ಆ್ಯಪ್ನಗರ

ಸ್ಟಾರ್‌ಗಿರಿ ಸುಮ್ಮನೆ 'ಕೃಷಿಯೇ ನಮ್ಮನೆ'

ನೂರು ಕೋಟಿ ಕ್ಲಬ್‌ಗೆ ಸೇರಿದ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ ಕನ್ನಡದ ಹೆಸರಾಂತ ನಟ ಕಿಶೋರ್‌. ಸೂಪರ್‌ ಸ್ಟಾರ್‌ಗಳ ಜತೆ ಜತೆ ತೆರೆಹಂಚಿಕೊಂಡಿರುವ ಕಿಶೋರ್‌, ನಟನೆಯ ಜತೆಗೆ ಕೃಷಿ ಕಾಯಕದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Vijaya Karnataka Web 18 Nov 2016, 4:00 am

* ಹರೀಶ್‌ ಬಸವರಾಜ್‌

ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಕನ್ನಡದ ಮತ್ತೊಬ್ಬ ನಟ ಗಮನ ಸೆಳೆಯುತ್ತಿದ್ದಾರೆ. ಕಂಠಿ ಚಿತ್ರ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಕಿಶೋರ್‌, ಇದೀಗ ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟ ಅನಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಎಲ್ಲ ಭಾಷೆಯ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.

ಪೊಲ್ಲಾಧವನ್‌ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು, ಅಲ್ಲಿ ಬಹು ಬೇಡಿಕೆಯ ನಟರಾಗಿದ್ದಾರೀಗ. ತಮಿಳಿನ ಹೆಸರಾಂತ ನಟರಾದ ರಜನಿಕಾಂತ್‌, ಕಮಲ್‌ ಹಾಸನ್‌, ಧನುಷ್‌, ಅಜಿತ್‌ರಂಥಹ ಸೂಪರ್‌ ಸ್ಟಾರ್‌ಗಳ ಜತೆ ತೆರೆ ಹಂಚಿಕೊಂಡಿದ್ದು ವಿಶೇಷ.

ಇತ್ತೀಚೆಗಷ್ಟೇ ರಿಲೀಸ್‌ ಆದ ಇವರ ನಟನೆಯ ಮಲೆಯಾಳಂನ ಪುಲಿಮುರುಗನ್‌ ಚಿತ್ರ ನೂರು ಕೋಟಿ ಕ್ಲಬ್‌ ಸೇರಿದೆ. ಇವರ ಪಾತ್ರ ಕೂಡ ಕ್ಲಿಕ್‌ ಆಗಿದೆ. ಈ ಸಿನಿಮಾದ ಕುರಿತು ಕಿಶೋರ್‌ ಹೆಮ್ಮೆಯಿಂದಲೇ ಮಾತಾಡುತ್ತಾರೆ. ಕಿಶೋರ್‌ ನಟನೆಯ ಮತ್ತೊಂದು ವಿಶೇಷತೆ ಅಂದರೆ, ಇವರ ಪಾತ್ರಗಳ ಬಗ್ಗೆ ಪ್ರೇಕ್ಷಕರಷ್ಟೇ ಅಲ್ಲ ನಟರು ಕೂಡ ಮೆಚ್ಚಿ ಮಾತಾಡುತ್ತಾರೆ.

'ಪೊಲ್ಲಾಧವನ್‌ ಚಿತ್ರ ರಿಲೀಸ್‌ ಆದಾಗ ತಮಿಳು ನಟ ಧನುಷ್‌ ನನಗೆ ಕರೆ ಮಾಡಿ ಈ ಸಿನಿಮಾದ ನಿಜವಾದ ಹೀರೋ ನೀವೆ ಎಂದು. ನಾನು ಅದನ್ನು ಮುಜುಗರದಲ್ಲೇ ಒಪ್ಪಿಕೊಂಡೆ. ಅಲ್ಲದೇ, ಕಬಾಲಿ ಸಿನಿಮಾದ ನಂತರ ಅನೇಕರು ನನ್ನನ್ನು ಸೂಪರ್‌ ಸ್ಟಾರ್‌ ಜತೆ ನಟಿಸಿದ್ದೀರಿ ಏನು ಅನ್ನಿಸುತ್ತಿದೆ ಎಂದು ಕೇಳಿದರು. ನನಗೆ ಏನೂ ಅನ್ನಿಸಲಿಲ್ಲ ಎಂದೆ. ರಜನಿಕಾಂತ್‌ ಹೊರಗಡೆ ಅಷ್ಟೇ ಸೂಪರ್‌ ಸ್ಟಾರ್‌. ಒಳಗಡೆ ಅವರೊಬ್ಬ ಸಾಮಾನ್ಯ ಮನುಷ್ಯ. ಹಾಗಾಗಿ ನನಗೆ ಯಾವುದೇ ಸಂಕೋಚವಿಲ್ಲದೆ ನಟನೆ ಮಾಡಲು ಅನುಕೂಲವಾಯಿತು' ಅನ್ನುವುದು ಕಿಶೋರ್‌ ಮಾತು.

Vijaya Karnataka Web kishore sandalwood actor
ಸ್ಟಾರ್‌ಗಿರಿ ಸುಮ್ಮನೆ 'ಕೃಷಿಯೇ ನಮ್ಮನೆ'


-----

ನಾನು ಅನೇಕ ಸ್ಟಾರ್‌ಗಳ ಜತೆ ನಟಿಸಿದ್ದೇನೆ ಅನ್ನುವುದಕ್ಕಿಂತ ಅವರೊಟ್ಟಿಗೆ ಕೆಲಸ ಮಾಡಿದ್ದೇನೆ ಅನ್ನುವುದಕ್ಕೆ ಹೆಮ್ಮೆ ಪಡುತ್ತೇನೆ. ಅದೇ ನನ್ನನ್ನು ಇಲ್ಲಿಯವರೆಗೂ ಕರೆತಂದಿದೆ. ಮನುಷ್ಯ ಬದುಕುವುದಕ್ಕೆ ಕೆಲಸ ಮಾಡಬೇಕು ಅದನ್ನಷ್ಟೇ ನಾನು ಮಾಡುತ್ತಿದ್ದೇನೆ.'

-ಕಿಶೋರ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌