ಆ್ಯಪ್ನಗರ

ಬಾಲಿವುಡ್‌ನಿಂದ ಕನ್ನಡಕ್ಕೆ ಹಿಂದಿರುಗಿದ ಕೃತಿ

ಬಾಲಿವುಡ್‌ನಲಿ ಬಿಝಿ ಆಗಿದ್ದ ನಟಿ ಕೃತಿ ಕರಬಂಧ ಮತ್ತೆ ಕನ್ನಡಕ್ಕೆ ವಾಪಸಾಗಿದ್ದಾರೆ. ಪ್ರೇಮ್‌ ಮುಖ್ಯಭೂಮಿಕೆಯ 'ದಳಪತಿ' ಸಿನಿಮಾದ ಶೂಟಿಂಗ್‌ನಲ್ಲಿ ಅವರು ಪಾಲ್ಗೊಂಡಿದ್ದಾರೆ.

Vijaya Karnataka Web 11 Aug 2017, 10:55 pm

- ಶರಣು ಹುಲ್ಲೂರು

Vijaya Karnataka Web krithikarabanda back to sanadalwood
ಬಾಲಿವುಡ್‌ನಿಂದ ಕನ್ನಡಕ್ಕೆ ಹಿಂದಿರುಗಿದ ಕೃತಿ


ಬಾಲಿವುಡ್‌ನಲಿ ಬಿಝಿ ಆಗಿದ್ದ ನಟಿ ಕೃತಿ ಕರಬಂಧ ಮತ್ತೆ ಕನ್ನಡಕ್ಕೆ ವಾಪಸಾಗಿದ್ದಾರೆ. ಪ್ರೇಮ್‌ ಮುಖ್ಯಭೂಮಿಕೆಯ 'ದಳಪತಿ' ಸಿನಿಮಾದ ಶೂಟಿಂಗ್‌ನಲ್ಲಿ ಅವರು ಪಾಲ್ಗೊಂಡಿದ್ದಾರೆ.

ಕಳೆದೆರಡು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವಾಗಿದ್ದ ನಟಿ ಕೃತಿ ಕರಬಂಧ ಮತ್ತೆ ವಾಪಸ್ಸಾಗಿದ್ದು, ನೆನಪಿರಲಿ ಪ್ರೇಮ್‌ ಜತೆ 'ದಳಪತಿ' ಸಿನಿಮಾದ ಶೂಟಿಂಗ್‌ನಲ್ಲಿ ಅವರು ಪಾಲ್ಗೊಂಡಿದ್ದಾರೆ.

ಇತ್ತೀಚೆಗೆ ಬೆಂಗಳೂರು ಸೇರಿ ಹಲವು ಕಡೆ ದಳಪತಿ ಚಿತ್ರದ ಹಾಡಿನ ಚಿತ್ರೀಕರಣ ನಡೆದಿದ್ದು, ಈ ಸಾಂಗ್‌ನಲ್ಲಿ ಪ್ರೇಮ್‌ ಜತೆ ಕೃತಿ ಹಾಟ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.

'ಬಾಲಿವುಡ್‌ನಲ್ಲಿ ನಟಿಸಲು ಇಷ್ಟು ಬೇಗ ಅವಕಾಶ ಸಿಗುತ್ತದೆ ಅಂತ ನಾನು ಅಂದುಕೊಂಡಿರಲಿಲ್ಲ. ನಿಜಕ್ಕೂ ಬಾಲಿವುಡ್‌ ಅನುಭವ ಥ್ರಿಲ್‌ ನೀಡಿತು. ಒಳ್ಳೆಯ ಕತೆ ಮತ್ತು ಪಾತ್ರ ಸಿಕ್ಕರೆ ಖಂಡಿತಾ ಎಲ್ಲ ಭಾಷೆಯ ಸಿನಿಮಾಗಳಲ್ಲಿ ನಟಿಸಲು ಸಿದ್ಧಳಾಗಿದ್ದೇನೆ' ಅಂತಾರೆ ಕೃತಿ.

ಈ ಚಿತ್ರದಲ್ಲಿ ನಾನು ಪಕ್ಕದ್ಮನೆ ಹುಡುಗಿ ರೀತಿಯ ಪಾತ್ರದಲ್ಲಿ ನಟಿಸಿದ್ದೇನೆ. ಹಾಡುಗಳಲ್ಲಿ ಬೋಲ್ಡ್‌ ಆಗಿ ಹಾಗೂ ಕತೆಯ ದೃಶ್ಯಗಳಲ್ಲಿ ಅಪ್ಪಟ ಸಾಂಪ್ರಾದಾಯಿಕ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಕಮ್‌ಬ್ಯಾಕ್‌ ಪಾತ್ರ ಚೆನ್ನಾಗಿದೆ ಎಂದು ಅವರು ಹೇಳಿದ್ದಾರೆ.

ಜೂಮ್‌ ಚಿತ್ರದ ನಂತರ ಪ್ರಶಾಂತ್‌ ರಾಜ್‌ ಈ ಚಿತ್ರವನ್ನು ಕೈ ಗೆತ್ತಿಕೊಂಡಿದ್ದಾರೆ. ಆ್ಯಕ್ಷನ್‌ ಹಿನ್ನೆಲೆಯ ಕತೆಯನ್ನು ಈ ಬಾರಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದು, ಕಥಾ ನಾಯಕ ಮತ್ತು ನಾಯಕಿಯನ್ನು ವಿಶೇಷವಾಗಿ ಚಿತ್ರಿಸಿದ್ದಾರಂತೆ. ಬಾಲಿವುಡ್‌ನಲ್ಲಿ ಕೃತಿ ಬಿಝಿ ಆಗಿದ್ದರಿಂದ ಮತ್ತು ಪ್ರೇಮ್‌ ಬೇರೆ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರಿಂದ ದಳಪತಿಗೆ ಒಂದಷ್ಟು ಗ್ಯಾಪ್‌ ಕೊಟ್ಟು ಮತ್ತೇ ಚಿತ್ರೀಕರಣ ಶುರು ಮಾಡಿದ್ದಾರೆ.

'ಬಾಲಿವುಡ್‌ನಲ್ಲಿ ನಟನೆಗೆ ಅವಕಾಶವಿರುವ ಪಾತ್ರ ಸಿಕ್ಕವು. ಹಾಗಾಗಿ ಸಹಜವಾಗಿಯೇ ಖುಷಿ ಆಯಿತು. ಕನ್ನಡದಲ್ಲೂ ನನಗೆ ಒಳ್ಳೊಳ್ಳೆಯ ಪಾತ್ರಗಳು ಸಿಗುತ್ತಿವೆ. ಈ ಜರ್ನಿ ನನಗೆ ಸಂಭ್ರಮ ತಂದಿದೆ'

- ಕೃತಿ ಕರಬಂಧ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌