* ಪದ್ಮಾ ಶಿವಮೊಗ್ಗ
ನಿರ್ದೇಶಕ ಎ.ಪಿ.ಅರ್ಜುನ್ ಅವರ ಕಿಸ್ ಚಿತ್ರದಲ್ಲಿ ನಾಯಕ ವಿರಾಟ್ ಹೃಷಿಕೇಶದ ಬಳಿ ಭಂಗಿ ಜಂಪ್ ಮಾಡಿದ್ದಾರೆ. ಇದು ಇಡೀ ಚಿತ್ರದ ಪ್ರಮುಖ ದೃಶ್ಯ ಎಂದು ನಿರ್ದೇಶಕ ಎ.ಪಿ. ಅರ್ಜುನ್ ತಿಳಿಸಿದ್ದಾರೆ.
ಹೃಷಿಕೇಶ್ನಲ್ಲಿ ಭಂಗಿ ಜಂಪ್ ಮತ್ತು ಮಡಿಕೇರಿಯಲ್ಲಿ ಹಾಟ್ ಏರ್ ಬಲೂನ್ನಲ್ಲಿ ಚಿತ್ರೀಕರಣ ಮಾಡಿದ್ದು ದೊಡ್ಡ ಸಾಹಸ ಎಂದಿರುವ ಅವರು, 'ಸಾವಿರಾರು ಅಡಿ ಎತ್ತರದಿಂದ ಭಂಗಿ ಜಂಪ್ ಮಾಡಲು ಶ್ರೀಲೀಲಾ ಹೆದರಿದರು. ವಿರಾಟ್ ಮಾತ್ರ ಮಾಡಿದರು. ಇದು ಬಹಳ ಅಪಾಯಕಾರಿಯಾಗಿತ್ತು. ನಮಗೂ ಭಯವಿತ್ತು. ಆದರೆ, ಯಾವ ತೊಂದರೆ ಇಲ್ಲದಂತೆ ಶೂಟ್ ಮಾಡಿದೆವು. ಹಾಟ್ ಏರ್ ಬಲೂನ್ ಶೂಟ್ ಸ್ವಲ್ಪ ಕಷ್ಟವೇ ಆಗಿತ್ತು. ಇದರಲ್ಲಿಹೀರೋ ಹಿರೋಯಿನ್ ಇಬ್ಬರೂ ಇದ್ದರು. ಅದು ಗಾಳಿಗೆ ತೇಲಿ ಕಾಡಿನಲ್ಲಿ ಇಳಿದುಬಿಟ್ಟರೆ ಎಂಬ ಭಯವೂ ಇತ್ತು. ಕ್ಯಾಮೆರಾ ಸಮೇತ ನಾವೆಲ್ಲಾ ಇನ್ನೊಂದು ಬಲೂನ್ನಲ್ಲಿದ್ದೆವು. ಇದು ಕೂಡ ಬಹಳ ಥ್ರಿಲ್ಲಿಂಗ್ ಆಗಿ ಮೂಡಿಬಂದಿದೆ' ಎಂದಿದ್ದಾರೆ ಅರ್ಜುನ್. 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಹುಡುಗಿಯರ ಫೇವರಿಟ್ ಆಗಿದ್ದ ವಿರಾಟ್
ಈ ಬಗ್ಗೆ ಮಾತನಾಡಿದ ವಿರಾಟ್ ಹೇಳಿದ್ದಿಷ್ಟು. 'ಮೊದಲು ಒಪ್ಪಿಕೊಂಡಿದ್ದ ಶ್ರೀಲೀಲಾ ನಂತರ ಭಂಗಿ ಜಂಪ್ ಮಾಡಲು ಹಿಂಜರಿದುಬಿಟ್ಟರು. ಭಂಗಿ ಜಂಪ್ ಮಾಡುವ ಮೊದಲು ಅಗ್ರಿಮೆಂಟ್ಗೆ ಸಹಿ ಮಾಡಿಸಿಕೊಳ್ಳುತ್ತಾರೆ. ಕೈಕಾಲು ಮುರಿದರೆ, ಹಾರ್ಟ್ ಅಟ್ಯಾಕ್ ಆದರೆ, ಅದಕ್ಕೆ ನಾವೇ ಸಂಪೂರ್ಣ ಜವಾಬ್ದಾರರು. ಸಹಿ ಮಾಡಿದಾಗ ನನಗೆ ಭಯವಾಯಿತು. ಒಂಥರಾ ಆಯಿತು. ಆದರೂ ಈ ಸಾಹಸವನ್ನು ಮರೆಯಲಾರೆ. ಹಾಟ್ ಏರ್ ಬಲೂನ್ನಲ್ಲಿ ಎಲ್ಲ ರೀತಿಯ ಸಿದ್ಧತೆ ತೆಗೆದುಕೊಂಡಿದ್ದರು' ಎಂದಿದ್ದಾರೆ.
ಗೋವಾದಲ್ಲಿ ಚಿತ್ರೀಕರಣ ಮಾಡುವಾಗ ಬೋಟ್ ಸಮುದ್ರದಲ್ಲಿ ತೇಲಿಹೋದ ಪ್ರಸಂಗವೂ ನಡೆದಿದೆ. 'ಸಮುದ್ರ ತೀರದಲ್ಲಿ ಬೋಟ್ ಇತ್ತು. ಶೂಟ್ ಮುಗಿಸಿ ಹಿಂತಿರುಗಿದ್ದೆವು. ಮಳೆ ಜೋರಾಗಿ ಬಂದು ಬೋಟ್ ಮರಳನ್ನು ಕೊರೆದುಕೊಂಡು ಸಮುದ್ರದಲ್ಲಿ ತೇಲಿ ಹೋಗತೊಡಗಿತು. ಯಾರೋ ಒಬ್ಬರು ದೋಣಿಗೆ 14 ಲಕ್ಷ ರೂ. ಕೊಡಬೇಕಾಗುತ್ತದೆ ಎಂದ ತಕ್ಷಣ ಎಲ್ಲರೂ ಎದ್ದುಬಿದ್ದು ದೋಣಿಯನ್ನು ದಡ ಸೇರಿಸಿದೆವು' ಎಂದು ಅನುಭವ ಹೇಳಿಕೊಂಡಿದ್ದಾರೆ ಅರ್ಜುನ್.
ಈ ಚಿತ್ರಕ್ಕಾಗಿ ಗೋವಾ, ಮಡಿಕೇರಿ, ಕೇರಳ, ಕುದುರೆಮುಖ, ಹೃಷಿಕೇಷ, ಊಟಿ, ಜೈಸಲ್ಮೇರ್, ಜೋದ್ಪುರ, ಕಿಶನ್ಗಢ, ಕಛ್, ಆಗ್ರಾ, ಬ್ಯಾಂಕಾಕ್ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 'ಚಿತ್ರದಲ್ಲಿ ಸುಂದರವಾದ ಟ್ರಾವೆಲ್ ಇದೆ. ಪ್ರೀತಿಯ ಜರ್ನಿ ಇದೆ. ಅದಕ್ಕಾಗಿ ಗೋವಾ, ಊಟಿ, ಮಡಿಕೇರಿಗಳಲ್ಲಿ ಚಿತ್ರೀಕರಣ ಮಾಡಬೇಕಾಯಿತು. ಅಲ್ಲದೆ, ಒಂದು ಹಾಡಿನಲ್ಲಿ ಏಳು ಜನ್ಮದ ಪ್ರೀತಿಗೆ ಇದು ಏಳು ದಿವಸ ಅನ್ನುವ ಸಾಲು ಬರುತ್ತದೆ. ಅದಕ್ಕೆ ಒಂದೊಂದು ಜನ್ಮಕ್ಕೆ ಒಂದೊಂದು ಹೆಜ್ಜೆ ಬದಲಾದಂತೆ ಏಳು ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದೆವು. ಆಗ್ರಾ, ಜೈಸಲ್ಮೇರ್, ಜೋದ್ಪುರ, ರನ್ ಆಫ್ ಕಛ್, ಕುದುರೆಮುಖ, ಕೇರಳ, ಕಿಶನ್ಗಢಗಳಲ್ಲಿ ಚಿತ್ರೀಕರಣ ಮಾಡಲಾಯಿತು. ಪ್ರೀತಿ ಅಂದಾಕ್ಷಣ ಎಲ್ಲರ ಮನಸ್ಸಿನಲ್ಲಿ ಬರುವುದು ತಾಜ್ಮಹಲ್. ಹಾಗಾಗಿ ತಾಜ್ಮಹಲ್ ಹಿಂಭಾಗದ ಯಮುನಾ ನದಿ ತೀರದಲ್ಲಿ ಚಿತ್ರೀಕರಣ ಮಾಡಿದೆವು' ಎಂದಿದ್ದಾರೆ ಅರ್ಜುನ್. ಸೆ.27ಕ್ಕೆ 'ಕಿಸ್' ಕೊಡೋಕೆ ರೆಡಿಯಾದ ಸ್ಯಾಂಡಲ್ವುಡ್ ಹೀರೋಯಿನ್ ಶ್ರೀಲೀಲಾ
ಇದಲ್ಲದೆ ಸಿನಿಮಾ ಪಂಚಭೂತಗಳಾದ ಮಣ್ಣು, ನೀರು, ಗಾಳಿ, ಬೆಂಕಿ ಮತ್ತು ಆಕಾಶವನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ. 'ಬೆಂಕಿ ಒಂದನ್ನು ಹೊರತುಪಡಿಸಿ ಇವೆಲ್ಲವನ್ನೂ ಪ್ರತಿನಿಧಿಸುವಂತೆ ಶೂಟ್ ಮಾಡಿದ್ದೇವೆ. ಮರಳುಗಾಡಿನಲ್ಲಿ, ನದಿಯಲ್ಲಿ, ಆಕಾಶದಲ್ಲಿ ಚಿತ್ರೀಕರಣ ಮಾಡಿದ್ದೇವೆ' ಎನ್ನುತ್ತಾರೆ.
ಚಿತ್ರದಲ್ಲಿ ನೀನೇ ಮೊದಲು ನೀನೇ ಕೊನೆ ಎಂಬ ಹಾಡಿಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಪುತ್ರ ಆದಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೀಗ ಸೂಪರ್ ಹಿಟ್ ಆಗಿದೆ.
ನಿರ್ದೇಶಕ ಎ.ಪಿ.ಅರ್ಜುನ್ ಅವರ ಕಿಸ್ ಚಿತ್ರದಲ್ಲಿ ನಾಯಕ ವಿರಾಟ್ ಹೃಷಿಕೇಶದ ಬಳಿ ಭಂಗಿ ಜಂಪ್ ಮಾಡಿದ್ದಾರೆ. ಇದು ಇಡೀ ಚಿತ್ರದ ಪ್ರಮುಖ ದೃಶ್ಯ ಎಂದು ನಿರ್ದೇಶಕ ಎ.ಪಿ. ಅರ್ಜುನ್ ತಿಳಿಸಿದ್ದಾರೆ.
ಹೃಷಿಕೇಶ್ನಲ್ಲಿ ಭಂಗಿ ಜಂಪ್ ಮತ್ತು ಮಡಿಕೇರಿಯಲ್ಲಿ ಹಾಟ್ ಏರ್ ಬಲೂನ್ನಲ್ಲಿ ಚಿತ್ರೀಕರಣ ಮಾಡಿದ್ದು ದೊಡ್ಡ ಸಾಹಸ ಎಂದಿರುವ ಅವರು, 'ಸಾವಿರಾರು ಅಡಿ ಎತ್ತರದಿಂದ ಭಂಗಿ ಜಂಪ್ ಮಾಡಲು ಶ್ರೀಲೀಲಾ ಹೆದರಿದರು. ವಿರಾಟ್ ಮಾತ್ರ ಮಾಡಿದರು. ಇದು ಬಹಳ ಅಪಾಯಕಾರಿಯಾಗಿತ್ತು. ನಮಗೂ ಭಯವಿತ್ತು. ಆದರೆ, ಯಾವ ತೊಂದರೆ ಇಲ್ಲದಂತೆ ಶೂಟ್ ಮಾಡಿದೆವು. ಹಾಟ್ ಏರ್ ಬಲೂನ್ ಶೂಟ್ ಸ್ವಲ್ಪ ಕಷ್ಟವೇ ಆಗಿತ್ತು. ಇದರಲ್ಲಿಹೀರೋ ಹಿರೋಯಿನ್ ಇಬ್ಬರೂ ಇದ್ದರು. ಅದು ಗಾಳಿಗೆ ತೇಲಿ ಕಾಡಿನಲ್ಲಿ ಇಳಿದುಬಿಟ್ಟರೆ ಎಂಬ ಭಯವೂ ಇತ್ತು. ಕ್ಯಾಮೆರಾ ಸಮೇತ ನಾವೆಲ್ಲಾ ಇನ್ನೊಂದು ಬಲೂನ್ನಲ್ಲಿದ್ದೆವು. ಇದು ಕೂಡ ಬಹಳ ಥ್ರಿಲ್ಲಿಂಗ್ ಆಗಿ ಮೂಡಿಬಂದಿದೆ' ಎಂದಿದ್ದಾರೆ ಅರ್ಜುನ್. 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಹುಡುಗಿಯರ ಫೇವರಿಟ್ ಆಗಿದ್ದ ವಿರಾಟ್
ಈ ಬಗ್ಗೆ ಮಾತನಾಡಿದ ವಿರಾಟ್ ಹೇಳಿದ್ದಿಷ್ಟು. 'ಮೊದಲು ಒಪ್ಪಿಕೊಂಡಿದ್ದ ಶ್ರೀಲೀಲಾ ನಂತರ ಭಂಗಿ ಜಂಪ್ ಮಾಡಲು ಹಿಂಜರಿದುಬಿಟ್ಟರು. ಭಂಗಿ ಜಂಪ್ ಮಾಡುವ ಮೊದಲು ಅಗ್ರಿಮೆಂಟ್ಗೆ ಸಹಿ ಮಾಡಿಸಿಕೊಳ್ಳುತ್ತಾರೆ. ಕೈಕಾಲು ಮುರಿದರೆ, ಹಾರ್ಟ್ ಅಟ್ಯಾಕ್ ಆದರೆ, ಅದಕ್ಕೆ ನಾವೇ ಸಂಪೂರ್ಣ ಜವಾಬ್ದಾರರು. ಸಹಿ ಮಾಡಿದಾಗ ನನಗೆ ಭಯವಾಯಿತು. ಒಂಥರಾ ಆಯಿತು. ಆದರೂ ಈ ಸಾಹಸವನ್ನು ಮರೆಯಲಾರೆ. ಹಾಟ್ ಏರ್ ಬಲೂನ್ನಲ್ಲಿ ಎಲ್ಲ ರೀತಿಯ ಸಿದ್ಧತೆ ತೆಗೆದುಕೊಂಡಿದ್ದರು' ಎಂದಿದ್ದಾರೆ.
ಗೋವಾದಲ್ಲಿ ಚಿತ್ರೀಕರಣ ಮಾಡುವಾಗ ಬೋಟ್ ಸಮುದ್ರದಲ್ಲಿ ತೇಲಿಹೋದ ಪ್ರಸಂಗವೂ ನಡೆದಿದೆ. 'ಸಮುದ್ರ ತೀರದಲ್ಲಿ ಬೋಟ್ ಇತ್ತು. ಶೂಟ್ ಮುಗಿಸಿ ಹಿಂತಿರುಗಿದ್ದೆವು. ಮಳೆ ಜೋರಾಗಿ ಬಂದು ಬೋಟ್ ಮರಳನ್ನು ಕೊರೆದುಕೊಂಡು ಸಮುದ್ರದಲ್ಲಿ ತೇಲಿ ಹೋಗತೊಡಗಿತು. ಯಾರೋ ಒಬ್ಬರು ದೋಣಿಗೆ 14 ಲಕ್ಷ ರೂ. ಕೊಡಬೇಕಾಗುತ್ತದೆ ಎಂದ ತಕ್ಷಣ ಎಲ್ಲರೂ ಎದ್ದುಬಿದ್ದು ದೋಣಿಯನ್ನು ದಡ ಸೇರಿಸಿದೆವು' ಎಂದು ಅನುಭವ ಹೇಳಿಕೊಂಡಿದ್ದಾರೆ ಅರ್ಜುನ್.
ಈ ಚಿತ್ರಕ್ಕಾಗಿ ಗೋವಾ, ಮಡಿಕೇರಿ, ಕೇರಳ, ಕುದುರೆಮುಖ, ಹೃಷಿಕೇಷ, ಊಟಿ, ಜೈಸಲ್ಮೇರ್, ಜೋದ್ಪುರ, ಕಿಶನ್ಗಢ, ಕಛ್, ಆಗ್ರಾ, ಬ್ಯಾಂಕಾಕ್ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 'ಚಿತ್ರದಲ್ಲಿ ಸುಂದರವಾದ ಟ್ರಾವೆಲ್ ಇದೆ. ಪ್ರೀತಿಯ ಜರ್ನಿ ಇದೆ. ಅದಕ್ಕಾಗಿ ಗೋವಾ, ಊಟಿ, ಮಡಿಕೇರಿಗಳಲ್ಲಿ ಚಿತ್ರೀಕರಣ ಮಾಡಬೇಕಾಯಿತು. ಅಲ್ಲದೆ, ಒಂದು ಹಾಡಿನಲ್ಲಿ ಏಳು ಜನ್ಮದ ಪ್ರೀತಿಗೆ ಇದು ಏಳು ದಿವಸ ಅನ್ನುವ ಸಾಲು ಬರುತ್ತದೆ. ಅದಕ್ಕೆ ಒಂದೊಂದು ಜನ್ಮಕ್ಕೆ ಒಂದೊಂದು ಹೆಜ್ಜೆ ಬದಲಾದಂತೆ ಏಳು ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದೆವು. ಆಗ್ರಾ, ಜೈಸಲ್ಮೇರ್, ಜೋದ್ಪುರ, ರನ್ ಆಫ್ ಕಛ್, ಕುದುರೆಮುಖ, ಕೇರಳ, ಕಿಶನ್ಗಢಗಳಲ್ಲಿ ಚಿತ್ರೀಕರಣ ಮಾಡಲಾಯಿತು. ಪ್ರೀತಿ ಅಂದಾಕ್ಷಣ ಎಲ್ಲರ ಮನಸ್ಸಿನಲ್ಲಿ ಬರುವುದು ತಾಜ್ಮಹಲ್. ಹಾಗಾಗಿ ತಾಜ್ಮಹಲ್ ಹಿಂಭಾಗದ ಯಮುನಾ ನದಿ ತೀರದಲ್ಲಿ ಚಿತ್ರೀಕರಣ ಮಾಡಿದೆವು' ಎಂದಿದ್ದಾರೆ ಅರ್ಜುನ್. ಸೆ.27ಕ್ಕೆ 'ಕಿಸ್' ಕೊಡೋಕೆ ರೆಡಿಯಾದ ಸ್ಯಾಂಡಲ್ವುಡ್ ಹೀರೋಯಿನ್ ಶ್ರೀಲೀಲಾ
ಇದಲ್ಲದೆ ಸಿನಿಮಾ ಪಂಚಭೂತಗಳಾದ ಮಣ್ಣು, ನೀರು, ಗಾಳಿ, ಬೆಂಕಿ ಮತ್ತು ಆಕಾಶವನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ. 'ಬೆಂಕಿ ಒಂದನ್ನು ಹೊರತುಪಡಿಸಿ ಇವೆಲ್ಲವನ್ನೂ ಪ್ರತಿನಿಧಿಸುವಂತೆ ಶೂಟ್ ಮಾಡಿದ್ದೇವೆ. ಮರಳುಗಾಡಿನಲ್ಲಿ, ನದಿಯಲ್ಲಿ, ಆಕಾಶದಲ್ಲಿ ಚಿತ್ರೀಕರಣ ಮಾಡಿದ್ದೇವೆ' ಎನ್ನುತ್ತಾರೆ.
ಚಿತ್ರದಲ್ಲಿ ನೀನೇ ಮೊದಲು ನೀನೇ ಕೊನೆ ಎಂಬ ಹಾಡಿಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಪುತ್ರ ಆದಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೀಗ ಸೂಪರ್ ಹಿಟ್ ಆಗಿದೆ.