ಆ್ಯಪ್ನಗರ

ಇಂಗ್ಲೆಂಡ್‌ ಪ್ರೇಕ್ಷಕರ ಮನಸೂರೆಗೊಂಡ ಲಂಡನ್‌ನಲ್ಲಿ ಲಂಬೋದರ

ಟ್ರೇಲರ್‌ ಮತ್ತು ಹಾಡುಗಳಿಂದ ಗಮನ ಸೆಳೆದಿರುವ ಲಂಡನ್‌ನಲ್ಲಿ ಲಂಬೋದರ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕಂಟೆಂಟ್‌ನ್ನು ಇಂಗ್ಲೆಂಡ್‌ನ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ ಎಂಬುದು ಇನ್ನೊಂದು ವಿಷೇಷ.

Vijaya Karnataka 26 Mar 2019, 5:00 am
ನಟಿ ಶ್ರುತಿ ಪ್ರಕಾಶ್‌ ಮತ್ತು ನವ ನಟ ಸಂತೋಷ್‌ ನಟನೆಯ ಲಂಡನ್‌ನಲ್ಲಿ ಲಂಬೋದರ ಸಿನಿಮಾ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದ್ದು, ಸಿನಿಮಾದ ಕಥೆಯ ಬಗ್ಗೆ ಇಂಗ್ಲೆಂಡ್‌ನ ಪ್ರಸಿದ್ಧ ಕಾನೂನು ತಜ್ಞ ಹಾಗೂ ಪ್ರಧಾನಿ ಥೆರೇಸಾ ಮೇ ಅವರ ಕಾನೂನು ಸಲಹೆಗಾರ (ಸಾಲಿಸಿಟರ್‌ ಜನರಲ್‌) ರಾಬರ್ಟ್‌ ಬಕ್ಲಂಡ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Vijaya Karnataka Web londanalli


'ಲಂಡನ್‌ನಲ್ಲಿ ಲಂಬೋದರ ಸಿನಿಮಾದ ಶೇ.70ರಷ್ಟು ಚಿತ್ರೀಕರಣವಾಗಿದೆ. ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಚಿತ್ರತಂಡ ರಾಬರ್ಟ್‌ ಬಕ್ಲಂಡ್‌ ಅವರನ್ನು ಭೇಟಿ ಮಾಡಿ ಸಿನಿಮಾದ ಕಂಟೆಂಟ್‌ನ್ನು ವಿವರಿಸಿತ್ತು. ಆಗ ಅವರು ಅದನ್ನು ಇಷ್ಟಪಟ್ಟು ನಮಗೆ ಶೂಟಿಂಗ್‌ ಮಾಡಲು ಸಾಕಷ್ಟು ಸಹಾಯ ಮಾಡಿದರು. ಅತಿ ಹೆಚ್ಚು ಹಣ ನೀಡಬೇಕಿದ್ದ ಜಾಗದಲ್ಲೆಲ್ಲ ಕಡಿಮೆ ಶುಲ್ಕದಲ್ಲಿ ಶೂಟಿಂಗ್‌ಗೆ ಅವಕಾಶ ಕೊಡಿಸಿದರು. ಅಲ್ಲದೇ ಬಿಡುಗಡೆಯಾದ ನಂತರ ಚಿತ್ರವನ್ನು ನೋಡುವುದಾಗಿ ಅವರು ಹೇಳಿದ್ದರು. ಪ್ರೀಮಿಯರ್‌ ಶೋ ನೋಡಿ ಖುಷಿಯಾಗಿದ್ದಾರೆ'ಎಂದು ನಿರ್ದೇಶಕ ರಾಜ್‌ ಸೂರ್ಯ ತಿಳಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಪ್ರೀಮಿಯರ್‌ ಕಂಡ ಮೊದಲ ಕನ್ನಡ ಸಿನಿಮಾ :

ಲಂಡನ್‌ನಲ್ಲಿ ಲಂಬೋದರ ಸಿನಿಮಾ ಇದೇ 29ಕ್ಕೆ ಬಿಡುಗಡೆಯಾಗುತ್ತದೆ. ಆದರೆ ಚಿತ್ರ ಈಗಾಗಲೇ ಲಂಡನ್‌ನಲ್ಲಿ ಪ್ರೀಮಿಯರ್‌ ಆಗಿದೆ. 'ಕನ್ನಡ ಸಿನಿಮಾವೊಂದು ಇಂಗ್ಲೆಂಡ್‌ನಲ್ಲಿ ಪ್ರೀಮಿಯರ್‌ ಪ್ರದರ್ಶನ ಕಾಣುತ್ತಿರುವುದು ಇದೇ ಮೊದಲು. ಈಗಾಗಲೇ ಸಿನಿಮಾ ನೋಡಿರುವ ಅನೇಕರು ನನಗೆ ಮೆಸೆಜ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾರ್ಚ್‌ 23 ಮತ್ತು 24ರಂದು ಎರಡು ಪ್ರೀಮಿಯರ್‌ ಪ್ರದರ್ಶನ ಕಂಡಿದ್ದು, ಸುಮಾರು ಸಾವಿರ ಮಂದಿ ಸಿನಿಮಾ ನೋಡಿದ್ದಾರೆ. ಅದರಲ್ಲಿ ಕನ್ನಡ ಬಾರದವರು ಎಷ್ಟೋ ಜನರಿದ್ದರು. ಎಲ್ಲರೂ ಚಿತ್ರವನ್ನು ಮೆಚ್ಚಿಕೊಂಡು ರಿವ್ಯೂ ನೀಡಿದ್ದಾರೆ. ಸಿನಿಮಾದಲ್ಲಿ ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್‌ ಸಬ್ಜೆಕ್ಟ್ ಇರುವುದು ಜನರಿಗೆ ಅತಿ ಹೆಚ್ಚು ಇಷ್ಟವಾಗಿದೆ. ಭಾಷೆ ಬಾರದವರು ಚಿತ್ರವನ್ನು ತಮಗೆ ಕನೆಕ್ಟ್ ಮಾಡಿಕೊಂಡು ನೋಡಿದ್ದಾರೆ'ಎಂದು ಅವರು ಮಾಹಿತಿ ನೀಡಿದ್ದಾರೆ.

ಲಂಡನ್‌ನಲ್ಲಿ ಲಂಬೋದರ ಸಿನಿಮಾದಲ್ಲಿ ಅಚ್ಯುತ್‌ಕುಮಾರ್‌, ಸಾಧುಕೋಕಿಲಾ ಸೇರಿ ಸಾಕಷ್ಟು ಮಂದಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಲಂಡನ್‌ಗೆ ಹೋಗಿ ನೆಲೆಸಬೇಕು ಎಂದು ಆಸೆ ಇರುವ ಯುವಕನ ಕಥೆ ಇದರಲ್ಲಿದೆ.

ಇಂಗ್ಲೆಂಡ್‌ನ ಕಾನೂನು ಸಿನಿಮಾ ನೋಡಿ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಶೂಟಿಂಗ್‌ ಸಮಯದಲ್ಲಿ ನಮ್ಮ ಜತೆ ಅವರು ಕಂಟೆಂಟ್‌ ಬಗ್ಗೆ ಮತ್ತು ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಇನ್ನು ಇಂಗ್ಲೆಂಡ್‌ನಲ್ಲಿ ಆಗಿರುವ ಪ್ರದರ್ಶನದಲ್ಲಿ ಎಲ್ಲರೂ ಪಾಸಿಟಿವ್‌ ರಿವ್ಯೂ ಬಂದಿದ್ದು ನನಗೆ ಖುಷಿಯಾಗಿದೆ.

-ರಾಜ್‌ ಸೂರ್ಯ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌