನಾಥ್ ಮುಖ್ಯ ಭೂಮಿಕೆಯ 'ಹೀಗೊಂದು ದಿನ' ಚಿತ್ರ ಇಂದು ಬಿಡುಗಡೆ ಆಗಲಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ವಿಕ್ರಮ್ ಯೋಗಾನಂದ್ ಅವರ ನಿರ್ದೇಶನವಿದೆ. ಇಡೀ ಸಿನಿಮಾದಲ್ಲಿ ಒಂದೇ ಜೊತೆ ಬಟ್ಟೆ ಹಾಕಿದ್ದಾರೆ ನಾಯಕಿ. ಪ್ರವೀಣ್ ತೇಜ್ ಮುಖ್ಯ ಭೂಮಿಕೆಯಲ್ಲಿದ್ದು, ಗುರುಪ್ರಸಾದ್, ಪದ್ಮಜ ರಾವ್, ನಾಗೇಂದ್ರ ಶಾ, ಶೋಭರಾಜ್, ಮಿತ್ರ, ಗಿರಿ ಮುಂತಾದವರ ತಾರಾಗಣವಿದೆ.
ವಿಕಾಸ್ ಅವರ ಕಥೆಗೆ, ಅಭಿಲಾಷ್ ಗುಪ್ತ ಸಂಗೀತ ನೀಡಿದ್ದಾರೆ. ವಿಕ್ರಮ್ ಯೋಗಾನಂದ್ ಅವರ ಸಿನಿಮಾಟೋಗ್ರಫಿ ಇದೆ.