ಆ್ಯಪ್ನಗರ

ಯಾರೇನೇ ಅನ್ನಲಿ ಇದು ಸ್ವಮೇಕ್‌

'ಲೀ' ಚಿತ್ರ ಶೂಟಿಂಗ್‌ ಮುಗಿಸಿ ಬಿಡುಗಡೆಯ ಹೊಸ್ತಿಲಲ್ಲಿದೆ ಏತನ್ಮಧ್ಯೆ ಈ ಚಿತ್ರ ರೀಮೇಕ್‌ ಎಂಬ ರೂಮರ್‌ ಹಬ್ಬಿದೆ...

Vijaya Karnataka Web 30 Dec 2016, 4:00 am

- ಪದ್ಮಾ ಶಿವಮೊಗ್ಗ

'ಲೀ' ಚಿತ್ರ ಶೂಟಿಂಗ್‌ ಮುಗಿಸಿ ಬಿಡುಗಡೆಯ ಹೊಸ್ತಿಲಲ್ಲಿದೆ. ಏತನ್ಮಧ್ಯೆ ಈ ಚಿತ್ರ ರೀಮೇಕ್‌ ಎಂಬ ರೂಮರ್‌ ಹಬ್ಬಿದೆ. ಆದರೆ, ಇದು ಪಕ್ಕಾ ಸ್ವಮೇಕ್‌ ಎಂದಿದ್ದಾರೆ ಸಿನಿಮಾದ ನಿರ್ದೇಶಕ ಶ್ರೀನಂದನ್‌.

Vijaya Karnataka Web lee kannada movie
ಯಾರೇನೇ ಅನ್ನಲಿ ಇದು ಸ್ವಮೇಕ್‌


ಸಾಹಸ ಮತ್ತು ಪ್ರೇಮಕತೆ ಇಟ್ಟುಕೊಂಡು 'ಲೀ' ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶ್ರೀನಂದನ್‌. ಇನ್ನೇನು ಇದನ್ನು ಬಿಡುಗಡೆ ಮಾಡುವ ಖುಷಿಯಲ್ಲಿ ಇರುವಾಗಲೇ ಈ ಚಿತ್ರ ರೀಮೇಕ್‌ ಎಂದು ಗಾಳಿಸುದ್ದಿಯೊಂದು ಹಬ್ಬಿದೆ. ಆದರೆ ಇದನ್ನು ಕಡ್ಡಿಮುರಿದಂತೆ ನಿರಾಕರಿಸುವ ಶ್ರೀನಂದನ್‌, ಇದು ಪಕ್ಕಾ ಸ್ವಮೇಕ್‌ ಎಂದು ಹೇಳಿದ್ದಾರೆ.

'ಈ ಮೊದಲು ದರ್ಶನ್‌ ನಟನೆಯ ಅಗ್ರಜ ಚಿತ್ರ ಮಾಡಿದಾಗ ವಿದೇಶಿ ಚಿತ್ರವೊಂದರ ಸ್ಫೂರ್ತಿ ಪಡೆದು ಚಿತ್ರ ಮಾಡಿದ್ದೇನೆ ಎಂದಿದ್ದೆ. ಆಗಲೂ ರೀಮೇಕ್‌ ಮಾಡಿದ್ದೇನೆ ಎಂದೇ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಆದರೆ, ಲೀ ಚಿತ್ರಕ್ಕೆ ನಾನೇ ಕತೆ ಬರೆದಿದ್ದೇನೆ. ಒಂದೂವರೆ ವರ್ಷ ಇದರ ಮೇಲೆ ಕೆಲಸ ಮಾಡಿದ್ದೇನೆ. ಮೊದಲು ಪಾತ್ರವೊಂದು ನನ್ನ ಮನದಲ್ಲಿ ಮೂಡಿತ್ತು. ಅದನ್ನು ಇಟ್ಟುಕೊಂಡು ಕತೆ ಬೆಳೆಸಿಕೊಂಡು ಹೋದೆ' ಎನ್ನುತ್ತಾರೆ ನಿರ್ದೇಶಕ. ಚಿತ್ರಕತೆಯನ್ನೂ ಇವರೇ ಬರೆದಿದ್ದು.

ಸುಮಂತ್‌ ಶೈಲೇಂದ್ರ ನಾಯಕನಾಗಿ ನಟಿಸಿದ್ದು, ಚಿತ್ರದಲ್ಲಿ ವಿಶೇಷ ಫೈಟ್‌ ದೃಶ್ಯಗಳಿವೆ. 'ಇದಕ್ಕಾಗಿ ಸುಮಂತ್‌ ಮಾರ್ಷಲ್‌ ಆರ್ಟ್ಸ್ ಕಲಿತಿದ್ದಾರೆ. ನಾಲ್ಕೈದು ಗೆಟಪ್‌ಗಳಲ್ಲೂ ಕಾಣಿಸಿಕೊಂಡಿದ್ದಾರೆ. ಮೂರು ತಿಂಗಳು ಅವರಿಗೆ ಮೈಸೂರಿನಲ್ಲಿ ಮಾರ್ಷಲ್‌ ಆರ್ಟ್ಸ್ ತರಬೇತಿ ನೀಡಲಾಗಿದೆ. ನಟನೆಯನ್ನೂ ಒಂದು ತಿಂಗಳು ಕಲಿತಿದ್ದಾರೆ. ವಿಭಿನ್ನ ಬಾಡಿ ಲ್ಯಾಂಗ್ವೇಜ್‌ನೊಂದಿಗೆ ಅವರು ನಟಿಸಬೇಕಿತ್ತು. ಹಾಗಾಗಿ ತರಬೇತಿ ಅಗತ್ಯ ಇತ್ತು' ಎನ್ನುತ್ತಾರೆ ಶ್ರೀನಂದನ್‌.

ಈ ಡೈರೆಕ್ಟರ್‌ ತಮ್ಮ ಎರಡನೇ ಚಿತ್ರಕ್ಕೆ ಸ್ಟಾರ್‌ಡಮ್‌ ಇರುವ ನಟ ಬೇಡ ಎಂದು ನಿರ್ಧರಿಸೋಕೆ ಕಾರಣವೂ ಇದೆ. 'ಹೆಚ್ಚು ಸ್ಟಾರ್‌ಡಮ್‌ ಇದ್ದರೆ ಈ ಪಾತ್ರಕ್ಕೆ ಒಗ್ಗುವುದು ಕಷ್ಟವಿತ್ತು. ಅಲ್ಲದೆ, ಪರ್ಫಾಮೆನ್ಸ್‌ ಓರಿಯೆಂಟೆಂಡ್‌ ಸಿನಿಮಾ. ಇದಕ್ಕೆ ಹೆಚ್ಚು ಸಮಯ ಕೊಟ್ಟು ಸಹಕರಿಸುವ ನಟ ಬೇಕಿತ್ತು. ಅಲ್ಲದೆ, ನ್ಯಾಚುರಲ್‌ ಆಗಿ ಕಾಣಿಸಬೇಕು ಎಂಬ ಕಾರಣಕ್ಕೆ ಹೆಚ್ಚು ಸ್ಟಾರ್‌ಡಮ್‌ ಇಲ್ಲದ ನಟನನ್ನು ಹಾಕಿಕೊಳ್ಳಲು ನಿರ್ಧರಿಸಿದೆ. ಸುಮಂತ್‌ ಪಾತ್ರಕ್ಕೆ ಬೇಕಾದ ರೀತಿಯಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ' ಎನ್ನುವುದು ನಿರ್ದೇಶಕರ ವಿವರ.

ನಭಾ ನಟೇಶ್‌ ಮತ್ತು ಬಾಲಿವುಡ್‌ ನಟಿ ಸ್ನೇಹಾ ನಾಯಕಿಯರಾಗಿ ನಟಿಸಿದ್ದಾರೆ. 'ಕ್ಯೂಟ್‌ ಆದ ಲವ್‌ ಸ್ಟೋರಿ ಚಿತ್ರದಲ್ಲಿದೆ. ಹೀರೋಗೆ ಜಾಸ್ತಿ ಡೈಲಾಗ್ಸ್‌ ಇಲ್ಲ. ಪ್ರೀತಿಗೆ ಜಾತಿ, ಧರ್ಮ ಅಡ್ಡ ಬರುವ ವಿಷಯವನ್ನು ಚಿತ್ರದಲ್ಲಿ ತೋರಿಸಿದ್ದೇನೆ. ಸ್ಕ್ರೀನ್‌ ಪ್ಲೇ ಹೊಸ ರೀತಿಯಲ್ಲಿ ಮಾಡಿದ್ದು, ಮೈಸೂರು, ಬೆಂಗಳೂರು, ಮಲೇಷಿಯಾದಲ್ಲಿ ಚಿತ್ರೀಕರಣ ಮಾಡಲಾಗಿದೆ' ಎಂಬ ಮಾತನ್ನೂ ಅವರು ಸೇರಿಸುತ್ತಾರೆ.

'ನನ್ನ ಕಲ್ಪನೆಯ ಕತೆ ಲೀ ಚಿತ್ರದಲ್ಲಿದೆ. ಹೊಸ ನಿರೂಪಣೆ ಮತ್ತು ಚಿತ್ರಕತೆ ಚಿತ್ರದಲ್ಲಿದೆ'.

-ಶ್ರೀನಂದನ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌