ಆ್ಯಪ್ನಗರ

ಹೊಸ ನಟಿಯನ್ನು ಚಂದನವನಕ್ಕೆ ಕರೆದುತಂದ ಮಹೇಶ್ ಬಾಬು

ನಟಿಯರಾದ ಐಂದ್ರಿತಾ ರೇ, ಕೃತಿ ಕರಬಂಧ, ಆಶಿಕಾ ರಂಗನಾಥ್, ಲತಾ ಹೆಗಡೆ, ಬಾಲಿವುಡ್ ನಟಿ ಸುರ್ವೀನ್ ಚಾವ್ಲಾ ಸೇರಿದಂತೆ ಅನೇಕ ನಟಿಮಣಿರಯನ್ನು ಸ್ಯಾಂಡಲ್‌ವುಡ್‌ಗೆ ಮಹೇಶ್ ಬಾಬು ಪರಿಚಯಸಿದವರು.

Vijaya Karnataka Web 14 Mar 2019, 7:43 pm
ಕನ್ನಡದಲ್ಲಿ ಹೆಸರು ಮಾಡಿದ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಹೇಶ್ ಬಾಬು ಅವರು ಇನ್ನೊಬ್ಬರು ನಟಿಮಣಿಯನ್ನು ಸ್ಯಾಂಡಲ್‌ವುಡ್ ಅಂಗಳಕ್ಕೆ ಪರಿಚಯಿಸುತ್ತಿದ್ದಾರೆ. ಅವರ ಹೆಸರು ಕೃತಿಕಾ ಶ್ರೀನಿವಾಸ್. ಅವರು ಯಾರೋ ಅಲ್ಲ, ಕನ್ನಡದಲ್ಲಿ ಡಾ ವಿಷ್ಣುವರ್ಧನ್ ನಾಯಕತ್ವದ 'ಅಪ್ಪಾಜಿ' ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದ ನಟಿ ಆಮಿನಿಯ ಅಣ್ಣನ ಮಗಳು. ಕೃತಿಕಾ ಶ್ರೀನಿವಾಸ್ ಅವರು ಬೆಂಗಳೂರು ಮೂಲದವರು.
Vijaya Karnataka Web maheshbabu1403


ಕನ್ನಡದಲ್ಲಿ 'ಅರಸು', 'ಆಕಾಶ್', 'ಮೆರವಣಿಗೆ' ಮುಂತಾದ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಮಹೇಶ್ ಬಾಬು, ಸ್ಯಾಂಡಲ್‌ವುಡ್ ನಾಯಕಿಯರ ಪಾಲಿಗೆ ಲಕ್ಕಿ ನಿರ್ದೇಶಕರು. ಏಕೆಂದರೆ, ಇಂದು ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಹಲವು ನಾಯಕಿಯರನ್ನು ಪರಿಚಯಿಸಿದ್ದು ಇದೇ ನಿರ್ದೇಶಕ ಮಹೇಶ್ ಬಾಬು.

ನಟಿಯರಾದ ಐಂದ್ರಿತಾ ರೇ, ಕೃತಿ ಕರಬಂಧ, ಆಶಿಕಾ ರಂಗನಾಥ್, ಲತಾ ಹೆಗಡೆ ಸೇರಿದಂತೆ ಅನೇಕ ನಟಿಮಣಿರಯನ್ನು ಸ್ಯಾಂಡಲ್‌ವುಡ್‌ಗೆ ಮಹೇಶ್ ಬಾಬು ಪರಿಚಯಸಿದವರು. ಅಲ್ಲದೆ, ಬಾಲಿವುಡ್ ನಟಿ ಸುರ್ವೀನ್ ಚಾವ್ಲಾ ಕೂಡ ತಮ್ಮ ಮೊದಲ ಸಿನಿಮಾ ಆಗಿ ನಟಿಸಿದ್ದು ಮಹೇಶ್ ಬಾಬು ನಿರ್ದೇಶನ ಚಿತ್ರದಲ್ಲಿಯೇ ಆಗಿದೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಆಳಿದ ನಟಿಯರಾದ ರಮ್ಯಾ ಮತ್ತು ರಕ್ಷಿತಾ ಅವರಿಗೂ ನಟನೆಯ ಪಾಠ ಮಾಡಿದ್ದರು ಮಹೇಶ್ ಬಾಬು. ಆ ಸಮಯದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಮಹೇಶ್ ಬಾಬು, ರಮ್ಯಾ ಮತ್ತು ರಕ್ಷಿತಾ ಅವರಿಗೂ ನಟನೆ ಬಗ್ಗೆ ಬಹಳಷ್ಟು ಹೇಳಿಕೊಟ್ಟಿದ್ದಾರೆ. ಇಂತಹ ನಿರ್ದೇಶಕರು, ಇದೀಗ ಮತ್ತೊಬ್ಬಳು ಹೊಸ ಪ್ರತಿಭೆಯನ್ನು ಕನ್ನಡ ಸಿನಿಲೋಕಕ್ಕೆ ಕರೆತಂದಿದ್ದಾರೆ.

ಮಹೇಶ್ ಬಾಬು ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ, ಬೆಂಗಳೂರು ಮೂಲದ ನಟಿ ಕೃತಿಕಾ ಶ್ರೀನಿವಾಸ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಮಡಿದ್ದಾರೆ ಮಹೇಶ್ ಬಾಬು. ನೋಡಲು ಮುದ್ದು ಮುದ್ದಾಗಿರೊ ಕೃತಿಕಾ ಭರತನಾಟ್ಯ ಕಲಾವಿದೆ. ಸದ್ಯ ಪದವಿ ಮುಗಿಸಿರುವ ಕೃತಿಕಾ, ಇದೀಗ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌