ಆ್ಯಪ್ನಗರ

ಗೀತ ಗೋವಿಂದಮ್‌ ನಿರ್ದೇಶಕರ ಸಿನಿಮಾದಲ್ಲಿ ಮಹೇಶ್‌ ಬಾಬು

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹೊಸ ಸಿನಿಮಾ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೋಡಿಯ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿರುವ ಪರಶುರಾಮ್ ಅವರ ನಿರ್ದೇಶನದ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಈ ಚಿತ್ರಕ್ಕೆ ಸದ್ಯಕ್ಕೆ ಎಸ್‌ಎಸ್‌ಎಂಬಿ 27 ಎಂಬ ಟೈಟಲ್ ಇಡಲಾಗಿದೆ.

Vijaya Karnataka 21 Mar 2020, 12:06 am
ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಗೀತ ಗೋವಿಂದಮ್‌ ಸಿನಿಮಾವನ್ನು ನಿರ್ದೇಶಿಸಿದ್ದ ಪರಶುರಾಮ್‌ ಅವರ ಹೊಸ ಚಿತ್ರದಲ್ಲಿ ಟಾಲಿವುಡ್‌ ಪ್ರಿನ್ಸ್‌ ಮಹೇಶ್‌ ಬಾಬು ನಟಿಸಲಿದ್ದಾರೆ. ಸದ್ಯಕ್ಕೆ ಎಸ್‌ಎಸ್‌ಎಂಬಿ 27 ಎಂಬ ಟೈಟಲ್‌ ಇಟ್ಟಿರುವ ಈ ಸಿನಿಮಾದ ಬಗ್ಗೆ ಚರ್ಚಿಸಲು ಮಹೇಶ್‌ ಬಾಬು ಶೀಘ್ರದಲ್ಲೇ ಪರಶುರಾಮ್‌ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
Vijaya Karnataka Web ಮಹೇಶ್ ಬಾಬು


ಈ ಬಗ್ಗೆ ನಿರ್ದೇಶಕ ಪರಶುರಾಮ್‌ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಈ ಸಿನಿಮಾದಲ್ಲಿ ಒಂದು ಉತ್ತಮ ಸಾಮಾಜಿಕ ಸಂದೇಶವಿರುವ ಕೌಟುಂಬಿಕ ಮನೊರಂಜನೆಯ ಕಥೆಯಿದೆ. ಗೀತ ಗೋವಿಂದಮ್‌ ಸಿನಿಮಾ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈಗ ಅದರ ನಿರ್ದೇಶಕರು ಮತ್ತು ಮಹೇಶ್‌ ಬಾಬು ಕಾಂಬಿನೇಷನ್‌ನ ಹೊಸ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ಕುತೂಹಲ ಮೂಡಿದೆ.

ಇನ್ನೊಂದು ಕಡೆ ಮಹೇಶ್ ಬಾಬು ಅತಿಥಿ ಪಾತ್ರಕ್ಕೂ ರೆಡಿಯಾಗಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ಪೋಷಿಸಲಿದ್ದಾರಂತೆ. ಈ ಬಗ್ಗೆ ಟಾಲಿವುಡ್ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಅಭಿನಯಿಸಲು ಟಾಲಿವುಡ್ ರಾಜಕುಮಾರಿಗೆ ಭರ್ಜರಿ ಸಂಭಾವನೆಯನ್ನೂ ನೀಡಲಾಗಿದೆ ಎಂಬ ಸುದ್ದಿ ಮಹತ್ವ ಪಡೆದುಕೊಂಡಿದೆ.

ರೀ ಎಂಟ್ರಿ ನೀಡಿದ ನಟಿ ವಿಜಯಶಾಂತಿ ಸಂಭಾವನೆ ಎಷ್ಟು ಗೊತ್ತಾ?

ಆಚಾರ್ಯ ಸಿನಿಮಾದಲ್ಲಿನ ವಿಶೇಷ ಪಾತ್ರದಲ್ಲಿ ರಾಮ್ ಚರಣ್‌ ಕಾಣಿಸಲಿದ್ದಾರೆ ಎಂಬ ಸುದ್ದಿ ಆರಂಭದಲ್ಲಿ ಕೇಳಿಬಂದಿತ್ತು. ಆದರೆ ಈಗ ಮಹೇಶ್ ಬಾಬು ಹೆಸರು ಮಾರ್ದನಿಸುತ್ತಿದೆ. ಈ ಚಿತ್ರದಲ್ಲಿ ಮೆಗಾಸ್ಟಾರ್ ಜೊತೆಗೆ ಸೂಪರ್ ಸ್ಟಾರ್ 40 ನಿಮಿಷಗಳ ಕಾಲ ಕಾಣಿಸಲಿದ್ದಾರಂತೆ. ಈ ಹಿನ್ನೆಲೆಯಲ್ಲಿ 30 ದಿನಗಳ ಕಾಲ್‌ಶೀಟ್ ನೀಡಿದ್ದಾರಂತೆ ಮಹೇಶ್ ಬಾಬು.

ತೆಲುಗು ಸಿನಿಮಾ ಮಾಡಿ ಕೋಟಿ ಕೋಟಿ ರೂಪಾಯಿ ಬಾಚಿದ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ

ಇದಕ್ಕಾಗಿ ಮಹೇಶ್ ಬಾಬು ಪಡೆದಿರುವ ಸಂಭಾವನೆ ಸಹ ಚರ್ಚೆಯ ವಿಷಯವಾಗಿದೆ. ದಿನಕ್ಕೆ ಒಂದು ಕೋಟಿ ಸಂಭಾವನೆ ಸಂಭಾವನೆ ಲೆಕ್ಕಾಚಾರದಲ್ಲಿ ಮೂವತ್ತು ದಿನಕ್ಕೆ ₹ 30 ಕೋಟಿ ಸಂಭಾವನೆ ಪಡೆದಿದ್ದಾರಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌