ಆ್ಯಪ್ನಗರ

ಸ್ನೇಹಿತರನ್ನು ಬೆಳೆಸಿದವರಿಗೆ ಧನ್ಯವಾದ ಹೇಳಿದ ಕಿಚ್ಚ ಸುದೀಪ್

ಕೆಂಪೇಗೌಡ ಹೆಸರಿನ ಪೊಲೀಸ್ ಪಾತ್ರದಲ್ಲಿ ಘರ್ಜಿಸಿದ ಸುದೀಪ್ ಅವರನ್ನು ಸ್ಯಾಂಡಲ್‌ವುಡ್ ಮಾಸ್ ಪ್ರೇಕ್ಷಕರು ಆರಾಧಿಸತೊಡಗಿದರು. ಅವರ ಕಂಚಿನ ಕಂಠ ಹಾಗೂ ಕೆಂಪೇಗೌಡ ಡೈಲಾಗಿಗೆ ಮಾರುಹೋಗದವರೇ ಇಲ್ಲ ಎನ್ನಬಹುದು.

Vijaya Karnataka Web 11 Mar 2019, 6:41 pm
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಬಿರುದಿನ ನಟ ಕಿಚ್ಚ ಸುದೀಪ್ ಅವರು ಖುಷಿಯಿಂದ ಟ್ವೀಟ್ ಒಂದನ್ನು ಮಾಡಿದ್ದಾರೆ. ಸುದೀಪ್ ಅವರ ವೃತ್ತಿಜೀವನದಲ್ಲಿ'ಕೆಂಪೇಗೌಡ' ಚಿತ್ರವು ತುಂಬಾ ಮಹತ್ವದ್ದು. ಏಕೆಂದರೆ, ಆ ಚಿತ್ರವು ಸುದೀಪ್ ಅವರಿಗೆ ತುಂಬಾ ಮೈಲೇಜ್ ಕೊಟ್ಟಂತಹ ಚಿತ್ರ. ಅಷ್ಟೇ ಅಲ್ಲ, ಅಲ್ಲಿಯವರೆಗೆ, ಹೆಚ್ಚೂ ಕಡಿಮೆ ಫ್ಯಾಮಿಲಿ ಪ್ರೇಕ್ಷಕರನ್ನು ರೀಚ್ ಆಗಿದ್ದ ಸುದೀಪ್ ಕೆಂಪೇಗೌಡ ಚಿತ್ರದ ಮೂಲಕ ಮಾಸ್ ಪ್ರೇಕ್ಷಕರ ಕೋಟೆಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾದರು ಎನ್ನಬಹುದು.
Vijaya Karnataka Web kempegowda1103


ಕೆಂಪೇಗೌಡ ಹೆಸರಿನ ಪೊಲೀಸ್ ಪಾತ್ರದಲ್ಲಿ ಘರ್ಜಿಸಿದ ಸುದೀಪ್ ಅವರನ್ನು ಸ್ಯಾಂಡಲ್‌ವುಡ್ ಮಾಸ್ ಪ್ರೇಕ್ಷಕರು ಆರಾಧಿಸತೊಡಗಿದರು. ಅವರ ಕಂಚಿನ ಕಂಠ ಹಾಗೂ ಕೆಂಪೇಗೌಡ ಡೈಲಾಗಿಗೆ ಮಾರುಹೋಗದವರೇ ಇಲ್ಲ ಎನ್ನಬಹುದು. ಕಿಚ್ಚ ಸುದೀಪ್ ಅವರ ಖಾಕಿ ಖದರ್ ಹಾಗೂ ಮೀಸೆ ಅಭಿಮಾನಿಗಳನ್ನ ಭಾರೀ ಸೆಳೆದಿತ್ತು. 'ಅಂದು ಅದೆಷ್ಟೋ ಗಂಡಸರು 'ಕೆಂಪೇಗೌಡ ಸ್ಟೈಲ್'ನಲ್ಲಿ ಮೀಸೆ ಕೂಡ ಬಿಟ್ಟಿದ್ದರು. ಆ ಚಿತ್ರವು ಮಾರ್ಚ್ 11, 2012ರಲ್ಲಿ ಬಿಡುಗಡೆಯಾಗಿತ್ತು. ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ನಟಿ ರಾಗಿಣಿ ದ್ವಿವೇದಿ ನಟಿಸಿದ್ದರು.

ಎಂಟು ವರ್ಷದ ಹಿಂದೆ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಕಂಡಿದ ಕೆಂಪೇಗೌಡ ಚಿತ್ರವನ್ನು ನೆನಪಿಸಿಕೊಂಡು ಕಿಚ್ಚ ಸುದೀಪ್ ಅವರು "ನನ್ನ ಕೆಂಪೇಗೌಡ ಚಿತ್ರಕ್ಕಿಂತ ಹೆಚ್ಚಾಗಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮತ್ತು ನಟ ರವಿಶಂಕರ್ ಅವರು ಅಂದು ಶುರು ಮಾಡಿದ ತಮ್ಮ ಜರ್ನಿಯನ್ನು ಇಂದಿನವರೆಗೂ ಸಂಪೂರ್ಣ ಪ್ರಾಮಾಣಿಕತೆಯಿಂದ ಕಾಪಾಡಿಕೊಂಡು ಬಂದಿದ್ದಾರೆ. ಅವರನ್ನು ಸ್ವೀಕರಿಸಿದ ಎಲ್ಲಾ ಸ್ನೇಹಿತರಿಗೂ ತುಂಬು ಹೃದಯದ ಧನ್ಯವಾದಗಳು.." ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.

ಸದ್ಯಕ್ಕೆ ನಟ ಸುದೀಪ್ ಅವರು ಪೈಲ್ವಾನ್ ಹಾಗೂ ಸೈರಾ ನರಸಿಂಹರೆಡ್ಡಿ ಚಿತ್ರದ ಶೂಟಿಂಗ್ ಮುಗಿಸಿದ್ದು, ಸದ್ಯದಲ್ಲೇ ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಭಾಷಾ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಪೈಲ್ವಾನ್ ಚಿತ್ರವು 8 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಅಂದಹಾಗೆ, ಕನ್ನಡದಲ್ಲಿ ಕಿಚ್ಚ ಸುದೀಪ್ ನಾಯಕತ್ವದಲ್ಲಿ ಮೂಡಿ ಬಂದು ಸೂಪರ್ ಹಿಟ್ ಆಗಿರುವ 'ಕೆಂಪೇಗೌಡ' ಚಿತ್ರವು, ತಮಿಳಿನಲ್ಲಿ 'ಹರಿ' ನಿರ್ದೇಶನ, ಸೂರ್ಯ-ಅನುಷ್ಕಾ ಶೆಟ್ಟಿ, ಹಂನ್ಸಿಕಾ ತಾರಾಗಣದಲ್ಲಿ ಬಂದು ಸೂಪರ್ ಹಿಟ್ ಆದ 'ಸಿಂಗಂ' ತಮಿಳು ಚಿತ್ರದ ರೀಮೇಕ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌