ಆ್ಯಪ್ನಗರ

ಕಮಲ್ ಹಾಸನ್ ಮೇಲೆ ಕಣ್ಣಿಟ್ಟ ಪ್ರಶಾಂತ್ ನೀಲ್ & ರಾಜಮೌಳಿ; ಇದು ಫ್ಯಾನ್ಸ್ ಥ್ರಿಲ್ ಆಗುವ ವಿಷಯ!

ನಟ ಕಮಲ್ ಹಾಸನ್‌ ಎಂಥ ಮಹಾನ್ ನಟ ಎಂಬುದು ಇಡೀ ಸಿನಿ ಜಗತ್ತಿಗೆ ಗೊತ್ತಿದೆ. ವೈಯಕ್ತಿಕ ಕಾರಣಗಳಿಂದ ಅವರು ಸಿನಿಮಾರಂಗದಿಂದ ಕೊಂಚ ದೂರ ಉಳಿದಿದ್ದರು. ಆದರೆ ಈಗ ಪುನಃ ಸಿನಿಮಾರಂಗದಲ್ಲಿ ಅವರು ಸಕ್ರಿಯರಾಗಿದ್ದಾರೆ. ಸದ್ಯ 'ವಿಕ್ರಮ್' ಸಿನಿಮಾವನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ. ಇದೀಗ 'ಕೆಜಿಎಫ್: ಚಾಪ್ಟರ್ 2' ಖ್ಯಾತಿಯ ಪ್ರಶಾಂತ್ ನೀಲ್ ಮತ್ತು 'ಆರ್‌ಆರ್‌ಆರ್' ಖ್ಯಾತಿಯ ರಾಜಮೌಳಿ ಅವರು ಕಮಲ್ ಹಾಸನ್ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದಕ್ಕೆ ಕಾರಣವೇನು? ಮುಂದೆ ಓದಿ.

Authored byಅವಿನಾಶ್ ಜಿ. ರಾಮ್ | Vijaya Karnataka Web 24 May 2022, 3:31 pm

ಹೈಲೈಟ್ಸ್‌:

  • 'ವಿಕ್ರಮ್' ಸಿನಿಮಾದಲ್ಲಿ ನಟಿಸಿರುವ ಕಮಲ್ ಹಾಸನ್‌
  • ಕಮಲ್ ಹಾಸನ್‌ ಮೇಲೆ ಕಣ್ಣಿಟ್ಟ ಪ್ರಶಾಂತ್ & ರಾಜಮೌಳಿ
  • ಈ ಸುದ್ದಿ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡುವುದಂತೂ ಗ್ಯಾರಂಟಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web director prashanth neel  rajamouli kamal haasan
ಕಮಲ್ ಹಾಸನ್ ಮೇಲೆ ಕಣ್ಣಿಟ್ಟ ಪ್ರಶಾಂತ್ ನೀಲ್ & ರಾಜಮೌಳಿ; ಇದು ಫ್ಯಾನ್ಸ್ ಥ್ರಿಲ್ ಆಗುವ ವಿಷಯ!
ನಟ ಕಮಲ್ ಹಾಸನ್ ಒಂದಷ್ಟು ಸಮಯದಿಂದ ಬಣ್ಣದ ಲೋಕದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಕಮಲ್ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಅವರ ಬಹುನಿರೀಕ್ಷಿತ 'ವಿಕ್ರಮ್' ತೆರೆಗೆ ಬರಲು ಸಜ್ಜಾಗಿದೆ. 'ವಿಕ್ರಮ್‌' ಆದಮೇಲೆ ಕಮಲ್ ಹಾಸನ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ? ಸದ್ಯಕ್ಕೆ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಭಾರತದ ಇಬ್ಬರು ಸ್ಟಾರ್ ಡೈರೆಕ್ಟರ್‌ಗಳು ಕಮಲ್ ಮೇಲೆ ಕಣ್ಣಿಟ್ಟಿದ್ದಾರೆ. ಹೌದು, ಹೀಗೊಂದು ಗಾಸಿಪ್ ಬಲವಾಗಿ ಕೇಳಿಂದಿದೆ. 'ಕೆಜಿಎಫ್: ಚಾಪ್ಟರ್ 2' ಸಕ್ಸಸ್‌ನಲ್ಲಿ ತೇಲುತ್ತಿರುವ ಪ್ರಶಾಂತ್ ನೀಲ್ ಮತ್ತು 'ಆರ್‌ಆರ್‌ಆರ್‌' ಡೈರೆಕ್ಟರ್ ರಾಜಮೌಳಿ ಅವರ ಮುಂದಿನ ಸಿನಿಮಾಗಳಲ್ಲಿ ಕಮಲ್ ಹಾಸನ್ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಎನ್‌ಟಿಆರ್ ಜೊತೆಗೆ ಕಮಲ್?

'ಕೆಜಿಎಫ್‌: ಚಾಪ್ಟರ್ 2' ಸಕ್ಸಸ್‌ನಲ್ಲಿ ತೇಲುತ್ತಿರುವ ನಿರ್ದೇಶಕ ಪ್ರಶಾಂತ್ ನೀಲ್, ಸದ್ಯ ಪ್ರಭಾಸ್ ಜೊತೆಗೆ 'ಸಲಾರ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಆ ಸಿನಿಮಾದ ಶೇ.35ರಷ್ಟು ಶೂಟಿಂಗ್ ಮುಗಿಸಿರುವ ಅವರು, ಈಗ ಮುಂದಿನ ಹಂತದ ಶೂಟಿಂಗ್‌ಗೆ ಚಾಲನೆ ಕೊಟ್ಟಿದ್ದಾರೆ. ಈ ಮಧ್ಯೆ ಪ್ರಶಾಂತ್ ನೀಲ್ ಅವರು ಜೂ. ಎನ್‌ಟಿಆರ್‌ಗೂ ಸಿನಿಮಾ ಮಾಡೋದು ಫಿಕ್ಸ್ ಆಗಿದೆ. ಮೈತ್ರಿ ಮೂವೀ ಮೇಕರ್ಸ್‌ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಪ್ರಶಾಂತ್ ನೀಲ್ ಮತ್ತು ಜೂನಿಯರ್‌ ಎನ್‌ಟಿಆರ್ ಸಿನಿಮಾವು ಈ ವರ್ಷದ ಅಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಶುರುವಾಗುವ ಸಾಧ್ಯತೆ ಇದೆ. ಆ ಸಿನಿಮಾದಲ್ಲಿ ಕಮಲ್ ಹಾಸನ್‌ಗೆ ಒಂದು ಖಡಕ್ ಪಾತ್ರ ಇದೆಯಂತೆ. ಆ ಬಗ್ಗೆ ಅವರಿಗೆ ಅಪ್ರೋಚ್ ಮಾಡಲಾಗಿದ್ದು, ಕಮಲ್ ಕಡೆಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನಲಾಗಿದೆ. ಈಗಾಗಲೇ ಸಲಾರ್‌ನಲ್ಲಿ ಕಮಲ್ ಪುತ್ರಿ ಶ್ರುತಿ ಹಾಸನ್‌ಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ.
ಸೌತ್ ಟಾಕ್: ರಾಜಮೌಳಿ ದೃಶ್ಯಕಾವ್ಯದಲ್ಲಿ ಕಮಲ್‌ ಹಾಸನ್ ಮತ್ತು ರಜನಿ?
ಮಹೇಶ್‌ ಬಾಬು ಸಿನಿಮಾದಲ್ಲಿ ಕಮಲ್ ಹಾಸನ್‌?
'ಆರ್‌ಆರ್‌ಆರ್‌' ಸಿನಿಮಾದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿರುವ ನಿರ್ದೇಶಕ ರಾಜಮೌಳಿ ಈಗ ಮಹೇಶ್‌ ಬಾಬು ಜೊತೆಗೆ ಮುಂದಿನ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾ ಕೂಡ ಈಗಲೇ ಶುರುವಾಗುವುದಿಲ್ಲ. 2023ರ ನಂತರವೇ ಆ ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ. ಸದ್ಯಕ್ಕೆ ಕೇಳಿಬಂದಿರುವ ಮಾಹಿತಿ ಪ್ರಕಾರ, ಕಮಲ್ ಹಾಸನ್‌ ಅವರಿಗಾಗಿಯೇ ರಾಜಮೌಳಿ ಖಡಕ್ ಪಾತ್ರವೊಂದನ್ನು ಬರೆದಿದ್ದಾರಂತೆ. ಅದಕ್ಕಾಗಿ ಅವರಿಗೆ ಅಪ್ರೋಚ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಒಟ್ಟಿನಲ್ಲಿ ಸದ್ಯ ಇಂಡಿಯನ್ ಸಿನಿಮಾದ ಇಬ್ಬರು ಟಾಪ್ ಡೈರೆಕ್ಟರ್‌ಗಳ ಕಣ್ಣು ಕಮಲ್ ಮೇಲೆ ಇದೆ. ಇಬ್ಬರಿಗೆ ಯಾರಿಗೆ ಅವರ ಕಾಲ್‌ಶೀಟ್ ಸಿಗಲಿದೆ ಅನ್ನೋದು ಸದ್ಯದ ಕುತೂಹಲ.

Prashanth Neel: ಜೂ.ಎನ್‌ಟಿಆರ್ ಅಭಿನಯದ ಹೊಸ ಚಿತ್ರ ಘೋಷಣೆ: ಯಂಗ್ ಟೈಗರ್ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ!
ಇನ್ನು, ಕಮಲ್ ಹಾಸನ್ ಅವರ 'ವಿಕ್ರಮ್' ಮೇಲೆ ಎಲ್ಲರ ಗಮನ ಇದೆ. ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ಈ ಸಿನಿಮಾವು ಜೂನ್ 3ರಂದು ತೆರೆಗೆ ಬರುತ್ತಿದ್ದು, ಕಮಲ್‌ ಜೊತೆಗೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಕೂಡ ಬಣ್ಣ ಹಚ್ಚಿದ್ದಾರೆ. ಅಲ್ಲದೆ, ನಟ ಸೂರ್ಯ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಹಾಗಾಗಿ, 'ವಿಕ್ರಮ್‌' ಚಿತ್ರ ಸಿನಿಪ್ರಿಯರ ಪಾಲಿಗೆ ಹಬ್ಬವೇ ಸರಿ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌