ಆ್ಯಪ್ನಗರ

Bharaate ಮುರಳಿಯನ್ನು ಭೇಟಿಯಾದ ಪೈಲ್ವಾನ್ ಸುದೀಪ್

ಈ ಮೊದಲು ಕಿಚ್ಚ ಸುದೀಪ್ ಕನ್ನಡ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿ ಅಚ್ಚರಿಗೆ ಕಾರಣವಾಗಿದ್ದರು. ಈಗ ಭರಾಟೆಯ ಮುರಳಿ ಸರದಿ. ಕಿಚ್ಚ ಸುದೀಪ್ ಅವರು ಮುರಳಿ ಅವರನ್ನು ಭೇಟಿಯಾಗಿ 'ಭರಾಟೆ' ಚಿತ್ರತಂಡದೊಂದಿಗೆ ಸಮಯ ಕಳೆದಿದ್ದಾರೆ.

Vijaya Karnataka Web 14 Feb 2019, 8:40 pm
ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಮತ್ತೆ ಹೊಸದೊಂದು ಒಳ್ಳೆಯ ಕೆಲಸಕ್ಕೆ ಸುದ್ದಿಯಾಗಿದ್ದಾರೆ. ಕನ್ನಡದ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ "ಭರಾಟೆ' ಶೂಟಿಂಗ್ ಜಾಗಕ್ಕೆ ಸಡನ್ನಾಗಿ ಭೇಟಿ ಕೊಟ್ಟು ಸುದೀಪ್ 'ಭರಾಟೆ' ಚಿತ್ರತಂಡವನ್ನು ಶಾಕ್ ಹಾಗೂ ಖುಷಿಗೆ ದೂಡಿದ್ದಾರೆ. ಅಸಲಿಗೆ ಸುದೀಪ್ 'ಪೈಲ್ವಾನ್' ಚಿತ್ರದ ಶೂಟಿಂಗ್ ಕೂಡ ಅಲ್ಲೇ ಸಮೀಪದಲ್ಲಿ ನಡೆಯುತ್ತಿತ್ತು ಎನ್ನಲಾಗಿದೆ. ತಮ್ಮ ಶೂಟಿಂಗ್ ಮಧ್ಯೆ ವಿಶ್ರಾಂತಿ ಸಮಯ ನೋಡಿಕೊಂಡು ಸುದೀಪ್ ಮುರಳಿಯನ್ನು ಮೀಟ್ ಮಾಡಿದ್ದಾರೆ.
Vijaya Karnataka Web sudeep14


ಈ ಮೊದಲು ಕಿಚ್ಚ ಸುದೀಪ್ ಕನ್ನಡ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿ ಅಚ್ಚರಿಗೆ ಕಾರಣವಾಗಿದ್ದರು. ಈಗ ಭರಾಟೆಯ ಮುರಳಿ ಸರದಿ. ಕಿಚ್ಚ ಸುದೀಪ್ ಅವರು ಮುರಳಿ ಅವರನ್ನು ಭೇಟಿಯಾಗಿ 'ಭರಾಟೆ' ಚಿತ್ರತಂಡದೊಂದಿಗೆ ಸಮಯ ಕಳೆದಿದ್ದನ್ನು ತಿಳಿದು ಕಿಚ್ಚ ಸುದೀಪ್ ಹಾಗೂ ಮುರಳಿ ಈ ಇಬ್ಬರ ಅಭಿಮಾನಿಗಳೂ ಕೂಡ ಸಖತ್ ಖುಷಿಯಾಗಿದ್ದಾರೆ.

ಅಂದಹಾಗೆ, 'ಭರಾಟೆ'ಹಾಗೂ 'ಪೈಲ್ವಾನ್' ಈ ಎರಡೂ ಚಿತ್ರಗಳ ಶೂಟಿಂಗ್‌ ಹೈದರಾಬಾದ್‌ನಲ್ಲಿ ನಡೆಯುತ್ತಿವೆ. ಅಲ್ಲೇ ಅಕ್ಕಪಕ್ಕದಲ್ಲಿ ಕನ್ನಡದ ಇಬ್ಬರ ಸ್ಟಾರ್‌ ನಟರುಗಳ ಶೂಟಿಂಗ್ ನಡೆಯುತ್ತಿದ್ದು ಸುದೀಪ್ ಅವರು ಮುರಳಿ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿ ಬಂದಿದ್ದಾರೆ. ಈ ಕಾರಣಕ್ಕೆ ಕನ್ನಡ ಸಿನಿ ಪ್ರೇಕ್ಷಕರು ಸುದೀಪ್‌ ಅವರ ದೊಡ್ಡತನವನ್ನು, ಸಹ ಕಲಾವಿದರಿಗೆ ನೀಡುವ ಪ್ರೋತ್ಸಾಹವನ್ನು ಮೆಚ್ಚಿ ಕೊಂಡಾಡಿದ್ದಾರೆ.

ಒಟ್ಟಿನಲ್ಲಿ, ಸ್ಯಾಂಡಲ್‌ವುಡ್ ಒಗ್ಗಟ್ಟಿನಿಂದ ಬಲಗೊಳ್ಳುತ್ತಿದೆ ಎನ್ನಬಹುದು. 'ನಾವೆಲ್ಲ ಒಂದೇ, ನಮ್ಮಲ್ಲಿ ಒಡಕಿಲ್ಲ' ಎಂದು ಸ್ಯಾಂಡಲ್‌ವುಡ್ ಲೋಕ ಹೊರ ಜಗತ್ತಿಗೆ ಸಾರುತ್ತಿದೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌