ಆ್ಯಪ್ನಗರ

ದರ್ಶನ್‌ಗೆ ಅಭಿಮಾನಿಯ ಮನಕಲಕುವ ಪತ್ರ

ಸ್ಟಾರ್‌ ನಟರು ತಮ್ಮ ಬೇಡಿಕೆ ಈಡೇರಿಸುತ್ತಾರೆಂಬ ನಂಬಿಕೆ ಅಭಿಮಾನಿಗಳಿಗೆ ಸಹಜ. ಅದೇ ರೀತಿ ಈಗ ಸ್ಮಶಾನವಾಸಿಯೊಬ್ಬರು ದರ್ಶನ್‌ಗೆ ಪತ್ರ ಬರದು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಕೆಲ ವರ್ಷಗಳಿಂದ ತಮಗೆ ಬರಬೇಕಾದ ಸಂಬಳವೂ ಬರುತ್ತಿಲ್ಲ ಎಂದು ನೊಂದುಕೊಂಡಿದ್ದು, ಇದಕ್ಕೆ ಏನಾದ್ರೂ ಮಾಡುವಂತೆ ಕೋರಿದ್ದಾರೆ.

Vijaya Karnataka 11 May 2019, 5:00 am
ಸ್ಟಾರ್‌ ನಟರು ತಮ್ಮ ಬೇಡಿಕೆ ಈಡೇರಿಸುತ್ತಾರೆಂಬ ನಂಬಿಕೆ ಅಭಿಮಾನಿಗಳಿಗೆ ಸಹಜ. ಅದೇ ರೀತಿ ಈಗ ಸ್ಮಶಾನವಾಸಿಯೊಬ್ಬರು ದರ್ಶನ್‌ಗೆ ಪತ್ರ ಬರದು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಕೆಲ ವರ್ಷಗಳಿಂದ ತಮಗೆ ಬರಬೇಕಾದ ಸಂಬಳವೂ ಬರುತ್ತಿಲ್ಲ ಎಂದು ನೊಂದುಕೊಂಡಿದ್ದು, ಇದಕ್ಕೆ ಏನಾದ್ರೂ ಮಾಡುವಂತೆ ಕೋರಿದ್ದಾರೆ.
Vijaya Karnataka Web darshan1


ಕಲ್ಲಳ್ಳಿ ಸ್ಮಶಾನದಲ್ಲಿ ಅಂತೋಣಿ ಸ್ವಾಮಿ ಕುಟುಂಬ ಹೆಣ ಸುಡುವ ಕೆಲಸ ಮಾಡುತ್ತಾಬಂದಿದೆ. ಆದರೆ, ಇವರಿಗೆ ಸರ್ಕಾರದಿಂದ ನಿಗದಿ ಪಡಿಸಿದ 1 ಸಾವಿರ ರೂಪಾಯಿಯನ್ನೂ ಕಳೆದ 8 ವರ್ಷಗಳಿಂದ ನೀಡಲ್ಲವಂತೆ. ಇದು ಸಿಗುವಂತೆ ಮಾಡಿ ಎಂದು ದರ್ಶನ್‌ರಿಗೆ ತಮ್ಮ ಮಗಳ ಕೈಯಲ್ಲಿ ಪತ್ರ ಬರೆಸಿದ್ದಾರೆ. ಇದಕ್ಕೆ ಕಾರಣ ಹಿಂದೊಮ್ಮೆ ಸಂಬಂಧಿಕರ ಅಂತ್ಯಸಂಸ್ಕಾರಕ್ಕೆ ದರ್ಶನ್‌ ಅಲ್ಲಿಗೆ ಹೋಗಿದ್ದಾಗ ಆಂತೋಣಿಯವರನ್ನು ಮಾತನಾಡಿಸಿ ಕೈಗೆ ಹಣ ನೀಡಿದ್ದರಂತೆ.

ದರ್ಶನ್‌ ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವುದರಿಂದ ರಾಜಕೀಯ ಬೆಂಬಲದಿಂದ ತಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಆಂತೋಣಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌