ಆ್ಯಪ್ನಗರ

ಬಿದ್ದ ಹುಡುಗನನ್ನು ಮೇಲಕ್ಕೆತ್ತಿ ಸೆಲ್ಫಿ ತೆಗೆದುಕೊಂಡ ಯಶ್

ನಿನ್ನೆ, ಭಾನುವಾರ 03 ಮಾರ್ಚ್ 2019ರಂದು ನೆಲಮಂಗಲದ ಮಾದವಾರದ ನೈಸ್ ಮೈದಾನದಲ್ಲಿ ನಡೆಯುತ್ತಿರುವ ದಾಸನಪುರ ಕ್ರಿಕೆಟ್ ಲೀಗ್ ಪಂದ್ಯಕ್ಕೆ ಚಾಲನೆ ನೀಡಲು ಯಶ್ ಆಗಮಿಸಿದ್ದರು. ಈ ವೇಳೆ ನಟ ಯಶ್ ಅವರನ್ನು ನೋಡಲು ಅಭಿಮಾನಿಗಳಿಂದ ಭಾರೀ ನೂಕು ನುಗ್ಗಲು ಉಂಟಾಯಿತು.

Vijaya Karnataka Web 4 Mar 2019, 7:48 pm
ಕನ್ನಡದ ರಾಕಿಂಗ್ ಸ್ಟಾರ್ ಯಶ್ ನೆಲಮಂಗಲದ ಬಳಿ ಕ್ರಿಕೆಟ್ ಮೈದಾನದಲ್ಲಿ ಮಾನವೀಯತೆ ಮರೆದಿದ್ದಾರೆ. ಕುಸಿದು ಬಿದ್ದ ತಮ್ಮ ಅಭಿಮಾನಿಯನ್ನು ಕೈ ಹಿಡಿದು ಎತ್ತಿ ನಿಲ್ಲಿಸಿದ್ದೂ ಅಲ್ಲದೇ ಅವರ ಜೊತೆ ಸೆಲ್ಫೀ ತೆಗೆದುಕೊಂಡು ಅವರ ನೋವಾಗಿದ್ದ ಮೈ-ಮನಸ್ಸಿಗೆ ಖುಷಿಯನ್ನು ಉಂಟು ಮಾಡಿದ್ದಾರೆ.
Vijaya Karnataka Web yash0403


ನಿನ್ನೆ, ಭಾನುವಾರ 03 ಮಾರ್ಚ್ 2019ರಂದು ನೆಲಮಂಗಲದ ಮಾದವಾರದ ನೈಸ್ ಮೈದಾನದಲ್ಲಿ ನಡೆಯುತ್ತಿರುವ ದಾಸನಪುರ ಕ್ರಿಕೆಟ್ ಲೀಗ್ ಪಂದ್ಯಕ್ಕೆ ಚಾಲನೆ ನೀಡಲು ಯಶ್ ಆಗಮಿಸಿದ್ದರು. ಈ ವೇಳೆ ನಟ ಯಶ್ ಅವರನ್ನು ನೋಡಲು ಅಭಿಮಾನಿಗಳಿಂದ ಭಾರೀ ನೂಕು ನುಗ್ಗಲು ಉಂಟಾಯಿತು. ಈ ವೇಳೆ ಯಶ್ ಅಭಿಮಾನಿಯೊಬ್ಬರು ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಯಶ್, ಕೂಡಲೇ ಅವರನ್ನು ಕೈ ಹಿಡಿದು ಮೇಲಕ್ಕೆ ಎತ್ತಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ಕುಸಿದು ಬಿದ್ದ ಅಭಿಮಾನಿ ಜೊತೆ ಸೆಲ್ಫಿ ತೆಗೆದುಕೊಂಡು ನಟ ಯಶ್ ಅವರು ತಮ್ಮ ಅಭಿಮಾನಿಯ ಮನದಾಳದ ಆಸೆಯನ್ನು ಈಡೇರಿಸಿದ್ದಾರೆ.

ನೆಲಮಂಗಲದ ಮಾದವಾರದ ನೈಸ್ ಮೈದಾನದಲ್ಲಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ದಾಸನಪುರ ಕ್ರಿಕೆಟ್ ಪ್ರೀಮಿಯರ್ ಲೀಗ್‍ಗೆ ನಟಿ ಹರಿಪ್ರಿಯಾ ಹಾಗೂ ಕ್ರಿಕೆಟಿಗ ದೊಡ್ಡ ಗಣೇಶ್ ಚಾಲನೆ ನೀಡಿದ್ದರು. ರಾಕಿಂಗ್ ಸ್ಟಾರ್ ಯಶ್ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಈ ವೇಳೆ, ನಟಿ ಹರಿಪ್ರಿಯಾ ಮಾತನಾಡಿ "ನಾನು ಕ್ರಿಕೆಟ್ ಆಟಗಾರಳಲ್ಲ. ಆದರೆ, ಇಷ್ಟಪಟ್ಟು ಕ್ರಿಕೆಟ್ ನೋಡುತ್ತೇನೆ. ಎಲ್ಲರೂ ಚೆನ್ನಾಗಿ ಆಡಿ" ಎಂದು ಹೇಳಿ ಅಲ್ಲಿದ್ದ ಗ್ರಾಮೀಣ ಪ್ರತಿಭೆಗಳಾದ 8 ತಂಡಗಳಿಗೆ ಹಾರೈಸಿ ಹುರಿದುಂಬಿಸಿದರು.

ಒಟ್ಟಿನಲ್ಲಿ, ಕೆಜಿಎಫ್ ಚಿತ್ರದ ಮೂಲಕ ಕನ್ನಡದ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ಯಶ್ ಅವರು ತಮ್ಮ ಅಭಿಮಾನಿಗಳಿಗೆ ತೋರಿಸಿದ ಪ್ರೀತಿ ಕಂಡು ಅಲ್ಲಿದ್ದವರು ಮೂಕ ವಿಸ್ಮಿತರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌