ಶ್ರೀಮುರಳಿ ನಟನೆಯ ಭರಾಟೆ ಚಿತ್ರದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಈ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸೆಟ್ಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ.
ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಪ್ರಶಾಂತ್, ಭರಾಟೆ ಸೆಟ್ಗೆ ಭೇಟಿ ನೀಡಿದಾಗ ಶ್ರೀಮುರಳಿ 10 ವಿಲನ್ಗಳ ಜತೆ ಫೈಟ್ ಮಾಡುತ್ತಿದ್ದ ದೃಶ್ಯವನ್ನು ಶೂಟ್ ಮಾಡಲಾಗುತ್ತಿತ್ತು. ಈ ದೃಶ್ಯ ಮೂಡಿಬಂದ ರೀತಿಗೆ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭರಾಟೆ ಚಿತ್ರದಲ್ಲಿ ಸ್ಟನ್ನಿಂಗ್ ಫೈಟ್ ದೃಶ್ಯಗಳಿವೆ. ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣ ನೆಲಮಂಗಲದ ಬಳಿ ನಡೆದಿದೆ. ಅಂದ ಹಾಗೆ ಶ್ರೀಮುರಳಿ ಮತ್ತು ಪ್ರಶಾಂತ್ ನೀಲ್ ಭಾವ ಬಾಮೈದುನರು. ಹಾಗಾಗಿ ಚಿತ್ರೀಕರಣದ ವೇಳೆ ಶ್ರೀಮುರಳಿ ಜತೆ ಪ್ರಶಾಂತ್ ಶೂಟಿಂಗ್ ನೋಡಲು ಹೋಗಿದ್ದಾರೆ. ಭರಾಟೆ ಚಿತ್ರವನ್ನು ಚೇತನ್ ನಿರ್ದೇಶನ ಮಾಡುತ್ತಿದ್ದಾರೆ.
ಶ್ರೀಮುರಳಿ ಮುಂದಿನ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಕೆಜಿಎಫ್ 2 ನಂತರ ಈ ಚಿತ್ರ ಸೆಟ್ಟೇರಲಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ಉಗ್ರಂ ವೀರಂ ಎಂದು ಹೆಸರಿಡಲಾಗಿದೆ. ಉಗ್ರಂ ಚಿತ್ರವನ್ನು ಪ್ರಶಾಂತ್ನೀಲ್ ನಿರ್ದೇಶನ ಮಾಡಿದ್ದರು. ಈ ಚಿತ್ರದ ಸೀಕ್ವೆಲ್ ಉಗ್ರಂ ವೀರಂ ಆಗಿದೆ.
ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಪ್ರಶಾಂತ್, ಭರಾಟೆ ಸೆಟ್ಗೆ ಭೇಟಿ ನೀಡಿದಾಗ ಶ್ರೀಮುರಳಿ 10 ವಿಲನ್ಗಳ ಜತೆ ಫೈಟ್ ಮಾಡುತ್ತಿದ್ದ ದೃಶ್ಯವನ್ನು ಶೂಟ್ ಮಾಡಲಾಗುತ್ತಿತ್ತು. ಈ ದೃಶ್ಯ ಮೂಡಿಬಂದ ರೀತಿಗೆ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭರಾಟೆ ಚಿತ್ರದಲ್ಲಿ ಸ್ಟನ್ನಿಂಗ್ ಫೈಟ್ ದೃಶ್ಯಗಳಿವೆ. ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣ ನೆಲಮಂಗಲದ ಬಳಿ ನಡೆದಿದೆ. ಅಂದ ಹಾಗೆ ಶ್ರೀಮುರಳಿ ಮತ್ತು ಪ್ರಶಾಂತ್ ನೀಲ್ ಭಾವ ಬಾಮೈದುನರು. ಹಾಗಾಗಿ ಚಿತ್ರೀಕರಣದ ವೇಳೆ ಶ್ರೀಮುರಳಿ ಜತೆ ಪ್ರಶಾಂತ್ ಶೂಟಿಂಗ್ ನೋಡಲು ಹೋಗಿದ್ದಾರೆ. ಭರಾಟೆ ಚಿತ್ರವನ್ನು ಚೇತನ್ ನಿರ್ದೇಶನ ಮಾಡುತ್ತಿದ್ದಾರೆ.
ಶ್ರೀಮುರಳಿ ಮುಂದಿನ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಕೆಜಿಎಫ್ 2 ನಂತರ ಈ ಚಿತ್ರ ಸೆಟ್ಟೇರಲಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ಉಗ್ರಂ ವೀರಂ ಎಂದು ಹೆಸರಿಡಲಾಗಿದೆ. ಉಗ್ರಂ ಚಿತ್ರವನ್ನು ಪ್ರಶಾಂತ್ನೀಲ್ ನಿರ್ದೇಶನ ಮಾಡಿದ್ದರು. ಈ ಚಿತ್ರದ ಸೀಕ್ವೆಲ್ ಉಗ್ರಂ ವೀರಂ ಆಗಿದೆ.