ಆ್ಯಪ್ನಗರ

ಪಾರ್ವತಮ್ಮನವರ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕಳುಹಿಸಬಹುದಿತ್ತು: ಲೀಲಾವತಿ ಪ್ರಶ್ನೆ

ಪಾರ್ವತಮ್ಮ ರಾಜ್‌ಕುಮಾರ್‌ ಪಾರ್ಥೀವ ಶರೀರದ ದರ್ಶನ ಪಡೆಯಲು ಆಗಮಿಸಿದ ಹಿರಿಯ ನಟಿ ಲೀಲಾವತಿ ಅತ್ಯಂತ ಭಾವುಕರಾಗಿ ಮಾತನಾಡಿದರು.

ವಿಕ ಸುದ್ದಿಲೋಕ 31 May 2017, 12:23 pm
ಬೆಂಗಳೂರು: ಪಾರ್ವತಮ್ಮ ರಾಜ್‌ಕುಮಾರ್‌ ಪಾರ್ಥೀವ ಶರೀರದ ದರ್ಶನ ಪಡೆಯಲು ಆಗಮಿಸಿದ ಹಿರಿಯ ನಟಿ ಲೀಲಾವತಿ ಅತ್ಯಂತ ಭಾವುಕರಾಗಿ ಮಾತನಾಡಿದರು.
Vijaya Karnataka Web leelavathi condolence for parvathamma rajkumar death
ಪಾರ್ವತಮ್ಮನವರ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕಳುಹಿಸಬಹುದಿತ್ತು: ಲೀಲಾವತಿ ಪ್ರಶ್ನೆ


'ಈ ಸುಳ್ಳಿನ ಪ್ರಪಂಚದಲ್ಲಿ ಏನು ಮಾತಾಡಿ ಏನು ಪ್ರಯೋಜನ. ಪಾರ್ವತಮ್ಮಅವರು ಹಿಮಾಲಯ ಪರ್ವತ. 30 ವರ್ಷದ ಹಿಂದೆ ತೆಂಗಿನಕಾಯಿ ಕೊಟ್ಟು ಹೂ ಕೊಟ್ಟಿದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರಿಗೆ ಮೋಕ್ಷ ಸಿಗಲಿ' ಎಂದು ಲೀಲಾವತಿ ಕಣ್ಣೀರಿಟ್ಟರು.

ಅಷ್ಟೇ ಅಲ್ಲದೆ ಪಾರ್ವತಮ್ಮ ಸಾವಿನ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. 'ಪಾರ್ವತಮ್ಮ ಅವರನ್ನು ಚಿಕಿತ್ಸೆಗಾಗಿ ಸಿಂಗಾಪುರ್‌ಗೆ ಕಳುಹಿಸಬಹುದಿತ್ತು. ಸರ್ಕಾರದ ಭಂಡಾರಲ್ಲಿ ಹಣ ಇರಲಿಲ್ಲವೆ? ಮಕ್ಕಳು ಯಾಕೆ ಅವರನ್ನು ವಿದೇಶಕ್ಕೆ ಕೊಂಡೊಯ್ಯಲಿಲ್ಲ? ಅವರು ಚಿತ್ರರಂಗದಲ್ಲಿ ಇನ್ನೂ ಉಳಿಯಬೇಕಿತ್ತು' ಎಂದು ಲೀಲಾವತಿ ಬೇಸರ ವ್ಯಕ್ತಪಡಿಸಿದರು.

ಪಾರ್ವತಮ್ಮನವರ ಮಕ್ಕಳಿಗೆ ಧೈರ್ಯದಿಂದ ಬದುಕೋ ಶಕ್ತಿ ಕೊಡಲಿ. ಅವರಿಗೆ ದುಃಖ ಭರಿಸೋ ಶಕ್ತಿ ನೀಡಲಿ' ಎಂದು ಲೀಲಾವತಿ ಶೋಕತಪ್ತರಾಗಿ ನುಡಿದರು. ಇದೇ ಸಂದರ್ಭದಲ್ಲಿ ಲೀಲಾವತಿ ಪುತ್ರ ವಿನೋದ್‌ ರಾಜ್‌ ಸಹ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌