ಆ್ಯಪ್ನಗರ

ಕವಲುದಾರಿ ಚಿತ್ರವನ್ನು ನಿರ್ಮಿಸಿದ್ದು ತುಂಬಾ ಖುಷಿಯ ಸಂಗತಿ ಎಂದ ಪುನೀತ್‌

ಹೇಮಂತ್‌ ರಾವ್‌ ನಿರ್ದೇಶನದ ಕವಲುದಾರಿ ಸಿನಿಮಾ ಇಂದು ಬಿಡುಗಡೆಯಾಗುತ್ತಿದ್ದು, ಈ ಸಿನಿಮಾದ ವಿಶೇಷತೆಗಳ ಬಗ್ಗೆ ನಟ ಹಾಗೂ ನಿರ್ಮಾಪಕ ಪುನೀತ್‌ ರಾಜ್‌ಕುಮಾರ್‌ ಲವಲವಿಕೆ ಜತೆ ಮಾತನಾಡಿದ್ದಾರೆ.

Vijaya Karnataka 12 Apr 2019, 5:00 am
-ಹರೀಶ್‌ ಬಸವರಾಜ್‌
Vijaya Karnataka Web kavalu dari


ಕವಲುದಾರಿ ಸಿನಿಮಾವನ್ನು ನಿರ್ಮಾಣ ಮಾಡಿರುವುದರಿಂದ ನನಗೆ ತುಂಬಾ ಖುಷಿಯಾಗಿದೆ. ಈ ಸಿನಿಮಾದ ಕಥೆ, ಹೇಮಂತ್‌ ಅವರ ನಿರ್ದೇಶನ, ಅನಂತನಾಗ್‌ ಮತ್ತು ರಿಷಿ ಅವರ ಕಾಂಬಿನೇಶನ್‌ ಈ ಚಿತ್ರ ನಿರ್ಮಾಣ ಮಾಡಲು ಮುಖ್ಯ ಕಾರಣ ಎಂದು ಪುನೀತ್‌ ರಾಜ್‌ಕುಮಾರ್‌ ಹೇಳಿದ್ದಾರೆ.

'ಕವಲುದಾರಿ ಸಿನಿಮಾ ನನ್ನ ಕನಸು ಎನ್ನುವುದಕ್ಕಿಂತ ನಿರ್ದೇಶಕರ ಕನಸು. ಹೇಮಂತ್‌ ಕಥೆ ಹೇಳಿದಾಗ ಅದು ನನಗೆ ಒಂದು ರೀತಿಯಲ್ಲಿ ಕಿಕ್‌ ಮತ್ತು ಖುಷಿ ಕೊಟ್ಟಿತು. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಮೊದಲು ಹಾಡುಗಳನ್ನು ನೋಡಿದಾಗ ಚಿತ್ರದ ಔಟ್‌ಪುಟ್‌ ಬಗ್ಗೆ ತುಂಬಾ ಖುಷಿಯಾಯಿತು. ಹೇಮಂತ್‌ ಮತ್ತವರ ತಂಡಕ್ಕಿರುವ ಆತ್ಮವಿಶ್ವಾಸವನ್ನು ಮೆಚ್ಚಲೇಬೇಕು. ಅನಂತನಾಗ್‌ , ಅಚ್ಯುತ್‌, ರಿಷಿ, ಸುಮನ್‌ ರಂಗನಾಥ್‌, ರೋಶಿನಿ ಪ್ರಕಾಶ್‌ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಜತೆಗೆ ಸಿನಿಮಾಟೋಗ್ರಫರ್‌ ಅದ್ವೈತ್‌, ಸಂಗೀತ ನಿರ್ದೇಶಕ ಚರಣ್‌ರಾಜ್‌ ಎಲ್ಲರೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಈ ಎಲ್ಲ ಕಾರಣಗಳ ಜತೆಗೆ ಸಿನಿಮಾದಲ್ಲಿರುವ ಕಂಟೆಂಟ್‌ ಜನರಿಗೆ ಇಷ್ಟವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಕವಲು ದಾರಿಯನ್ನು ನೋಡಿ ಎಂದು ಹೇಳುತ್ತೇನೆ. ಖಂಡಿತವಾಗಿಯೂ ಇದೊಂದು ಒಳ್ಳೆಯ ಸಿನಿಮಾ' ಎಂದು ಪುನೀತ್‌ ಹೇಳಿದ್ದಾರೆ.

ಇನ್ನು ಪಿಆರ್‌ಕೆ ಪ್ರೊಡಕ್ಷನ್‌ ಹೌಸ್‌ನಲ್ಲಿ ಸಿನಿಮಾ ನಿರ್ದೇಶನ ಮಾಡಲು ಅವಕಾಶ ಸಿಕ್ಕಿದ್ದು ನನಗೆ ದೊಡ್ಡ ಗೌರವ ಎಂದು ಹೇಳಿದ್ದಾರೆ ನಿರ್ದೇಶಕ ಹೇಮಂತ್‌ ರಾವ್‌. 'ಪುನೀತ್‌ ರಾಜ್‌ಕುಮಾರ್‌ ಮತ್ತು ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಇಬ್ಬರು ಸಿನಿಮಾ ನೋಡಿದ್ದು, ಸಿನಿಮಾದಲ್ಲಿ ತುಂಬಾ ಹೊಸತನವಿದೆ ಎಂದು ಹೇಳಿದ್ದಾರೆ. ಸಿನಿಮಾದ ನಿರೂಪಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿದೆ ಎಂದೂ ಅವರು ಹೇಳಿದ್ದಾರೆ'ಎಂದು ನಿರ್ದೇಶಕರು ಮಾಹಿತಿ ನೀಡುತ್ತಾರೆ. ಪಿಆರ್‌ಕೆ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಈ ಚಿತ್ರಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಂಡವಾಳ ಹೂಡಿದ್ದಾರೆ.

----

ಪಿಆರ್‌ಕೆ ಪ್ರೊಡಕ್ಷನ್ಸ್‌ ಕನ್ನಡ ಸಿನಿಮಾರಂಗದ ಗೌರವಾನ್ವಿತ ಸಂಸ್ಥೆ. ಅದರಲ್ಲಿ ನಾನು ಕೆಲಸ ಮಾಡಿದ್ದು ಖುಷಿಯ ವಿಚಾರ. ಸಿನಿಮಾ ನೋಡಿದ ಪುನೀತ್‌ ದಂಪತಿ ಚಿತ್ರದ ಗುಣಮಟ್ಟ ಮತ್ತು ಹೊಸತನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

-ಹೇಮಂತ್‌ ರಾವ್‌, ನಿರ್ದೇಶಕ

---

ಕವಲುದಾರಿ ಸಿನಿಮಾದ ಜಾನರ್‌ ಬೇರೆಯದ್ದೇ ಥರ ಇದೆ. ಹೇಮಂತ್‌ ಬ್ರಿಲಿಯಂಟ್‌ ಆಗಿ ಕಥೆ ಮಾಡಿದ್ದಾರೆ. ಜನಕ್ಕೆ ಈ ಸಿನಿಮಾ ಖಂಡಿತಾ ಇಷ್ಟವಾಗುತ್ತದೆ.

-ಪುನೀತ್‌ ರಾಜ್‌ಕುಮಾರ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌