ಆ್ಯಪ್ನಗರ

ಕವಚ ಚಿತ್ರ ಅಭಿಮಾನಿಗಳಿಗೆ ಯುಗಾದಿ ಉಡುಗೋರೆ ಎಂದ ನಿರ್ದೇಶಕ

ಜಿವಿಆರ್‌ ವಾಸು ನಿರ್ದೇಶನದ ಕವಚ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಬಗ್ಗೆ ನಿರ್ದೇಶಕರು ಲವಲವಿಕೆ ಜತೆ ಮಾತನಾಡಿದ್ದಾರೆ.

Vijaya Karnataka 5 Apr 2019, 6:00 am
* ಹರೀಶ್‌ ಬಸವರಾಜ್‌
Vijaya Karnataka Web kavacha1


ಕವಚ ಸಿನಿಮಾ ಒಂದು ಫ್ರೆಶ್‌ ಫೀಲ್‌ ಕೊಡುವ ಸಿನಿಮಾ ಆಗಿದ್ದು, ನೂರು ಚಿತ್ರಗಳ ನಂತರ ಶಿವರಾಜ್‌ ಕುಮಾರ್‌ ಅವರು ಹೊಸ ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ ಎಂದು ನಿರ್ದೇಶಕ ಜಿವಿಆರ್‌ ವಾಸು ಹೇಳಿದ್ದಾರೆ.

'ಕವಚ ಸಿನಿಮಾ ಸ್ಕ್ರಿಪ್ಟ್‌, ಕಥೆ ಹಾಗೂ ಕಲಾವಿದರ ನಟನೆ ವಿಚಾರದಲ್ಲಿ ಎಲ್ಲದರಲ್ಲೂ ಫ್ರೆಶ್‌ ಫೀಲ್‌ ಇದೆ. ತಂದೆ ಮಗಳ ಸಂಬಂಧ ಸಿನಿಮಾದ ಹೈಲೈಟ್‌. ಈಗಾಗಲೇ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಿವರಾಜ್‌ ಕುಮಾರ್‌ ಮೊದಲ ಬಾರಿಗೆ ಈವರೆಗೂ ಕಾಣಿಸಿಕೊಳ್ಳದ ರೋಲ್‌ನಲ್ಲಿ ನಟಿಸಿದ್ದಾರೆ. ಈ ಯುಗಾದಿಗೆ ಶಿವಣ್ಣ ಅಭಿಮಾನಿಗಳಿಗೆ ಈ ಚಿತ್ರ ಅತ್ಯುತ್ತಮ ಉಡುಗೋರೆ'ಎಂದು ವಾಸು ತಿಳಿಸಿದ್ದಾರೆ.

'ಇನ್ನು ಸಿನಿಮಾ ರಿಮೇಕ್‌ ಆದರೂ, ಅದರ ಚಿತ್ರಕಥೆಯನ್ನು ಸಾಕಷ್ಟು ಬದಲಾಯಿಸಿಕೊಂಡಿದ್ದೇನೆ. ಇದೇ ಕಾರಣಕ್ಕೆ ಶಿವಣ್ಣ ಸಿನಿಮಾ ಒಪ್ಪಿಕೊಂಡರು. ಕಥೆಗೆ ತಕ್ಕ ಲೊಕೇಶನ್‌ನನ್ನು ಆರಿಸಿಕೊಂಡು ಅಲ್ಲಿ ಕೆಲಸ ಮಾಡಿದೆವು. ಯಾವುದಕ್ಕೂ ರಾಜಿ ಮಾಡಿಕೊಂಡಿರಲಿಲ್ಲ. ಹಾಡುಗಳು ಈಗಾಗಲೇ ಹಿಟ್‌ ಆಗಿವೆ. ಈ ಎಲ್ಲ ಕಾರಣಗಳಿಂದ ಸಿನಿಮಾ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ'ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಚ್‌ಎಮ್‌ಎ ಸಿನಿಮಾಸ್‌ ಲಾಂಛನದಲ್ಲಿ ಎಂವಿವಿ ಸತ್ಯನಾರಾಯಣ್‌ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕೃತಿಕಾ ಇಶಾ ಕೊಪ್ಪಿಕರ್‌, ವಸಿಷ್ಠ ಸಿಂಹ ಸೇರಿ ಸಾಕಷ್ಟು ಮಂದಿ ಕಲಾವಿದರು ನಟಿಸಿದ್ದಾರೆ.

ಹಾಡುಗಳು, ಸಿನಿಮಾಟೋಗ್ರಫಿ, ಕಥೆ ಮತ್ತು ಶಿವರಾಜ್‌ಕುಮಾರ್‌ ಸೇರಿ ಸಾಕಷ್ಟು ಮಂದಿಯ ನಟನೆ ಇಂತಹ ಸಾಕಷ್ಟು ಕಾರಣಗಳಿಂದ ಜನರಿಗೆ ಇಷ್ಟವಾಗುತ್ತದೆ. 250ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ.

-ಜಿವಿಆರ್‌ ವಾಸು, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌