ಆ್ಯಪ್ನಗರ

ಜಾಹೀರಾತು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಟ ಮಹೇಶ್ ಬಾಬು ಪುತ್ರಿ; ಸಿತಾರಾಗೆ ಸಿಗ್ತಿದೆ ದುಬಾರಿ ಸಂಭಾವನೆ

Sitara Ghattamaneni: 'ಪ್ರಿನ್ಸ್' ಮಹೇಶ್ ಬಾಬು ಪುತ್ರಿ ಸಿತಾರಾ ಘಟ್ಟಮನೇನಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾಳೆ. ಸದ್ಯ ಎಲ್ಲರ ಪ್ರಶ್ನೆ ಸಿತಾರಾ ಚಿತ್ರರಂಗಕ್ಕೆ ಕಾಲಿಡುತ್ತಾಳಾ ಎಂಬುದು. ಆದರೆ ಈವರೆಗೂ ಮಹೇಶ್ ಮತ್ತು ನಮ್ರತಾ ಶಿರೋಡ್ಕರ್ ದಂಪತಿ ಆ ಬಗ್ಗೆ ಏನೊಂದು ಅಭಿಪ್ರಾಯ ತಿಳಿಸಿಲ್ಲ. ಆದರೆ ಇದೀಗ ಸಿತಾರಾ ನೇರವಾಗಿ ಜಾಹೀರಾತು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಅಭರಣಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿ ಸಿತಾರಾ ನಟಿಸಿದ್ದಾಳೆ ಮತ್ತು ಅದಕ್ಕಾಗಿ ದುಬಾರಿ ಸಂಭಾವನೆಯನ್ನು ಪಡೆದುಕೊಂಡಿದ್ದಾಳೆ.

Authored byಅವಿನಾಶ್ ಜಿ. ರಾಮ್ | Vijaya Karnataka Web 26 May 2023, 7:20 pm

ಹೈಲೈಟ್ಸ್‌:

  • ಮಹೇಶ್ ಬಾಬು ಪುತ್ರಿ ಸಿತಾರಾ ಘಟ್ಟಮನೇನಿಗೆ ಸಾಕಷ್ಟು ಮಂದಿ ಫ್ಯಾನ್ಸ್ ಇದ್ದಾರೆ
  • ಇದೀಗ ಸಿತಾರಾ ಘಟ್ಟಮನೇನಿ ನೇರವಾಗಿ ಜಾಹೀರಾತು ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದ್ದಾಳೆ
  • ಆಭರಣಗೆ ಸಂಬಂಧಿಸಿದ ಜಾಹೀರಾತಿಗಾಗಿ ಕ್ಯಾಮೆರಾ ಎದುರಿಸಿದ ಸಿತಾರಾ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web MAHESH BABU
ಜಾಹೀರಾತು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಟ ಮಹೇಶ್ ಬಾಬು ಪುತ್ರಿ; ಸಿತಾರಾಗೆ ಸಿಗ್ತಿದೆ ದುಬಾರಿ ಸಂಭಾವನೆ
ತೆಲುಗು 'ಸೂಪರ್ ಸ್ಟಾರ್' ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಆಕೆಗಿನ್ನೂ 11 ವರ್ಷ ವಯಸ್ಸು. ಆದರೆ ಈಗಲೇ ಸಿತಾರಾಗೆ ಭಾರಿ ಜನಪ್ರಿಯತೆ ಇದೆ. ಕಳೆದ ವರ್ಷದ ರಿಲೀಸ್ ಆದ ಮಹೇಶ್ ಬಾಬು ಅವರ 'ಸರ್ಕಾರು ವಾರಿ ಪಾಟ' ಸಿನಿಮಾದ ಒಂದು ಸಾಂಗ್‌ನ ಲಿರಿಕಲ್ ವಿಡಿಯೋದಲ್ಲಿ ಸಿತಾರಾ ಹೆಜ್ಜೆ ಹಾಕಿದ್ದಳು. ಆಗಲೇ ಬಾಲ ನಟಿಯಾಗಿಯೇ ಚಿತ್ರರಂಗಕ್ಕೆ ಸಿತಾರಾ ಕಾಲಿಡುತ್ತಾಳಾ ಎಂಬ ಪ್ರಶ್ನೆ ಮಹೇಶ್ ಬಾಬು ಫ್ಯಾನ್ಸ್‌ಗೆ ಮೂಡಿತ್ತು. ಆದರೆ ಇದೀಗ ಸಿತಾರಾ ಕುರಿತಂತೆ ಒಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಅದೇನೆಂದರೆ, ಜಾಹೀರಾತಿನಲ್ಲಿ ಸಿತಾರಾ ಕಾಣಿಸಿಕೊಂಡಿದ್ದಾಳೆ. ಅದರ ಶೂಟಿಂಗ್ ಬಿರುಸಿನಿಂದ ಸಾಗಿದೆ.

ಆಭರಣದ ಜಾಹೀರಾತಿನಲ್ಲಿ ಸಿತಾರಾ

ಆಭರಣದ ಕಂಪನಿಯೊಂದರ ಜಾಹೀರಾತಿನಲ್ಲಿ ನಟಿಸುವುದಕ್ಕೆ ಸಿತಾರಾ ಒಪ್ಪಿಕೊಂಡಿದ್ದಾಳೆ. ಇದೊಂದು ದೊಡ್ಡ ಜಾಹೀರಾತು ಡೀಲ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಇದು ಆಭರಣದ ಕಂಪನಿ ಕುರಿತ ಟಿವಿ ಕಮರ್ಷಿಯಲ್ ಜಾಹೀರಾತು ಆಗಿದ್ದು, ಮೂರು ದಿನಗಳ ಚಿತ್ರೀಕರಣ ನಡೆಯಲಿದೆ. ಸದ್ಯ ಸಿತಾರಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಳೆ. ಚಿತ್ರರಂಗದ ಅತ್ಯುತ್ತಮ ತಂತ್ರಜ್ಞರು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈ ಜಾಹೀರಾತು ಯಾವಾಗ ರಿಲೀಸ್ ಆಗಲಿದೆ? ಯಾವ ರೀತಿಯ ಕಾನ್ಸೆಪ್ಟ್‌ನಲ್ಲಿ ಈ ಜಾಹೀರಾತು ಶೂಟಿಂಗ್ ಆಗುತ್ತಿದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

ಮಹೇಶ್ ಬಾಬು ನಂತರ ತೆಲುಗಿನ ಮತ್ತೊಬ್ಬ 'ಸ್ಟಾರ್' ನಟನಿಗೆ ರಾಜಮೌಳಿ ಡೈರೆಕ್ಷನ್‌!

ದುಬಾರಿ ಸಂಭಾವನೆ ಪಡೆದ ಸಿತಾರಾ

ಇನ್ನು, ಈ ಜಾಹೀರಾತಿನಲ್ಲಿ ನಟಿಸುವುದಕ್ಕಾಗಿ ಸಿತಾರಾ ಘಟ್ಟಮನೇನಿಗೆ ದುಬಾರಿ ಸಂಭಾವನೆ ನೀಡಲಾಗಿದೆಯಂತೆ. ಈವರೆಗೂ ಯಾವ ಬಾಲನಟಿಯೂ ಈ ಪ್ರಮಾಣದ ಸಂಭಾವನೆಯನ್ನು ಕೇವಲ ಜಾಹೀರಾತಿಗಾಗಿ ಪಡೆದುಕೊಂಡಿಲ್ಲ, ಇಂಥದ್ದೊಂದು ದೊಡ್ಡ ಡೀಲ್‌ಗೆ ಸಹಿ ಹಾಕಿದ ಮೊದಲ ಸ್ಟಾರ್ ಕಿಡ್ ಸಿತಾರಾ ಎಂಬುದು ಮೂಲಗಳ ಮಾಹಿತಿ. ಇದುವರೆಗೂ ಸ್ಟಾರ್ ಕಿಡ್ ಎನಿಸಿಕೊಂಡಿದ್ದ ಸಿತಾರಾ, ಈಗ ಸ್ಟಾರ್ ಬಾಲನಟಿಯಾಗುತ್ತಾರಾ? ಈ ಜಾಹೀರಾತಿಗಾಗಿ ಕ್ಯಾಮೆರಾ ಎದುರಿಸಿರುವ ಸಿತಾರಾ, ಮುಂದಿನ ದಿನಗಳಲ್ಲಿ ಸಿನಿಮಾಗಾಗಿಯೂ ಕ್ಯಾಮೆರಾ ಮುಂದೆ ಬಂದು ನಿಲ್ಲುತ್ತಾರಾ ಎಂಬುದು ಘಟ್ಟಮನೇನಿ ಫ್ಯಾನ್ಸ್ ಕುತೂಹಲವಾಗಿದೆ.

ಮಹೇಶ್‌ ಬಾಬು ಜೊತೆ ನಟಿಸಲು 1 ಕೋಟಿ ರೂ. ಸಂಭಾವನೆ ಕೇಳಿದ್ರಾ 'ಕಿಸ್' ಬೆಡಗಿ ಶ್ರೀಲೀಲಾ?

ಸಿನಿಮಾ ಕುಟುಂಬ

ಘಟ್ಟಮನೇನಿ ಕುಟುಂಬದಲ್ಲಿ ಮೊದಲು 'ಸೂಪರ್ ಸ್ಟಾರ್' ಕೃಷ್ಣ ಚಿತ್ರರಂಗಕ್ಕೆ ಬಂದರು. ಅವರು ಫೇಮಸ್ ಆದ ಬಳಿಕ ಅವರ ಸಹೋದರರು ಸಿನಿಮಾ ನಿರ್ಮಾಣದಲ್ಲಿ ಹೆಸರು ಮಾಡಿದರು. ನಂತರ ಕೃಷ್ಣ ಅವರ ಮಕ್ಕಳಾದ ರಮೇಶ್ ಬಾಬು, ಮಹೇಶ್ ಬಾಬು, ಮಂಜುಳಾ ಘಟ್ಟಮನೇನಿ ಕೂಡ ಎಂಟ್ರಿ ಕೊಟ್ಟರು. ಇನ್ನು, ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಕೂಡ ನಟಿಯಾಗಿದ್ದವರೇ. ಹೀಗೆ ಇಡೀ ಕುಟುಂಬವೇ ಸಿನಿಮಾ ನಂಟನ್ನು ಹೊಂದಿದೆ. ಈಗ ಎಲ್ಲರ ಗಮನ ಸಿತಾರಾ ಮೇಲಿದೆ.

Namrata Shirodkar: 'ನಾನು ನಟನೆ ಬಿಡಲು ಮಹೇಶ್ ಬಾಬು ಕಾರಣ'; ನಟಿ ನಮ್ರತಾ ಶಿರೋಡ್ಕರ್

ಸೋಶಿಯಲ್ ಮೀಡಿಯಾದಲ್ಲಿ ಸಿತಾರಾ ಸಕ್ರಿಯ

ಸಿತಾರಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಿತಾರಾಗೆ 1.2 ಮಿಲಿಯನ್ (12 ಲಕ್ಷ) ಫಾಲೋವರ್ಸ್ ಇದ್ದಾರೆ. ಹಾಗೆಯೇ ತನ್ನ ಸ್ನೇಹಿತೆ ಆದ್ಯಾ ಜತೆಗೆ ಸೇರಿಕೊಂಡು ಒಂದು ಯೂಟ್ಯೂಬ್‌ ಚಾನೆಲ್ ಅನ್ನು ಸಿತಾರಾ ಆರಂಭಿಸಿದ್ದಾಳೆ. ಅದಕ್ಕೆ 2.78 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌