ಆ್ಯಪ್ನಗರ

ಎಲ್ ಎನ್ ಶಾಸ್ತ್ರಿ ಹಾಡಿದ ಕೊನೆ ಹಾಡು ಈ ಜೀವಗಾನ

ಕರುಳಿನ ಕ್ಯಾನ್ಸರ್‌‍ನಿಂದ ಬಳಲುತ್ತಿದ್ದರೂ, ಕೊನೆಗಾಲದಲ್ಲಿ ಹಾಸಿಗೆ ಮೇಲೆ ಮಲಗಿಯೇ ಹಾಡಿಗೆ ರಾಗ ಸಂಯೋಜನೆ ಮಾಡುತ್ತಿದ್ದರು ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಎಲ್ ಎನ್ ಶಾಸ್ತ್ರಿ. ಮೇಲೊಬ್ಬ ಮಾಯಾವಿ ಚಿತ್ರಕ್ಕಾಗಿ ಈ ಹಾಡನ್ನು ಹಾಡಿದ್ದಾರೆ. ಇದು ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಕೊನೆಯ ಹಾಡು.

Vijaya Karnataka Web 7 Sep 2019, 11:10 pm

ಭೀಕರ ಕಾಯಿಲೆ ಕ್ಯಾನ್ಸರ್‌ನಿಂದ ಬಳಲುತ್ತಾ ಇದ್ದರೂ ಸಹ ಹಾಡು ಮತ್ತು ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಗಾಯಕ ಎಲ್ ಎನ್ ಶಾಸ್ತ್ರಿ ಕೊನೆ ದಿನಗಳಲ್ಲಿ ನೀರು ತುಂಬಿದ ನೋವಿನ ಹೊಟ್ಟೆಯನ್ನು ಹೊತ್ತುಕೊಂಡೇ ಸ್ಟುಡಿಯೋಗೆ ಬಂದು ತನಗಾಗೇ ಬರೆಸಿಕೊಂಡ ಹಾಡೇನೋ ಎನ್ನುವ ಹಾಗೆ 'ನಿಂತು ಹೋಯಿತೇ ಜೀವ ಗಾನ' ಎಂದು ಹಾಡಿ ಸಂಗೀತ ಪ್ರಿಯರ ಮನವನ್ನು ಕಲಕಿ ಇಹಲೋಕಕ್ಕೆ ಪ್ರಯಾಣ ಬೆಳೆಸಿದರು.
Vijaya Karnataka Web ln-shastry


ಈಗಲೂ ಅವರ ಸಿನಿಮಾ ಪ್ರೀತಿ, ಬದ್ಧತೆ ಹಾಗೂ ಕೊನೆಗಾಲದಲ್ಲಿ ಹಾಸಿಗೆಯ ಮೇಲೆ ಮಲಗಿಯೇ ಹಾಡಿಗೆ ರಾಗ ಸಂಯೋಜನೆ ಮಾಡ್ತಾ ಇದ್ದಿದ್ದು ನೆನಪಿಸಿಕೊಂಡರೆ ಎಂಥವರಿಗ ಕಣ್ಣಾಲಿ ಒದ್ದೆಯಾಗುತ್ತವೆ. ಇಂದು ಶಾಸ್ತ್ರಿ ಅವರು ಭೌತಿಕವಾಗಿ ಇಲ್ಲದಿದ್ದರೂ ಸಹ ಅವರ ಹಾಡುಗಳು, ಅವರೊಂದಿಗಿನ ಒಡನಾಟ, ಸರಳತೆ, ಆತ್ಮೀಯತೆ ಎಂದಿಗೂ ದೂರಾಗದು.
ಜನಪ್ರಿಯ ಹಿನ್ನೆಲೆ ಗಾಯಕ ಎಲ್ ಎನ್ ಶಾಸ್ತ್ರಿ ಯಾರು ಏನು ಎತ್ತ?

ಸಂಚಾರಿ ವಿಜಯ್, ಅನನ್ಯಾ ಶೆಟ್ಟಿ ತಾರಾಗಣದ "ಮೇಲೊಬ್ಬ ಮಾಯಾವಿ" ಚಿತ್ರಕ್ಕಾಗಿ ಈ ಹಾಡನ್ನು ಹಾಡಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ ಬರೆದು ನವೀನ್ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿದ ಪುತ್ತೂರು ಭಾರತ್ ಅವರು ನಿರ್ಮಾಣ ಮಾಡಿರುವ ಸಿನೆಮಾದ ಈ ಹಾಡನ್ನು ಒಮ್ಮೆ ಕೇಳಿ. ಈ ಹಾಡಿನ ದೃಶ್ಯವನ್ನೊಮ್ಮೆ ನೋಡಿದರೆ ಎಂಥವರನ್ನೂ ಸಹ ಒಂದು ಕ್ಷಣ ಕಾಡದೇ ಬಿಡದು, ಸದ್ಯದಲ್ಲೇ ವಿಡಿಯೋ ಕೂಡ ನಿಮ್ಮ ಮುಂದೆ ಬರಲಿದೆ ಎಂದಿದೆ ಚಿತ್ರತಂಡ.

ಎಲ್ ಎನ್ ಶಾಸ್ತ್ರಿ ಎಂದೇ ಚಿರಪರಿಚಿತರಾಗಿರುವ ಇವರ ಸಂಪೂರ್ಣ ಹೆಸರು ಲಕ್ಷ್ಮಿ ನರಸಿಂಹ ಶಾಸ್ತ್ರಿ. ಸಂಗೀತ ನಿರ್ದೇಶಕರಾಗಿ, ಹಿನ್ನೆಲೆ ಗಾಯಕರಾಗಿ ಕ್ರಿಯಾಶೀಲರಾಗಿದ್ದ ಶಾಸ್ತ್ರಿ 1996ರ 'ಅಜಗಜಾಂತರ' ಚಿತ್ರದ ಮೂಲಕ ಹಾಡಲು ಆರಂಭಿಸಿದ ಅವರ ಕಂಠಸಿರಿಯಲ್ಲಿ 3000ಕ್ಕೂ ಹೆಚ್ಚು ಹಾಡುಗಳು ಹೊರಹೊಮ್ಮಿವೆ.

ಶಾಸ್ತ್ರಿ ಅವರು 25ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಜನುಮದ ಜೋಡಿ (1996) ಚಿತ್ರದಲ್ಲಿನ 'ಕೋಲುಮಂಡೆ ಜಂಗಮ ದೇವರು' ಹಾಡಿಗೆ ರಾಜ್ಯ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ವಿ ಮನೋಹರ್ ಅವರೊಂದಿಗೆ ಶಾಸ್ತ್ರಿ ಅವರಿಗೆ ಉತ್ತಮ ಒಡನಾಡ ಇದೆ. ತರ್ಲೆ ನನ್ ಮಗ, ಶ್, ಬಳ್ಳಾರಿ ನಾಗ, ರವಿಮಾಮ, ಭಂಡ ನನ್ನ ಗಂಡ ಸೇರಿದಂತೆ ಹಲವಾರು ಸಿನಿಮಾಗಳಿಗೆ ಶಾಸ್ತ್ರಿ ಹಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌