ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರ ಅಲೆ ಜೋರಾಗಿದೆ. ವಿಭಿನ್ನ ಕಥೆ ಮತ್ತು ಟೈಟಲ್ ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡುವವರ ಸಂಖ್ಯೆ ಸಹ ಹೆಚ್ಚಾಗಿದೆ. ಆ ಸಾಲಿಗೆ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಹ ಸೇರ್ಪಡೆಯಾಗಿದೆ. ಚಿತ್ರಕ್ಕೆ ನಟಿ ಕೃಷಿ ತಾಪಂದ ನಾಯಕಿ.
ನವ ನಿರ್ದೇಶಕ ಕುಶಾಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ರಂಗಭೂಮಿಯ ಪ್ರತಿಭೆ ಅವಿನಾಶ್ ಎಸ್. ಷಟಮರ್ಶನ್ ಮತ್ತು ನಟಿ ಕೃಷಿ ತಾಪಂದ ಮುಖ್ಯ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ಇವರ ಜತೆ ಹಾಸ್ಯ ನಟ ಚಿಕ್ಕಣ್ಣ , ಸುಚೇಂದ್ರ ಪ್ರಸಾದ್ ಸಹ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾ ಒಂದು ಜರ್ನಿ ಬೇಸ್ ಕಥೆಯಾಗಿದ್ದು. ಒಂದು ಕಾರು ಸಹ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದು, ರಂಜಿತ್ಗೌಡ ಎನ್ನುವವರು ಚಾಮುಂಡೇಶ್ವರಿ ಸಿನಿ ಕಂಬೈನ್ಸ್ ಬ್ಯಾನರ್ನಡಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂಪೂರ್ಣ ಹೊಸಬರಿಂದ ಕೂಡಿರುವ ಈ ಸಿನಿಮಾವನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸಬೇಕು ಎಂದುಕೊಂಡಿದ್ದಾರೆ ನಿರ್ದೇಶಕರು.