ಸ್ಯಾಂಡಲ್ವುಡ್ನ 'ಅಭಿನಯ ಚಕ್ರವರ್ತಿ' ಖ್ಯಾತಿಯ ನಟ ಕಿಚ್ಚ ಸುದೀಪ್ ಅವರು ಸದ್ಯಕ್ಕೆ 'ಪೈಲ್ವಾನ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇತ್ತೀಚಿಗಷ್ಟೇ ಅವರು ತೆಲುಗಿನ 'ಸೈರಾ ನರಸಿಂಹ ರೆಡ್ಡಿ' ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಪೈಲ್ವಾನ್ ಶೂಟಿಂಗ್ ಮುಗಿದ ಬಳಿಕ ಕಿಚ್ಚ ಸುದೀಪ್ ಅವರು 'ಬಿಲ್ಲ ರಂಗ ಬಾಷಾ' ಚಿತ್ರದಲ್ಲಿ ನಟಿಸಲಿದ್ದು ಇದು ಅವರ ವೃತ್ತಿಜೀವನದ 'ದುಬಾರಿ ಚಿತ್ರ' ಎಂದು ಹೇಳಲಾಗುತ್ತಿದೆ.
ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಕಿಚ್ಚ ಸುದೀಪ್ ನಾಯಕರಾಗಿ ನಟಿಸಲಿದ್ದು, ಈ ಚಿತ್ರದ ಬಜೆಟ್ ಬರೋಬ್ಬರಿ 75 ಕೋಟಿ ರುಪಾಯಿ ಎಂದು ಹೇಳಲಾಗಿದೆ. ಸುದೀಪ್ ಅವರ 'ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ' ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಇದೊಂದು ಸಾಹಸಮಯ ಚಿತ್ರವಾಗಿರುವುದರಿಂದ ಚಿತ್ರಕ್ಕೆ ಅದ್ದೂರಿ ಮೇಕಿಂಗ್ ಹಾಗೂ ಭಾರೀ ಬಜೆಟ್ ಅವಶ್ಯಕವಿದೆ ಎನ್ನಲಾಗಿದೆ. ಈ ಚಿತ್ರಕ್ಕೆ 'ಒನ್ಸ್ ಅಪಾನ್ ಎ ಟೈಮ್ ಇನ್ 2209 ಎಡಿ' ಎಂಬ ಟ್ಯಾಗ್ ಲೈನ್ ಇಡಲಾಗಿದ್ದು ಕ್ರಿ.ಶ 2209ರ ಕಾಲಘಟ್ಟದಲ್ಲಿ ಈ ಚಿತ್ರದ ಕಥೆ ಸಾಗಲಿದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ನಟ ಕಿಚ್ಚ ಸುದೀಪ್ ಅವರು 'ಪೈಲ್ವಾನ್', 'ಕೋಟಿಗೊಬ್ಬ 3', 'ದಬಾಂಗ್ 3' ಚಿತ್ರಗಳಲ್ಲಿ ಬಿಜಿಯಾಗಿದ್ದು ಈ ಚಿತ್ರಗಳ ಬಳಿಕ ಬಿಲ್ಲ ರಂಗ ಬಾಷಾ ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ತೊಡಗಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್ವುಡ್ ಚಿತ್ರಗಳು ಕೂಡ ಭಾರೀ ಬಜೆಟ್ ಹಾಗೂ ಮೇಕಿಂಗ್ ಮೂಲಕ ಸದ್ದು ಮಾಡತೊಡಗಿವೆ. ಅಷ್ಟೇ ಅಲ್ಲ, ಕನ್ನಡವೂ ಸೇರಿದಂತೆ, ಬಹಳಷ್ಟು ಭಾಷೆಗಳಲ್ಲಿ ಬಿಡುಗಡೆ ಕಾಣುತ್ತಿದ್ದು ಕನ್ನಡದ ಮಾರ್ಕೆಟ್ ಇಂಡಿಯಾ ಗಡಿಯನ್ನು ಮೀರಿ ವಿಸ್ತರಿಸತೊಡಗಿದೆ ಎನ್ನಬಹುದು.
ಅಂದಹಾಗೆ, ಕಿಚ್ಚ ಸುದೀಪ್ ಅವರು ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರ ಮುಂಬರುವ ಚಿತ್ರವಾದ 'ಉದ್ಘರ್ಷ' ಟ್ರೇಲರ್ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಇತ್ತೀಚಿಗಷ್ಟೇ ಆ ಟ್ರೇಲರ್ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 'ಯಜಮಾನ' ಹಾಗೂ 'ಪೈಲ್ವಾನ್' ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿರುವ ನಟ ಠಾಕೂರ್ ಅನೂಪ್ ಸಿಂಗ್ ಈ 'ಉದ್ಘರ್ಷ' ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಚಿತ್ರವು ಸದ್ಯದಲ್ಲಿಯೇ ತೆರೆಗೆ ಬರಲಿದೆ ಎನ್ನಲಾಗಿದೆ.
ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಕಿಚ್ಚ ಸುದೀಪ್ ನಾಯಕರಾಗಿ ನಟಿಸಲಿದ್ದು, ಈ ಚಿತ್ರದ ಬಜೆಟ್ ಬರೋಬ್ಬರಿ 75 ಕೋಟಿ ರುಪಾಯಿ ಎಂದು ಹೇಳಲಾಗಿದೆ. ಸುದೀಪ್ ಅವರ 'ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ' ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಇದೊಂದು ಸಾಹಸಮಯ ಚಿತ್ರವಾಗಿರುವುದರಿಂದ ಚಿತ್ರಕ್ಕೆ ಅದ್ದೂರಿ ಮೇಕಿಂಗ್ ಹಾಗೂ ಭಾರೀ ಬಜೆಟ್ ಅವಶ್ಯಕವಿದೆ ಎನ್ನಲಾಗಿದೆ. ಈ ಚಿತ್ರಕ್ಕೆ 'ಒನ್ಸ್ ಅಪಾನ್ ಎ ಟೈಮ್ ಇನ್ 2209 ಎಡಿ' ಎಂಬ ಟ್ಯಾಗ್ ಲೈನ್ ಇಡಲಾಗಿದ್ದು ಕ್ರಿ.ಶ 2209ರ ಕಾಲಘಟ್ಟದಲ್ಲಿ ಈ ಚಿತ್ರದ ಕಥೆ ಸಾಗಲಿದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ನಟ ಕಿಚ್ಚ ಸುದೀಪ್ ಅವರು 'ಪೈಲ್ವಾನ್', 'ಕೋಟಿಗೊಬ್ಬ 3', 'ದಬಾಂಗ್ 3' ಚಿತ್ರಗಳಲ್ಲಿ ಬಿಜಿಯಾಗಿದ್ದು ಈ ಚಿತ್ರಗಳ ಬಳಿಕ ಬಿಲ್ಲ ರಂಗ ಬಾಷಾ ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ತೊಡಗಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್ವುಡ್ ಚಿತ್ರಗಳು ಕೂಡ ಭಾರೀ ಬಜೆಟ್ ಹಾಗೂ ಮೇಕಿಂಗ್ ಮೂಲಕ ಸದ್ದು ಮಾಡತೊಡಗಿವೆ. ಅಷ್ಟೇ ಅಲ್ಲ, ಕನ್ನಡವೂ ಸೇರಿದಂತೆ, ಬಹಳಷ್ಟು ಭಾಷೆಗಳಲ್ಲಿ ಬಿಡುಗಡೆ ಕಾಣುತ್ತಿದ್ದು ಕನ್ನಡದ ಮಾರ್ಕೆಟ್ ಇಂಡಿಯಾ ಗಡಿಯನ್ನು ಮೀರಿ ವಿಸ್ತರಿಸತೊಡಗಿದೆ ಎನ್ನಬಹುದು.
ಅಂದಹಾಗೆ, ಕಿಚ್ಚ ಸುದೀಪ್ ಅವರು ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರ ಮುಂಬರುವ ಚಿತ್ರವಾದ 'ಉದ್ಘರ್ಷ' ಟ್ರೇಲರ್ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಇತ್ತೀಚಿಗಷ್ಟೇ ಆ ಟ್ರೇಲರ್ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 'ಯಜಮಾನ' ಹಾಗೂ 'ಪೈಲ್ವಾನ್' ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿರುವ ನಟ ಠಾಕೂರ್ ಅನೂಪ್ ಸಿಂಗ್ ಈ 'ಉದ್ಘರ್ಷ' ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಚಿತ್ರವು ಸದ್ಯದಲ್ಲಿಯೇ ತೆರೆಗೆ ಬರಲಿದೆ ಎನ್ನಲಾಗಿದೆ.