ಆ್ಯಪ್ನಗರ

ಶ್ರೀಮುರಳಿ ಫೈಟ್‌ ನೋಡಲು ಬಂದ ಪ್ರಶಾಂತ್‌ ನೀಲ್‌

ಶ್ರೀಮುರಳಿ ನಟನೆಯ ಭರಾಟೆ ಚಿತ್ರದ ಶೂಟಿಂಗ್‌ ಭರದಿಂದ ನಡೆಯುತ್ತಿದೆ. ಈ ಚಿತ್ರದ ಕ್ಲೈಮಾಕ್ಸ್‌ ಚಿತ್ರೀಕರಣದ ವೇಳೆ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಸೆಟ್‌ಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ.

Vijaya Karnataka 20 Mar 2019, 7:00 am
ಶ್ರೀಮುರಳಿ ನಟನೆಯ ಭರಾಟೆ ಚಿತ್ರದ ಶೂಟಿಂಗ್‌ ಭರದಿಂದ ನಡೆಯುತ್ತಿದೆ. ಈ ಚಿತ್ರದ ಕ್ಲೈಮಾಕ್ಸ್‌ ಚಿತ್ರೀಕರಣದ ವೇಳೆ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಸೆಟ್‌ಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ.
Vijaya Karnataka Web prashanth-neel


ಈಗಾಗಲೇ ಕೆಜಿಎಫ್‌ ಚಾಪ್ಟರ್‌ 2 ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಪ್ರಶಾಂತ್‌, ಭರಾಟೆ ಸೆಟ್‌ಗೆ ಭೇಟಿ ನೀಡಿದಾಗ ಶ್ರೀಮುರಳಿ 10 ವಿಲನ್‌ಗಳ ಜತೆ ಫೈಟ್‌ ಮಾಡುತ್ತಿದ್ದ ದೃಶ್ಯವನ್ನು ಶೂಟ್‌ ಮಾಡಲಾಗುತ್ತಿತ್ತು. ಈ ದೃಶ್ಯ ಮೂಡಿಬಂದ ರೀತಿಗೆ ಪ್ರಶಾಂತ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭರಾಟೆ ಚಿತ್ರದಲ್ಲಿ ಸ್ಟನ್ನಿಂಗ್‌ ಫೈಟ್‌ ದೃಶ್ಯಗಳಿವೆ. ಕ್ಲೈಮಾಕ್ಸ್‌ ದೃಶ್ಯದ ಚಿತ್ರೀಕರಣ ನೆಲಮಂಗಲದ ಬಳಿ ನಡೆದಿದೆ. ಅಂದ ಹಾಗೆ ಶ್ರೀಮುರಳಿ ಮತ್ತು ಪ್ರಶಾಂತ್‌ ನೀಲ್‌ ಭಾವ ಬಾಮೈದುನರು. ಹಾಗಾಗಿ ಚಿತ್ರೀಕರಣದ ವೇಳೆ ಶ್ರೀಮುರಳಿ ಜತೆ ಪ್ರಶಾಂತ್‌ ಶೂಟಿಂಗ್‌ ನೋಡಲು ಹೋಗಿದ್ದಾರೆ. ಭರಾಟೆ ಚಿತ್ರವನ್ನು ಚೇತನ್‌ ನಿರ್ದೇಶನ ಮಾಡುತ್ತಿದ್ದಾರೆ.

ಶ್ರೀಮುರಳಿ ಮುಂದಿನ ಚಿತ್ರವನ್ನು ಪ್ರಶಾಂತ್‌ ನೀಲ್‌ ನಿರ್ದೇಶನ ಮಾಡಲಿದ್ದಾರೆ. ಕೆಜಿಎಫ್‌ 2 ನಂತರ ಈ ಚಿತ್ರ ಸೆಟ್ಟೇರಲಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ಉಗ್ರಂ ವೀರಂ ಎಂದು ಹೆಸರಿಡಲಾಗಿದೆ. ಉಗ್ರಂ ಚಿತ್ರವನ್ನು ಪ್ರಶಾಂತ್‌ನೀಲ್‌ ನಿರ್ದೇಶನ ಮಾಡಿದ್ದರು. ಈ ಚಿತ್ರದ ಸೀಕ್ವೆಲ್‌ ಉಗ್ರಂ ವೀರಂ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌