ಆ್ಯಪ್ನಗರ

ತಾರೆಯರ ಲವ್‌ಸ್ಟೋರಿ; ಕಾರುಣ್ಯ ಮೇಲೆ ಕಿರಿಕ್‌ ಆರೋಪ

ಸ್ಯಾಂಡಲ್‌ ವುಡ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ನಟಿಯಾಗಿ ಗುರುತಿಸಿಕೊಂಡಿರುವ ಕಾರುಣ್ಯ ರಾಮ… ಒಬ್ಬ ಕಿರುತೆರೆ ನಟಿಗೆ ಕಿರಿಕ್‌ ಮಾಡುತ್ತಿದ್ದಾರೆಂದು ಸುದ್ದಿ ಹಬ್ಬಿದ ಬೆನ್ನಲ್ಲೇ ಅವರು ಲವಲವಿಕೆ ಜತೆ ಮಾತನಾಡಿದ್ದಾರೆ.

Vijaya Karnataka 2 Dec 2017, 5:00 am

ಕೆಲ ದಿನಗಳ ಹಿಂದೆಯಷ್ಟೇ ಕಿರುತೆರೆ ನಟಿ ಅನಿಕಾ ಮತ್ತು ಉದ್ಯಮಿ ಸಚಿನ್‌ ನಿಶ್ಚಿತಾರ್ಥ ನಡೆದಿತ್ತು.ಆದರೆ ಈಗ ಆ ನಿಶ್ಚಿತಾರ್ಥ ಮುರಿದು ಬಿದ್ದಿದ್ದು, ಇದಕ್ಕೆ ಸ್ಯಾಂಡಲ್‌ವುಡ್‌ ನಟಿ ಕಾರುಣ್ಯ ರಾಮ್‌ ಕಾರಣ ಎಂದು ಅನಿಕಾ ಆರೋಪಿಸಿದ್ದಾರೆ.

ಲಕ್ಷ್ಮೇ ಬಾರಮ್ಮ ಸೀರಿಯಲ್‌ನಲ್ಲಿ ಕುಮುದಾ ಎಂಬ ವಿಲನ್‌ ಪಾತ್ರದಲ್ಲಿ ಅನಿಕಾ ಖ್ಯಾತರಾಗಿದ್ದಾರೆ. ಈಗ ತಮಗೆ ಕಾರುಣ್ಯ ಅವರಿಂದ ತೊಂದರೆ ಆಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಲು ಮಂದಾಗಿದ್ದಾರೆ.

ಈ ಬಗ್ಗೆ ಕಾರುಣ್ಯ ರಾಮ್‌ ಹೇಳುವುದೇ ಬೇರೆ. 'ನನಗೆ ಆ ಹುಡುಗಿ ಯಾರು ಎಂದೇ ಗೊತ್ತಿಲ್ಲ. ನಾನು ಏಕೆ ತೊಂದರೆ ಕೊಡಲಿ. ನಾನು ಹಾಗೂ ಸಚಿನ್‌ ಬಹಳ ವರ್ಷಗಳಿಂದ ಸ್ನೇಹಿತರು. ಅವನು ನನ್ನನ್ನು ಇಷ್ಟಪಡುತ್ತಿದ್ದ.ಆದರೆ ನಮ್ಮ ಮನೆಯಲ್ಲಿ ಹಿರಿಯರು ಒಪ್ಪಿಕೊಳ್ಳಲಿಲ್ಲ.ಹಾಗಾಗಿ ನಾವು ಆ ವಿಷಯವನ್ನು ಅಲ್ಲಿಗೆ ಬಿಟ್ಟೆವು. ಅವನಿಗೆ ಎಂಗೇಜ್‌ಮೆಂಟ್‌ ಆಗಿರುವುದು ನನಗೆ ಗೊತ್ತಿಲ್ಲ. ಈ ವಿವಾದಕ್ಕೂ ನನಗೂ ಸಂಬಂಧವಿಲ್ಲ' ಎಂದಿದ್ದಾರೆ.

ಆದರೆ ಇದಕ್ಕೆ ಪ್ರತಿಯಾಗಿ ಅನಿಕಾ ಹೇಳುವುದೇ ಬೇರೆ. 'ಇದೆ ತಿಂಗಳು ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನನ್ನ ಮತ್ತು ಸಚಿನ್‌ ನಿಶ್ಚಿತಾರ್ಥ ನಡೆದಿತ್ತು. ಆದರೆ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ನಟಿ ಕಾರುಣ್ಯ ಹಾಗೂ ಸಚಿನ್‌ ಹಾಗೂ ಅವರ ತಾಯಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಈಗ ಎಂಗೇಜ್‌ಮೆಂಟ್‌ ಆದ ಮೇಲೆ ನನ್ನ ಜತೆ ಮಾತನಾಡದಂತೆ ಕಾರುಣ್ಯ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹೊತ್ತಲ್ಲದ ಹೊತ್ತಲ್ಲಿ ಕರೆ ಮಾಡಿ ಭೇಟಿಯಾಗುವಂತೆ ಪೀಡಿಸುತ್ತಿದ್ದಾಳೆ. ಇದಲ್ಲದೆ ಸಚಿನ್‌ ಅವರ ಹೆತ್ತವರಿಗೂ ಕರೆ ಮಾಡಿ ಧಮಕಿ ಹಾಕುತ್ತಿದ್ದಾಳೆ' ಎಂದು ದೂರಿದ್ದಾರೆ ಅನಿಕಾ.

Vijaya Karnataka Web karunya ram controversy
ತಾರೆಯರ ಲವ್‌ಸ್ಟೋರಿ; ಕಾರುಣ್ಯ ಮೇಲೆ ಕಿರಿಕ್‌ ಆರೋಪ


ಈ ಬಗ್ಗೆ ಕಾರುಣ್ಯ ನೀಡಿದ ಪ್ರತ್ಯುತ್ತರ ಹೀಗೆದೆ. 'ಬಹುಶÜಃ ಆ ಹುಡುಗಿ ಪಬ್ಲಿಸಿಟಿ ಪಡೆಯೋಕೆ ಇದೆಲ್ಲ ಮಾಡುತ್ತಿರಬಹುದು. ನನಗೆ ಮದುವೆಯಾಗೋಕೆ ಅವರೇ ಬೇಕಿಲ್ಲ. ಆ ಹುಡುಗಿಗೆ ಇನ್‌ಫಿರಿಯಾರಿಟಿ ಕಾಂಪ್ಲೆಕ್ಸ್‌ ಇದೆ ಅನ್ನಿಸುತ್ತಿದೆ. ಆಕೆಯನ್ನು ನಾನು ನೋಡೇ ಇಲ್ಲ. ನಾನು ಯಾರ ಕುಟುಂಬಕ್ಕೂ ತೊಂದರೆ ನೀಡಿಲ್ಲ. ಈಗಾಗಲೇ ಸಚಿನ್‌ ಮಾತನಾಡಿ ಕಾರುಣ್ಯಳಿಂದ ನನಗೆ ತೊಂದರೆ ಇಲ್ಲ ಎಂದು ಹೇಳಿಯಾಗಿದೆ'ಎಂದು ನಟಿ ಕಾರುಣ್ಯ ರಾಮ… ತಿಳಿಸಿದ್ದಾರೆ.

ಈ ವಿವಾದಕ್ಕೂ ನನಗೂ ಸಂಬಂಧವಿಲ್ಲ, ಬೇರೆವರಿಗೆ ಕಿರುಕುಳ ನೀಡಿ ಬದುಕುವಂತಹದ್ದು ನನಗೇನು ಇಲ್ಲ. ನಾವು ಮರ್ಯಾದಸ್ಥರು. ಸಮಸ್ಯೆ ಇರುವುದು ಆ ಹುಡುಗಿಯಲ್ಲಿ

-ಕಾರುಣ್ಯ ರಾಮ್‌, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌