ಆ್ಯಪ್ನಗರ

'ದೇಶದ ಯಾವ ರಾಜ್ಯದಲ್ಲೂ ಡಬ್ಬಿಂಗ್‌ಗೆ ನಿಷೇಧ ಇಲ್ಲ'

ಕನ್ನಡಕ್ಕೆ ಡಬ್ಬಿಂಗ್‌ ಅತ್ಯವಶ್ಯಕವಾಗಿದ್ದು, ಕೆಲ ಸ್ವಾರ್ಥಿಗಳು ಅದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಕಂಟಕಪ್ರಾಯರಾಗುತ್ತಿದ್ದಾರೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್‌ ಹೇಳಿದರು.

Vijaya Karnataka 3 Jul 2018, 12:55 pm
ಕನ್ನಡಕ್ಕೆ ಡಬ್ಬಿಂಗ್‌ ಅತ್ಯವಶ್ಯಕವಾಗಿದ್ದು, ಕೆಲ ಸ್ವಾರ್ಥಿಗಳು ಅದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಕಂಟಕಪ್ರಾಯರಾಗುತ್ತಿದ್ದಾರೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್‌ ಹೇಳಿದರು.
Vijaya Karnataka Web ಸಾಂದರ್ಭಿಕ ಚಿತ್ರ


ಬನವಾಸಿ ಬಳಗವು ನಗರದ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿನ ಮುನ್ನೋಟ ಮಳಿಗೆಯಲ್ಲಿ ಹಮ್ಮಿಕೊಂಡಿದ್ದ ‘ಡಬ್ಬಿಂಗ್‌ ಪರವಾದ ಸಮಾಲೋಚನಾ ಸಭೆ’ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘‘ಡಬ್ಬಿಂಗ್‌ ಎಂಬುದು ಕನ್ನಡ ಪರವಾಗಿದೆ. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ತಪ್ಪು ಸಂದೇಶ ರವಾನಿಸಲಾಗುತ್ತಿದ್ದು, ಅದರ ಹಿಂದೆ ದೊಡ್ಡ ಲಾಭಿಯೇ ಕೆಲಸ ಮಾಡುತ್ತಿದೆ. ಸ್ವಾರ್ಥಕ್ಕಾಗಿ ಕನ್ನಡಿಗರ ಮನೋರಂಜನೆಯ ಹಕ್ಕನ್ನು ಕಿತ್ತುಕೊಳ್ಳುವ ಯತ್ನ ಮಾಡಲಾಗುತ್ತಿದೆ. ದೇಶದ ಯಾವ ರಾಜ್ಯದಲ್ಲೂ ಡಬ್ಬಿಂಗ್‌ಗೆ ನಿಷೇಧ ಇಲ್ಲ’’ಎಂದರು.

‘‘ಡಬ್ಬಿಂಗ್‌ನಿಂದ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕಲಾವಿದರಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಕಲಾವಿದರ ಹೆಸರು ಹೇಳಿಕೊಂಡು ಕೆಲವರಷ್ಟೇ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’’ ಎಂದು ತಿಳಿಸಿದರು.

ಬನವಾಸಿ ಬಳಗದ ಅಧ್ಯಕ್ಷ ಆನಂದ ಅವರು ಡಬ್ಬಿಂಗ್‌ ಜಾರಿಯ ಸಾಧಕ ಮತ್ತು ಬಾಧಕಗಳ ಕುರಿತು ಸಭೆಗೆ ವಿವರಿಸಿದರು. ಗಣೇಶ ಚೇತನ ಅವರು ಡಬ್ಬಿಂಗ್‌ ಹೋರಾಟವನ್ನು ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ನಡೆಸುವ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿ ಹೇಳಿದರು. ಇದೇ ವೇಳೆ ಬನವಾಸಿ ಬಳಗ ಹಮ್ಮಿಕೊಂಡಿರುವ ಈ ಆಂದೋಲನಕ್ಕೆ ಕರ್ನಾಟಕ ನವ ನಿರ್ಮಾಣ ಸೇನೆ ಬೆಂಬಲ ಸೂಚಿಸಿತು. ಬನವಾಸಿ ಬಳಗದ ಆನಂದ, ಗಣೇಶ, ಚೇತನ, ಅರುಣ್‌, ಜಾವಗಲ್‌, ವಸಂತ ಶೆಟ್ಟಿ, ಕರವೇ ರಾಜ್ಯ ಉಪಾಧ್ಯಕ್ಷ ಅಂಜನಪ್ಪ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌