ಆ್ಯಪ್ನಗರ

ಪೈಲ್ವಾನ್ ಸಿನಿಮಾ ಯಾಕೆ ನೋಡಬೇಕು? ಇಲ್ಲಿದೆ ಅಸಲಿ ಕಾರಣ

ಪೈಲ್ವಾನ್‌ ಕ್ರೀಡೆಯನ್ನು ಆಧರಿಸಿದ ಸಿನಿಮಾ. ಹಾಗಾಗಿ ಎಲ್ಲವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥ ಅಂಶಗಳು ಇಲ್ಲಿವೆ. ಸುದೀಪ್‌ ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ಮಾಡಿದ್ದಾರೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಎಸ್ ಕೃಷ್ಣ.

Vijaya Karnataka 12 Sep 2019, 6:00 am
* ಶರಣು ಹುಲ್ಲೂರು
Vijaya Karnataka Web pailwaan1


ದೇಶದಾದ್ಯಂತ ಇಂದು (ಸೆಪ್ಟೆಂಬರ್ 12) ಮೂರು ಸಾವಿರಕ್ಕೂ ಹೆಚ್ಚು ತೆರೆಗಳಲ್ಲಿ ರಿಲೀಸ್‌ ಆಗುತ್ತಿರುವ ಸುದೀಪ್‌ ನಟನೆಯ 'ಪೈಲ್ವಾನ್‌' ಸಿನಿಮಾ ಬಗ್ಗೆ ಅಭಿಮಾನಿಗಳ ಕಾತುರ, ಸಂಭ್ರಮ ಮುಗಿಲುಮುಟ್ಟಿದ್ದು, ಇದೇ ಮೊದಲ ಬಾರಿಗೆ ಸುದೀಪ್‌ ಅವರು ಕುಸ್ತಿಪಟು ಹಾಗೂ ಬಾಕ್ಸರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ನಾವು ಮೊದಲು ಅಂದುಕೊಂಡಿದ್ದು ಕೇವಲ ಕನ್ನಡ ಸಿನಿಮಾ ಅಂತ. ನಂತರ ಅದು ಊಹೆಗೂ ಮೀರಿದ ಚಿತ್ರವಾಯಿತು. ಹಾಗೆ ಆಗುವುದಕ್ಕೆ ಕಾರಣ, ಆಯ್ಕೆ ಮಾಡಿಕೊಂಡ ಕಥೆ, ಮೇಕಿಂಗ್‌ ಮತ್ತು ತಾರಾಗಣ. ಈ ಸಂಗಮವೇ ಸಿನಿಮಾ ನೋಡುವಂತೆ ಪ್ರೇರೇಪಿಸುತ್ತಿದೆ' ಎನ್ನುತ್ತಾರೆ ಈ ಸಿನಿಮಾದ ನಿರ್ದೇಶಕ ಎಸ್‌.ಕೃಷ್ಣ. ಸುದೀಪ್ 'ಪೈಲ್ವಾನ್' ಬಗ್ಗೆ ಭವಿಷ್ಯ ನುಡಿದ ರವಿಚಂದ್ರನ್: ಹೀಗೆ ಹೇಳಿದ್ದೇಕೆ ರವಿಮಾಮ?

ಈ ಸಿನಿಮಾದ ಕುರಿತು ನಿರ್ದೇಶಕರು ಲವಲವಿಕೆ ಜತೆ ಮಾತನಾಡಿರುವ ನಿರ್ದೇಶಕ ಕೃಷ್ಣ ಹೇಳಿದ್ದಿಷ್ಟು. 'ಪೈಲ್ವಾನ್‌ ನನ್ನ ಕಲ್ಪನೆಯಾದರೂ, ಸುದೀಪ್‌ ಅವರು ಅದಕ್ಕೆ ಜೀವ ತುಂಬಿದರು. ಇವತ್ತು ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವುದಕ್ಕೆ ಕಾರಣವೂ ಅವರೇ. ಈ ಚಿತ್ರಕ್ಕಾಗಿ ಅವರು ಮಾಡಿಕೊಂಡ ತಯಾರಿಯನ್ನು ಮರೆಯುವಂತಿಲ್ಲ. ಅವರ ಅಭಿಮಾನಿಗಳ ಜತೆ ಜತೆಗೆ ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಇಷ್ಟವಾಗುವಂಥ ಅಂಶಗಳು ಸಿನಿಮಾದಲ್ಲಿವೆ. ಇದೇ ಸಿನಿಮಾದ ವಿಶೇಷತೆ' ಎಂದಿದ್ದಾರೆ ಅವರು.

ಇದು ಕ್ರೀಡೆಯನ್ನು ಆಧರಿಸಿದ ಸಿನಿಮಾ. ಪ್ರತಿಯೊಬ್ಬರೂ ಕ್ರೀಡೆಯ ಜತೆಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಪೈಲ್ವಾನ್‌ ಎಲ್ಲ ವರ್ಗದ ಜನರಿಗೂ ಇಷ್ಟವಾಗುವಂಥ ಚಿತ್ರ ಎನ್ನುತ್ತದೆ ಚಿತ್ರತಂಡ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದ್ದು, ಆಯಾ ಭಾಷೆಯಲ್ಲಿ ಆಕರ್ಷಕ ಶೀರ್ಷಿಕೆ ಇಡಲಾಗಿದೆ. ಈಗಾಗಲೇ ರಿಲೀಸ್‌ ಆಗಿರುವ ಟ್ರೇಲರ್‌, ಟೀಸರ್‌ ಮತ್ತು ಹಾಡುಗಳು ಗಮನ ಸೆಳೆದಿದ್ದರಿಂದ ನಿರೀಕ್ಷೆ ಹೆಚ್ಚಾಗಿದೆ.

'ಈ ಸಿನಿಮಾದ ಮತ್ತೊಂದು ಹೆಚ್ಚುಗಾರಿಗೆ ಎಂದರೆ, ಇದೇ ಮೊದಲ ಬಾರಿಗೆ ದಕ್ಷಿಣ ಭಾರತ ಸಿನಿಮಾದಲ್ಲಿ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ನಾನಾ ಭಾಷೆಯ ಕಲಾವಿದರ ಸಂಗಮವೇ ಈ ಸಿನಿಮಾದಲ್ಲಿದೆ. ಅದ್ಧೂರಿಯಾಗಿ ಮೂಡಿ ಬಂದ ಕನ್ನಡ ಸಿನಿಮಾವಿದು ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತಿದೆ' ಎನ್ನುತ್ತಾರೆ ಕೃಷ್ಣ.

ಮೂರು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೈಲ್ವಾನ್‌ ರಿಲೀಸ್‌ ಆಗುತ್ತಿದ್ದು, ಆರ್‌ಆರ್‌ಆರ್‌ ಮೋಷನ್‌ ಪಿಕ್ಚರ್ಸ್‌ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಸ್ವಪ್ನಾ ಕೃಷ್ಣ ನಿರ್ಮಾಪಕಿ ಆಗಿದ್ದಾರೆ. ಆಕಾಂಕ್ಷಾ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು, ಕಬೀರ್‌ ದುಹಾನ್‌ ಸಿಂಗ್‌, ಶರತ್‌ ಲೋಹಿತಾಶ್ವ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌