ಆ್ಯಪ್ನಗರ

ಸಲಗಕ್ಕಾಗಿ ಪೆನ್ನು ಹಿಡಿದ ಮಾಸ್ತಿ

ಪಂಚತಂತ್ರದ ಯಶಸ್ಸಿನಲ್ಲಿರುವ ಕಥೆಗಾರ ಕಮ್‌ ಸಂಭಾಷಣೆಕಾರ ಮಾಸ್ತಿ ಈಗ ದುನಿಯಾ ವಿಜಯ್‌ ಅವರ ಸಲಗದ ಅಡ್ಡಾಕ್ಕೂ ಎಂಟ್ರಿ ಕೊಟ್ಟಿದ್ದಾರೆ...

Vijaya Karnataka 11 Apr 2019, 5:00 am
ಪಂಚತಂತ್ರದ ಯಶಸ್ಸಿನಲ್ಲಿರುವ ಕಥೆಗಾರ ಕಮ್‌ ಸಂಭಾಷಣೆಕಾರ ಮಾಸ್ತಿ ಈಗ ದುನಿಯಾ ವಿಜಯ್‌ ಅವರ ಸಲಗದ ಅಡ್ಡಾಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಅರ್ಥಾತ್‌ ಸಲಗ ಸಿನಿಮಾಗೆ ಡೈಲಾಗ್‌ ಬರೆಯುತ್ತಿದ್ದಾರೆ.
Vijaya Karnataka Web maas


ಈ ಬಗ್ಗೆ ಸ್ವತಃ ದುನಿಯಾ ವಿಜಯ್‌ ಅವರೇ ತಮ್ಮ ಫೇಸ್‌ ಬುಕ್‌ ಪೇಜ್‌ನಲ್ಲಿ ನನ್ನ ದಾರಿಯ ಪಯಣಕ್ಕೆ ಗೆಳಯ ಮಾಸ್ತಿ ಜತೆಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಬಿಗ್‌ ಬಾಸ್‌ ರನ್ನರ್‌ ಅಪ್‌ ನವೀನ್‌ ಸಜ್ಜು ಸಲಗಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ ಎಂದು ವಿಜಯ್‌ ಹೇಳಿದ್ದರು. ಈಗ ಮಾಸ್ತಿ ಸಂಭಾಷಣೆಯ ಜವಬ್ದಾರಿ ಹೊತ್ತಿದ್ದಾರೆ ಈ ಮೂಲಕ ದುನಿಯಾ ವಿಜಯ್‌ ಸಲಗ ದಿನೇ ದಿನೇ ಪ್ರತಿಭಾವಂತ ಸಮಾಗಮವಾಗುತ್ತಿದೆ.

ಮಾಸ್ತಿ ಬಗ್ಗೆ ಫೇಸ್‌ ಬುಕ್‌ನಲ್ಲಿ ಬರೆದಿರುವ ವಿಜಯ್‌, ಮಾಸ್ತಿ ಒಂದು ರೀತಿ ದಂತದಷ್ಟೇ ಬೆಲೆ ಬಾಳುವವನು, ಚಿತ್ರರಂಗದಲ್ಲಿ ಸ್ವಪ್ರತಿಭೆಯಿಂದಲೇ ಬೆಳೆದು ಬಂದವನು, ನನ್ನ ಸಲಗದ ಸಂಭಾಷಣೆಯ ಜವಬ್ದಾರಿಯನ್ನು ವಹಿಸಿಕೊಂಡಿದ್ದಾನೆ, ಇನ್ನು ಸಲಗ ಘೀಳಿಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ಮಾಸ್ತಿ ಈಗ ಸದ್ಯ ಚಿರಂಜೀವಿ ಸರ್ಜಾ ಅವರ ಖಾಕಿ, ಶಿವರಾಜ್‌ಕುಮಾರ್‌ ಅವರ ಎಸ್‌ ಆರ್‌ ಕೆ, ಡಾಲಿ, ದಂತಕಥೆ , ಮದಗಜ ಸಿನಿಮಾಗಳನ್ನು ಬರೆಯುತ್ತಿದ್ದಾರೆ. ಇದರ ಜತೆಯಲ್ಲಿ ಸಲಗ ಕೂಡಾ ಒಂದಾಗಿದೆ, ಸಲಗ ಒಂದೊಳ್ಳೆ ಮಾಸ್‌ ಕಥೆಯಾಗಿದ್ದು ಜನರಿಗೆ ಇಷ್ಟವಾಗುತ್ತದೆ ಎನ್ನುತ್ತಾರೆ ಮಾಸ್ತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌