ಆ್ಯಪ್ನಗರ

ಎರಡು ಹುಲಿಗಳನ್ನು ದತ್ತು ಪಡೆದ ನಟ ವಿಜಯ್ ಸೇತುಪತಿ

ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ನನ್ನ ಗೆಳೆಯರು ತಿಳಿಸಿದರು. ಬಳಿಕ ಝೂ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ತಿಳಿಸಿದಾಗ ಎರಡು ಹುಲಿಗಳನ್ನು ದತ್ತು ತೆಗೆದುಕೊಳ್ಳಲು ಅವರು ಅಂಗೀಕರಿಸಿದರು ಎಂದಿದ್ದಾರೆ ವಿಜಯ್ ಸೇತುಪತಿ.

TIMESOFINDIA.COM 4 Mar 2019, 11:17 am
ತಮಿಳು ನಟ ವಿಜಯ್ ಸೇತುಪತಿ ಭಾನುವಾರ (ಮಾರ್ಚ್ 3) ಚೆನ್ನೈನ ವಂಡಲೂರು ಮೃಗಾಲಯದ ಎರಡು ಹುಲಿಗಳನ್ನು ದತ್ತು ಪಡೆದಿದ್ದಾರೆ. ಐದು ವರ್ಷದ ಆದಿತ್ಯಾ ಮತ್ತು ಅದರ ಸಂಗಾತಿ ನಾಲ್ಕೂವರೆ ವರ್ಷದ ಆರತಿಯನ್ನು ದತ್ತು ತೆಗೆದುಕೊಂಡಿದ್ದಾರೆ.
Vijaya Karnataka Web vijay-sethupati


ಮೃಗಾಲಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಝೂ ಅಧಿಕಾರಿಗಳಿಗೆ ₹ 5 ಲಕ್ಷದ ಚೆಕ್ ಹಸ್ತಾಂತರಿಸುವ ಮೂಲಕ ಪ್ರಾಣಿಗಳನ್ನು ದತ್ತು ಪಡೆದರು. ಝೂ ನಿರ್ದೇಶಕ ಯೋಗೇಶ್ ಸಿಂಗ್ ಮತ್ತು ಉಪ ನಿರ್ದೇಶಕ ಸುಧಾ ರಾಮನ್ ಅವರು ಚೆಕ್ ಸ್ವೀಕರಿಸಿದರು.

ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ವಿಜಯ್ ಸೇತುಪತಿ "ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ನನ್ನ ಗೆಳೆಯರು ತಿಳಿಸಿದರು. ಬಳಿಕ ಝೂ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ತಿಳಿಸಿದಾಗ ಎರಡು ಹುಲಿಗಳನ್ನು ದತ್ತು ತೆಗೆದುಕೊಳ್ಳಲು ಅವರು ಅಂಗೀಕರಿಸಿದರು" ಎಂಬ ವಿವರಗಳನ್ನು ನೀಡಿದರು.

"ಆರು ತಿಂಗಳ ಬಳಿಕ ಬೇರೆ ಪ್ರಾಣಿಗಳನ್ನು ದತ್ತು ಸ್ವೀಕರಿಸುತ್ತೇನೆ. ಪಕ್ಷಿ, ಸರೀಸೃಪ ಅಥವ ಸಿಂಹ, ಹುಲಿ, ಚಿರತೆಯಂತಹ ದೊಡ್ಡ ಪ್ರಾಣಿಗಳನ್ನು ಸಾರ್ವಜನಿಕರು ದತ್ತು ಸ್ವೀಕರಿಸಬಹುದು. ಈ ಮೂಲಕ ಪ್ರಾಣಿ ಜಗತ್ತಿಗೆ ತಮ್ಮ ಕೈಲಾದ ಸೇವೆ ಸಲ್ಲಿಸಬಹುದು" ಎಂದಿದ್ದಾರೆ ವಿಜಯ್ ಸೇತುಪತಿ.

2009ರಲ್ಲಿ ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಕಾರ್ಯಕ್ರಮಕ್ಕೆ ಮೃಗಾಲಯದಲ್ಲಿ ಅವಕಾಶ ನೀಡಲಾಗಿತ್ತು. ಇದುವರೆಗೆ ಹಲವಾರು ಸಂಘ ಸಂಸ್ಥೆಗಳು, ವ್ಯಕ್ತಿಗಳು, ಸರಕಾರ ಸೇರಿದಂತೆ 159 ಮಂದಿ ದತ್ತು ಸ್ವೀಕರಿಸಿದ್ದಾರೆ. ಇದುವರೆಗೆ ಈ ಕಾರ್ಯಕ್ರಮದ ಮೂಲಕ 2009ರಿಂದ ಒಟ್ಟು ₹ 71.61 ಲಕ್ಷ ಹಣ ನೀಡಲಾಗಿದೆ. ಹುಲಿ ಅಥವಾ ಸಿಂಹಕ್ಕೆ ದಿನಕ್ಕೆ ₹ 2000 ಖರ್ಚಾಗುತ್ತದೆ ಎಂದು ಝೂ ಅಧಿಕಾರಿಗಳು ತಿಳಿಸಿದ್ದಾರೆ.

ಶಿವರಾತ್ರಿಯಿಂದ ಹೊಸ ಸಿನಿಮಾ ಆರಂಭ
ತಮಿಳಿನ ಸ್ಟಾರ್‌ ನಟ ವಿಜಯ್‌ ಸೇತುಪತಿ ನಟನೆಯ ಹೊಸ ಚಿತ್ರದ ಶೂಟಿಂಗ್‌ ಶಿವರಾತ್ರಿ ದಿನದಿಂದ ಆರಂಭವಾಗಲಿದೆ. ಈ ಸಿನಿಮಾವನ್ನು ಸ್ಕೆಚ್‌ ಮತ್ತು ವಾಲು ಖ್ಯಾತಿಯ ನಿರ್ದೇಶಕ ವಿಜಯ್‌ಚಂದರ್‌ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್‌ ಸೇತುಪತಿಗೆ ನಿವೇತಾ ಪೇತುರಾಜ್‌ ಮತ್ತು ರಾಶಿಖನ್ನಾ ನಾಯಕಿಯರಾಗಿದ್ದಾರೆ.

ಈ ಸಿನಿಮಾದಲ್ಲಿ ಕಾಮಡಿಯನ್‌ ಸೂರಿ, ನಾಜರ್‌, ಮೊಟ್ಟೆ ರಾಜೇಂದ್ರನ್‌, ಜಾನ್‌ ವಿಜಯ್‌, ಸೀಮಾನ್‌, ಮಾರಿಮುತ್ತ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸುತ್ತಿದ್ದು, ಪ್ರೊಡಕ್ಷನ್‌ ಹೌಸ್‌ ಸಂಸ್ಥೆ ಟ್ವೀಟ್‌ ಮಾಡಿದ್ದು, ಮಾರ್ಚ್‌ 4ರಿಂದ ಶೂಟಿಂಗ್‌ ಆರಂಭವಾಗಲಿದೆ ಎಂದು ಬರೆದುಕೊಂಡಿದೆ. ಈ ಸಿನಿಮಾ ಬಗ್ಗೆ ವಿಜಯ್‌ ಸೇತುಪತಿ ಅಭಿಮಾನಿಗಳು ಕಾಯುತ್ತಿದ್ದು, ಇದು ಮತ್ತೊಂದು ಬ್ಲಾಕ್‌ ಬಸ್ಟರ್‌ ಆಗುತ್ತದೆ ಎಂದು ಸೋಶಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಳೆದ ವರ್ಷ ವಿಜಯ್‌ ಸೇತುಪತಿ ನಟನೆಯ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿ ಯಶಸ್ವಿಯಾಗಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌