ಆ್ಯಪ್ನಗರ

ಕನಸು ಮತ್ತು ನನಸಿನ ನಡುವೆ 'ಬ್ಲ್ಯಾಂಕ್‌' ಆದ ನಟಿ ಕೃಷಿ ತಾಪಂಡ

ಹೊಸ ಮಾದರಿಯ ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿವೆ. ಅಂತಹದ್ದೇ ಒಂದು ಕಥೆ ಇರುವ ಸಿನಿಮಾ ತಯಾರಾಗುತ್ತಿದೆ. ಈ ರೀತಿ ಹೊಸ ನಿರೂಪಣೆ ಇರುವ ಬ್ಲ್ಯಾಂಕ್‌ ಸಿನಿಮಾದಲ್ಲಿ ಕೃಷಿ ತಾಪಂಡ ನಟಿಸುತ್ತಿದ್ದಾರೆ.

Vijaya Karnataka 17 May 2019, 11:36 pm
ನವ ನಿರ್ದೇಶಕ ಸುಹಾಸ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಬ್ಲ್ಯಾಂಕ್‌ ಸಿನಿಮಾದಲ್ಲಿ ಡ್ರೀಮ್‌ ಮತ್ತು ರಿಯಾಲಿಟಿ ನಡುವೆ ನಡೆಯುವ ಕಥೆ ಇದೆಯಂತೆ. ಇದರಲ್ಲಿ ಪೂರ್ಣಚಂದ್ರ ಮೈಸೂರು ಮತ್ತು ಭರತ್‌ಗೆ ಜೋಡಿಯಾಗಿ ಕೃಷಿ ತಾಪಂಡ ನಟಿಸುತ್ತಿದ್ದಾರೆ.
Vijaya Karnataka Web krishi


ಎಂಜಿನಿಯರಿಂಗ್‌ ಪದವಿ ಮುಗಿಸಿ ಸಿನಿಮಾವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿರುವ ಸುಹಾಸ್‌, ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣಚಂದ್ರ ಮೈಸೂರು, ಕೃಷಿ ತಾಪಂಡ, ಭರತ್‌ ನಟಿಸುತ್ತಿರುವ ಈ ಚಿತ್ರದ ಕಥೆಯೇ ಬಹಳ ವಿಶೇಷವಾಗಿದೆಯಂತೆ. 'ನನಗೆ ಸುಹಾಸ್‌ ಬಂದು ಕಥೆ ಹೇಳಿದಾಗ ಥ್ರಿಲ್‌ ಆಯಿತು. ಚಿತ್ರಂಗಕ್ಕೆ ಹೊಸಬರಾದರೂ ಬೇರೆ ರೀತಿಯ ಸ್ಕ್ರೀನ್‌ ಪ್ಲೇ ಮಾಡಿಕೊಂಡಿದ್ದರು. ಈ ಎಲ್ಲ ಪಾಯಿಂಟ್‌ಗಳು ಇಷ್ಟವಾಗಿ ನಾನು ನಿರ್ಮಾಣಕ್ಕೆ ಕೈ ಹಾಕಿದೆ' ಎನ್ನುತ್ತಾರೆ ನಿರ್ಮಾಪಕ ಪ್ರಸನ್ನ.

'ನನ್ನ ಸಿನಿಮಾದಲ್ಲಿ ಕಥೆಯೇ ಹೀರೋ, ಕನಸು ಮತ್ತು ನನಸಿನ ನಡುವೆ ನಡೆಯುವ ಕಥೆ ಇದಾಗಿದೆ. ಮೊದಲಿನಿಂದಲೂ ಸಿನಿಮಾ ಮಾಡಬೇಕು ಎಂಬ ಆಸೆಯಿಂದಲೆ, ತಯಾರಿ ಮಾಡಿಕೊಂಡಿದ್ದೆ. ಈಗಾಗಲೇ ಸಾಕಷ್ಟು ಕಿರು ಚಿತ್ರಗಳನ್ನು ನಿರ್ದೇಶನ ಮಾಡಿದ್ದೇನೆ. ಗೋವಾ ಸೇರಿದಂತೆ ಕೆಲ ಚಿತ್ರೋತ್ಸವಗಳಲ್ಲಿ ನನ್ನ ನಿರ್ದೇಶನದ ಕಿರು ಚಿತ್ರಗಳು ಪ್ರದರ್ಶನ ಕಂಡಿದೆ. ಬ್ಲ್ಯಾಂಕ್‌ ಮೂಲಕ ಪ್ರೇಕ್ಷಕರಿಗೆ ಹೊಸ ರೀತಿಯ ಚಿತ್ರ ಕೊಡಲು ಪ್ರಯತ್ನ ಮಾಡುತ್ತಿದ್ದೇನೆ' ಎನ್ನುತ್ತಾರೆ ನಿರ್ದೇಶಕ ಸುಹಾಸ್‌.

ಬ್ಲ್ಯಾಂಕ್‌ ಸಿನಿಮಾದಲ್ಲಿ ಕಥೆ ಮತ್ತು ಚಿತ್ರಕಥೆ ಬೇರೆ ಥರ ಇದೆ. ಈ ರೀತಿಯ ಚಿತ್ರಕಥೆಗಳು ಕನ್ನಡದಲ್ಲಿ ವಿರಳ.

-ಸುಹಾಸ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌