ಆ್ಯಪ್ನಗರ

ನಿಖಿಲ್ ಎಲ್ಲಿದೀಯಪ್ಪಾ ಟೈಟಲ್ ಈಗಾಗಲೇ ಅಪ್ರೂವ್ ಆಗಿದೆ: ನಿರ್ಮಾಪಕ ಗಣೇಶ್

ನನ್ನ ವಿರೋಧಿಗಳು ನನ್ನನ್ನು ಹೀಯಾಳಿಸಲು ಈ ಶೀರ್ಷಿಕೆಯನ್ನು ದಾಳವಾಗಿ ಉಪಯೋಗಿಸಿದ್ದರು. ಆದರೆ ಇದೇ ವೀಡಿಯೋದಿಂದ ಅಮೆರಿಕಾ ಸೇರಿದಂತೆ ಹಲವುವಿದೇಶಗಳಲ್ಲಿ ಹಾಗೂ ದೇಶದ ತುಂಬಾ ನನಗೆ ಭಾರೀ ಪ್ರಚಾರ ದೊರಕಿತು. ದೇಶ ವಿದೇಶಗಳಿಂದ ನನಗೆ ಹಲವರು ಈ ವೀಡಿಯೋ ನೋಡಿ ಟ್ರೋಲ್ ಮಾಡಿದ್ದಾರೆ.

Vijaya Karnataka Web 11 May 2019, 5:13 pm
ಲೋಕಸಭೆ ಚುನಾವಣೆ ಪ್ರಚಾರದ ವೇಲೆ ಬಹು ಜನಪ್ರಿಯವಾಗಿದ್ದ 'ನಿಖಿಲ್ ಎಲ್ಲಿದೀಯಪ್ಪಾ?' ಎಂಬ ಡೈಲಾಗ್ ಸಾಮಾಜಿಕ ತಾಣದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದು ಬಹುತೇಕ ಜನರಿಗೆ ಗೊತ್ತೇ ಇದೆ. ಇದೀಗ ಅದೇ ಹೆಸರಿನ ಚಿತ್ರದ ನಿರ್ಮಾಣಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಬಿರುಸಾದ ಸಿದ್ಧತೆ ನಡೆದಿದೆ. ಈ ನಡುವೆ 'ನಿಖಿಲ್ ಎಲ್ಲಿದ್ದೀಯಪ್ಪಾ?' ಚಿತ್ರದಲ್ಲಿ ನಾನು ನಟಿಸೋಕೆ ಸಿದ್ದನಿದ್ದು, ಚಿತ್ರವನ್ನು ಸಿಎಸ್ ಪುಟ್ಟರಾಜು ನಿರ್ಮಿಸಲಿದ್ದಾರೆ ಎಂದು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದರು.
Vijaya Karnataka Web nikhil1105


ಆದರೆ ಇದೀಗ ಈ ಬಗ್ಗೆ ಕನ್ನಡದ ನಿರ್ಮಾಪಕ ಎ ಗಣೇಶ್ ಅವರು ಮಾತನಾಡಿ"ಈಗಾಗಲೆ 'ನಿಖಿಲ್ ಎಲ್ಲಿದೀಯಪ್ಪಾ?' ಟೈಟಲ್ ಅಪ್ರೂವ್ ಆಗಿದೆ. ಹೀಗಾಗಿ, ಈ ಟೈಟಲ್‌ಗೆ ಅನುಮತಿ ನೀಡುವುದು ಬೇಡ" ಎಂದಿದ್ದಾರೆ. ನಿರ್ಮಾಪಕ ಗಣೇಶ್ ಈಗಾಗಲೇ ನಾನು ಈ ಟೈಟಲ್ ರಜಿಸ್ಟರ್ ಮಾಡಿ ಅದು ಅಪ್ರೂವ್ ಕೂಡ ಆಗಿರುವಾಗ ಮತ್ತೆ ಅದನ್ನು ನಿಖಿಲ್‌ಗೆ ಅಪ್ರೂವ್ ಮಾಡುವುದು ಯಾಕೆ" ಎಂದಿದ್ದಾರೆ. ಓಟ್ಟಿನಲ್ಲಿ ಈ ಮೂಲಕ ಈಗಾಗಲೇ ಆ ಟೈಟಲ್ ಫಿಲಳ ಚೇಂಬರ್‌ನಲ್ಲಿ ಅಪ್ರೂವ್ ಆಗಿದೆ ಎಂದಂತಾಯಿತು.

ಈ ಮೊದಲು "ನಿಖಿಲ್ ಎಲ್ಲಿದೀಯಪ್ಪಾ?'ಹೆಸರಿನ ಚಿತ್ರವನ್ನು ನಾನೇ ಮಾಡಲಿದ್ದೇನೆ. ಸಚಿವ ಸಿಎಸ್ ಪುಟ್ಟರಾಜು ಇದಕ್ಕೆ ಬಂಡವಾಳ ಹಾಕಲಿದ್ದಾರೆ. 'ನಿಖಿಲ್ ಎಲ್ಲಿದ್ದೀಯಪ್ಪಾ?'ಚಿತ್ರದ ಶೀರ್ಷಿಕೆಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಇದನ್ನು ಬೇರೆಯವರಿಗೆ ನೀಡೋದು ಬೇಡ, ನಾವೇ ಚಿತ್ರ ತಯಾರಿಸುತ್ತೇವೆ ಎಂದು ನಾನೇ ಫಿಲ್ಮ್ ಛೇಂಬರ್ ಗೆ ಹೇಳಿದ್ದೇನೆ" ಎಂದು ನಿಖಿಲ್ ಅವರು ಶುಕ್ರವಾರ ಮಂಡ್ಯ ಕೆಆರ್ ಪೇಟೆ ತಾಲೂಕಿನಲ್ಲಿ ನಡೆದಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಹೇಳಿದ್ದರು.

"ನನ್ನ ವಿರೋಧಿಗಳು ನನ್ನನ್ನು ಹೀಯಾಳಿಸಲು ಈ ಶೀರ್ಷಿಕೆಯನ್ನು ದಾಳವಾಗಿ ಉಪಯೋಗಿಸಿದ್ದರು. ಆದರೆ ಇದೇ ವೀಡಿಯೋದಿಂದ ಅಮೆರಿಕಾ ಸೇರಿದಂತೆ ಹಲವುವಿದೇಶಗಳಲ್ಲಿ ಹಾಗೂ ದೇಶದ ತುಂಬಾ ನನಗೆ ಭಾರೀ ಪ್ರಚಾರ ದೊರಕಿತು. ದೇಶ ವಿದೇಶಗಳಿಂದ ನನಗೆ ಹಲವರು ಈ ವೀಡಿಯೋ ನೋಡಿ ಟ್ರೋಲ್ ಮಾಡಿದ್ದಾರೆ. ಫಿಲ್ಮ್ ಚೇಂಬರ್ ಗೆ ಈ ಶೀರ್ಷಿಕೆ ಪಡೆಯಲು ಹಲವರು ಅರ್ಜಿ ಹಾಕಿದ್ದಾರೆ. ಆದರೆ ಈ ಶಿರ್ಷಿಕೆ ನಂದೇ ಆಗಿದೆ. ಪುಟ್ಟರಾಜಣ್ಣ (ಸಚಿವ ಸಿಎಸ್ ಪುಟ್ಟರಾಜು೦ ನಿರ್ಮಾಪಕರು, ನಾನೇ ಅಭಿನಯಿಸುವೆ" ಎಂದು ನಿಖಿಲ್ ತಮಾಷೆಯಾಗಿ ಹೇಳಿದ್ದರು.

ಅಂದಹಾಗೆ, ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರು ಪ್ರತಿಸ್ಪರ್ಧಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಸ್ಪರ್ಧಿಸಿದ್ದಾರೆ. ಫಲಿತಾಶ ಇದೇ 23ಕ್ಕೆ, ಮೇ 23, 2019ರಂದು ಬರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌