ಆ್ಯಪ್ನಗರ

Yash: ಮಲಯಾಳಂ ನಿರ್ದೇಶಕಿ ಜತೆಗೆ ಯಶ್ ಮುಂದಿನ ಸಿನಿಮಾ? 'ರಾಕಿ ಭಾಯ್‌' ಫ್ಯಾನ್ಸ್‌ಗೆ ಗುಡ್ ನ್ಯೂಸ್‌

Yash 19: 'ರಾಕಿ ಭಾಯ್' ಯಶ್ ಅವರಿಗೆ ಈಗ ದೇಶಾದ್ಯಂತ ಫ್ಯಾನ್ಸ್ ಇದ್ದಾರೆ. 'ಕೆಜಿಎಫ್' ಸರಣಿಯ ಸಿನಿಮಾಗಳು ಅವರಿಗೆ ಅಂಥದ್ದೊಂದು ಜನಪ್ರಿಯತೆಯನ್ನು ತಂದುಕೊಟ್ಟಿವೆ. ಹಾಗಾಗಿ, ಅವರ ಮುಂದಿನ 19ನೇ ಸಿನಿಮಾದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಆದರೆ ಯಶ್ ಅವರು ಮಾತ್ರ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ರಹಸ್ಯ ಕಾಯ್ದುಕೊಂಡಿದ್ದಾರೆ. ಈ ಮಧ್ಯೆ ಯಶ್ ಅವರ ಹೊಸ ಸಿನಿಮಾದ ಬಗ್ಗೆ ಒಂದು ಲೇಟೆಸ್ಟ್ ಅಪ್‌ಡೇಟ್ ಸಿಕ್ಕಿದೆ. ಹೌದು, ಯಶ್ ಸಿನಿಮಾವನ್ನು ಮಲಯಾಳಂನ ನಿರ್ದೇಶಕಿಯೊಬ್ಬರು ಡೈರೆಕ್ಟ್ ಮಾಡಲಿದ್ದಾರೆ.

Authored byಅವಿನಾಶ್ ಜಿ. ರಾಮ್ | Vijaya Karnataka Web 17 Apr 2023, 1:02 pm

ಹೈಲೈಟ್ಸ್‌:

  • ರಾಕಿ ಭಾಯ್ ಯಶ್ ಹೊಸ ಸಿನಿಮಾದ ಬಗ್ಗೆ ಹೊರಬಿತ್ತು ಬ್ರೇಕಿಂಗ್ ನ್ಯೂಸ್‌
  • ಯಶ್ ಹೊಸ ಸಿನಿಮಾವನ್ನು ಡೈರೆಕ್ಟ್ ಮಾಡಲಿದ್ದಾರೆ ಮಲಯಾಳಂ ನಿರ್ದೇಶಕಿ
  • ಈ ಸಿನಿಮಾವು ಯಾವಾಗ ಶುರುವಾಗಲಿದೆ? ನಿರ್ಮಾಪಕರು ಯಾರು? ಇಲ್ಲಿದೆ ಮಾಹಿತಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web YASH
Yash: ಮಲಯಾಳಂ ನಿರ್ದೇಶಕಿ ಜತೆಗೆ ಯಶ್ ಮುಂದಿನ ಸಿನಿಮಾ? 'ರಾಕಿ ಭಾಯ್‌' ಫ್ಯಾನ್ಸ್‌ಗೆ ಗುಡ್ ನ್ಯೂಸ್‌
'ರಾಕಿಂಗ್ ಸ್ಟಾರ್‌' ಯಶ್ ಅವರ 'ಕೆಜಿಎಫ್: ಚಾಪ್ಟರ್ 2' ಸಿನಿಮಾ ತೆರೆಕಂಡ ಒಂದು ವರ್ಷ ತುಂಬಿದೆ. ಆದರೂ ಕೂಡ ಅವರ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಮಾತ್ರ ಈವರೆಗೂ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಆದ್ರೆ ಸದ್ಯದ ಬ್ರೇಕಿಂಗ್ ನ್ಯೂಸ್ ಏನಪ್ಪಾ ಅಂದ್ರೆ, ಯಶ್ ಅವರ ಹೊಸ ಸಿನಿಮಾಗೆ ನಿರ್ದೇಶಕರು ಫಿಕ್ಸ್ ಆಗಿದ್ದಾರೆ. ಜತೆಗೆ ನಿರ್ಮಾಣ ಸಂಸ್ಥೆಯೂ ಕನ್ಫರ್ಮ್ ಆಗಿದೆ. ಆದರೆ ಈ ಕಾಂಬಿನೇಷನ್‌ ಬಗ್ಗೆ ಕೇಳಿಯೇ ಸಿನಿಪ್ರಿಯರು ಥ್ರಿಲ್ ಆಗಿದ್ದಾರೆ. ಹಾಗಾದ್ರೆ, ಆ ಹೊಸ ಸಿನಿಮಾಗೆ ಡೈರೆಕ್ಟರ್ ಯಾರು? ಮುಂದೆ ಓದಿ.

ಗೀತು ಮೋಹನ್‌ದಾಸ್ ಜತೆಗೆ ಯಶ್ ಸಿನಿಮಾ

ಮಲಯಾಳಂ ಹೆಸರಾಂತ ನಿರ್ದೇಶಕಿ, ನಟಿ ಗೀತು ಮೋಹನ್‌ದಾಸ್ ಅವರು ಯಶ್ ಅವರ ಮುಂದಿನ ಸಿನಿಮಾಗೆ ನಿರ್ದೇಶನ ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ಇದೊಂದು ಇಂಟರ್‌ನ್ಯಾಷನಲ್‌ ಲೆವೆಲ್‌ ಸಿನಿಮಾ ಆಗಿರಲಿದೆಯಂತೆ. ಈವರೆಗೂ ಯಶ್ ಅವರ ಮುಂದಿನ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದೆ ಎಂದೇ ಮಾಹಿತಿ ಇತ್ತು. ಇದೀಗ ಅದು ಕೂಡ ನಿಜವಾಗಲಿದೆ. ಮೂಲಗಳ ಪ್ರಕಾರ, ಯಶ್ ಮತ್ತು ಗೀತು ಮೋಹನ್‌ದಾಸ್ ಕಾಂಬಿನೇಷನ್‌ನ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದೆಯಂತೆ. ಶೀಘ್ರದಲ್ಲೇ ಈ ಸಿನಿಮಾದ ಘೋಷಣೆ ಆಗಲಿದೆ.

Yash Next Movie: ಯಶ್ ಜೊತೆ ಸಿನಿಮಾ ಮಾಡ್ತೀನಿ ಎಂದ ನಿರ್ಮಾಪಕ ದಿಲ್‌ರಾಜು; 'ಜಟಾಯು' ಚಿತ್ರದಲ್ಲಿ ರಾಕಿಂಗ್ ಸ್ಟಾರ್?

ಗೀತು ಮೋಹನ್‌ದಾಸ್ ಬಗ್ಗೆ ಹೆಚ್ಚಿನ ಮಾಹಿತಿ

ಮಾಲಿವುಡ್‌ನಲ್ಲಿ ಹೆಸರು ಮಾಡಿರುವ ಗೀತು ಮೋಹನ್‌ದಾಸ್ ಅವರು ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ಟಿ ಕೊಟ್ಟರು. 1986ರಲ್ಲಿ ಗೀತು ಬಾಲನಟಿಯಾಗಿ ಅಭಿನಯಿಸಿದ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡರು. ನಂತರ 2000ರಲ್ಲಿ ಪೂರ್ಣಪ್ರಮಾಣದ ನಟಿಯಾಗಿ ಮಿಂಚಿದರು. ಆನಂತರ ಸಾಲು ಮಲಯಾಳಂ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಗೀತು, ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.


2009ರಲ್ಲಿ ಛಾಯಾಗ್ರಾಹಕ ರಾಜೀವ್ ರವಿ ಅವರನ್ನು ವಿವಾಹದ ಮೇಲೆ ನಟನೆಯಿಂದ ದೂರ ಉಳಿದ ಗೀತು, ನಿರ್ದೇಶನದತ್ತ ಮುಖ ಮಾಡಿದರು. 'ಕೆಳ್ಕುನ್ನುಂಡೊ' (Kelkkunnundo) ಎಂಬ ಮಲಯಾಳಂ ಕಿರುಚಿತ್ರವನ್ನು ನಿರ್ದೇಶನ ಮಾಡಿದರು. 2014ರಲ್ಲಿ ಗೀತು ಹಿಂದಿಯಲ್ಲಿ ನಿರ್ದೇಶನ ಮಾಡಿದ ಮೊದಲ ಪೂರ್ಣ ಪ್ರಮಾಣದ ಸಿನಿಮಾ 'ಲೈಯರ್ಸ್ ಡೈಸ್‌'. ಈ ಸಿನಿಮಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದ್ದಲ್ಲದೇ, ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತು. ಆನಂತರ ನಟ ನಿವಿನ್ ಪೌಲಿ ಜತೆಗೆ 'ಮೂಥನ್‌' ಸಿನಿಮಾವನ್ನು ಗೀತು ಮೋಹನ್‌ದಾಸ್ ಮಾಡಿದರು. 2019ರಲ್ಲಿ ತೆರೆಕಂಡ ಈ ಸಿನಿಮಾ ಕೂಡ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತ್ತು.

KGF 2: ಒಂದು ವರ್ಷದ ಸಂಭ್ರಮದಲ್ಲಿ 'ಕೆಜಿಎಫ್‌ 2'; ಈ ಸಿನಿಮಾ ಸೃಷ್ಟಿಸಿರುವ ದಾಖಲೆಗಳು ಒಂದೆರಡಲ್ಲ!

ಹೊಸ ನಿರ್ದೇಶಕರಿಗೆ ಯಶ್ ಪ್ರೋತ್ಸಾಹ

ನಟ ಯಶ್ ಯಾವಾಗಲೂ ಯುವ ನಿರ್ದೇಶಕರಿಗೆ ಪ್ರೋತ್ಸಾಹ ನೀಡಿದ್ದಾರೆ. 'ಗೂಗ್ಲಿ', ಪವನ್ ಒಡೆಯರ್ ನಿರ್ದೇಶನದ ಮೂರನೇ ಸಿನಿಮಾ. 'ಗಜಕೇಸರಿ', ಕೃಷ್ಣ ಅವರ ಮೊದಲ ಸಿನಿಮಾ. 'ಮಿ. & ಮಿಸೆಸ್‌ ರಾಮಾಚಾರಿ' ಕೂಡ ಸಂತೋಷ್ ಆನಂದ್‌ರಾಮ್ ಅವರ ಮೊದಲ ಸಿನಿಮಾ. 'ಮಾಸ್ಟರ್ ಪೀಸ್' ಕೂಡ ಮಂಜು ಮಾಂಡವ್ಯ ಅವರ ಮೊದಲ ಸಿನಿಮಾ. ಇನ್ನು, ಪ್ರಶಾಂತ್ ನೀಲ್ ಅವರಿಗೆ 'ಕೆಜಿಎಫ್' ಕೂಡ ಎರಡನೇ ಸಿನಿಮಾ. ಈಗ ಗೀತು ಮೋಹನ್‌ದಾಸ್‌ ಕೂಡ ತಮ್ಮ ಮೂರನೇ ಸಿನಿಮಾವನ್ನು ಯಶ್ ಜತೆ ಮಾಡಲಿದ್ದಾರೆ ಎನ್ನಲಾಗಿದೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌