Please enable javascript.ಕನ್ನಡಕ್ಕಾಗಿ ಒಂದನ್ನು ಒತ್ತಿ - kannadakkagi ondannu otti : new kannada movie - Vijay Karnataka

ಕನ್ನಡಕ್ಕಾಗಿ ಒಂದನ್ನು ಒತ್ತಿ

Vijaya Karnataka Web 25 Oct 2016, 4:00 am
Subscribe

ಕನ್ನಡಕ್ಕಾಗಿ ಒಂದನ್ನು ಒತ್ತಿ ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರ ಅಲೆ ಜೋರಾಗಿದೆ...

kannadakkagi ondannu otti new kannada movie
ಕನ್ನಡಕ್ಕಾಗಿ ಒಂದನ್ನು ಒತ್ತಿ

ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರ ಅಲೆ ಜೋರಾಗಿದೆ. ವಿಭಿನ್ನ ಕಥೆ ಮತ್ತು ಟೈಟಲ್‌ ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡುವವರ ಸಂಖ್ಯೆ ಸಹ ಹೆಚ್ಚಾಗಿದೆ. ಆ ಸಾಲಿಗೆ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಹ ಸೇರ್ಪಡೆಯಾಗಿದೆ. ಚಿತ್ರಕ್ಕೆ ನಟಿ ಕೃಷಿ ತಾಪಂದ ನಾಯಕಿ.

ನವ ನಿರ್ದೇಶಕ ಕುಶಾಲ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ರಂಗಭೂಮಿಯ ಪ್ರತಿಭೆ ಅವಿನಾಶ್‌ ಎಸ್‌. ಷಟಮರ್ಶನ್‌ ಮತ್ತು ನಟಿ ಕೃಷಿ ತಾಪಂದ ಮುಖ್ಯ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ಇವರ ಜತೆ ಹಾಸ್ಯ ನಟ ಚಿಕ್ಕಣ್ಣ , ಸುಚೇಂದ್ರ ಪ್ರಸಾದ್‌ ಸಹ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾ ಒಂದು ಜರ್ನಿ ಬೇಸ್‌ ಕಥೆಯಾಗಿದ್ದು. ಒಂದು ಕಾರು ಸಹ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದು, ರಂಜಿತ್‌ಗೌಡ ಎನ್ನುವವರು ಚಾಮುಂಡೇಶ್ವರಿ ಸಿನಿ ಕಂಬೈನ್ಸ್‌ ಬ್ಯಾನರ್‌ನಡಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂಪೂರ್ಣ ಹೊಸಬರಿಂದ ಕೂಡಿರುವ ಈ ಸಿನಿಮಾವನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸಬೇಕು ಎಂದುಕೊಂಡಿದ್ದಾರೆ ನಿರ್ದೇಶಕರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ