ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ ಎಸ್ ರಾಜಶೇಖರ್ ರೆಡ್ಡಿ ಅವರ ರಾಜಕೀಯ ಜೀವನವನ್ನು ಆಧರಿಸಿದ 'ಯಾತ್ರಾ' ಸಿನಿಮಾವನ್ನು ಮಹಿ ವಿ ರಾಘವ್ ನಿರ್ದೇಶಿಸಿದ್ದರು. 2019ರಲ್ಲಿ ತೆರೆಕಂಡ ಈ ಸಿನಿಮಾ ಎಲ್ಲರ ಗಮನಸೆಳೆದಿತ್ತು. ವೈ ಎಸ್ ರಾಜಶೇಖರ್ ರೆಡ್ಡಿ ಅವರ ಪಾತ್ರದಲ್ಲಿ ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮಮ್ಮುಟ್ಟಿ ನಟಿಸಿದ್ದರು. 2019ರ ವಿಧಾನಸಭಾ ಚುನಾವಣೆಗೂ ಮುನ್ನ ತೆರೆಕಂಡಿದ್ದ 'ಯಾತ್ರಾ' ಸಿನಿಮಾ ರಾಜಕೀಯವಾಗಿ ಇಂಪ್ಯಾಕ್ಟ್ ಮಾಡಿತ್ತು. 'ಯಾತ್ರಾ 2' ಸಿನಿಮಾದಲ್ಲಿ ಜಗನ್ ಕಥೆ
ಇದೀಗ ಮತ್ತೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಆ ಹಿನ್ನೆಲೆಯಲ್ಲಿ ನಿರ್ದೇಶಕ ಮಹಿ ವಿ ರಾಘವ್ ‘ಯಾತ್ರಾ 2’ ಸಿನಿಮಾ ಶುರು ಮಾಡಿದ್ದಾರೆ. ವೈಎಸ್ಆರ್ ನಿಧನದ ನಂತರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ರಾಜಕೀಯ ಪಯಣ ಮತ್ತು ಅಧಿಕಾರಕ್ಕೆ ಬರಲು ಕಾರಣವಾದ ಪಾದಯಾತ್ರೆಯ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ತಯಾರಿಸಲಾಗುತ್ತಿದೆ. ಜಗನ್ ಪಾತ್ರದಲ್ಲಿ ತಮಿಳು ನಟ ಜೀವ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 'ಯಾತ್ರಾ' ಸಿನಿಮಾದ ಮುಂದುವರಿದ ಭಾಗದಂತಿರುವ 'ಯಾತ್ರಾ 2' ಸಿನಿಮಾದಲ್ಲಿ ವೈಎಸ್ಆರ್ಗೆ ಸಂಬಂಧಿಸಿದ ದೃಶ್ಯಗಳೂ ಇವೆ. ಹಾಗಾಗಿ, 'ಯಾತ್ರಾ'ದಲ್ಲಿ ವೈಎಸ್ಆರ್ ಪಾತ್ರ ಮಾಡಿದ್ದ ಮಮ್ಮುಟ್ಟಿ ಇಲ್ಲಿಯೂ ನಟಿಸಬೇಕಿದೆ. ಆದರೆ ಅದಕ್ಕಾಗಿ ಅವರು ಕೇಳಿರುವ ಸಂಭಾವನೆ ಮಾತ್ರ ಎಲ್ಲರಿಗೂ ಶಾಕ್ ನೀಡಿದೆ.
ಸಂಭಾವನೆ ಮೂಲಕ ಶಾಕ್ ಕೊಟ್ಟ ಮಮ್ಮುಟ್ಟಿ
'ಯಾತ್ರಾ 2' ಸಿನಿಮಾವು ಜಗನ್ ಮೋಹನ್ ರೆಡ್ಡಿ ಅವರ ಸುತ್ತವೇ ಸಾಗಲಿದೆ. ಆದರೆ ಇಲ್ಲಿ ವೈಎಸ್ಆರ್ ಪಾತ್ರಕ್ಕೆ ಎರಡು ದೃಶ್ಯಗಳು ಇರಲಿದ್ದು, ಆ ಎರಡು ದೃಶ್ಯಗಳಲ್ಲಿ ನಟಿಸುವಂತೆ ಮಮ್ಮುಟ್ಟಿ ಅವರಿಗೆ ಆಫರ್ ನೀಡಿದಾಗ, ಅವರು 10 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ಸಂಭಾವನೆಯಯಾಗಿ ಕೇಳಿದ್ದಾರಂತೆ. ಇಷ್ಟೊಂದು ದೊಡ್ಡ ಮೊತ್ತವನ್ನು ಕೇಳಿರುವುದಕ್ಕೆ ನಿರ್ಮಾಪಕರು ಶಾಕ್ ಆಗಿದ್ದು, ಸಂಭಾವನೆಯನ್ನು ಕಡಿಮೆ ಮಾಡುವಂತೆ ಮಮ್ಮುಟ್ಟಿ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆಯಂತೆ.
ಮುಂಬರುವ ವಿಧಾನಸಭಾ ಚುನಾವಣೆ ಬರುವುದಕ್ಕೂ ಮುನ್ನ ಈ ಸಿನಿಮಾವನ್ನು ನಿರ್ಮಿಸಿ, ರಿಲೀಸ್ ಮಾಡುವ ಉದ್ದೇಶ ನಿರ್ಮಾಪಕರಿಗೆ ಇದೆ. ಅಂದಹಾಗೆ, 2019ರ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ತೆರೆಗೆ ಬಂದಿದ್ದ 'ಯಾತ್ರಾ' ಚಿತ್ರಕ್ಕೆ ಭಾರಿ ರೆಸ್ಪಾನ್ಸ್ ಸಿಕ್ಕಿತ್ತು. ಸುಮಾರು 12 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿದ್ದ 'ಯಾತ್ರಾ' ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಸುಮಾರು 40 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿತ್ತು.
'ಯಾತ್ರಾ' ಬಯೋಪಿಕ್ನಲ್ಲಿ ಮಮ್ಮುಟ್ಟಿ ಜತೆಗೆ ಸುಹಾಸಿನಿ ಮಣಿರತ್ನಂ, ಜಗಪತಿ ಬಾಬು, ಅನಸೂಯಾ ಭಾರದ್ವಾಜ್, ಪೋಸಾನಿ ಕೃಷ್ಣ ಮುರಳಿ, ವಿನೋದ್ ಕುಮಾರ್, ರಾವ್ ರಮೇಶ್, ನಾಸರ್, ಪೃಥ್ವಿರಾಜ್, ಕಲ್ಯಾಣಿ, ರವಿ ಕಾಳೆ ಸೇರಿದಂತೆ ಅನೇಕರು ನಟಿಸಿದ್ದರು. ಕೃಷ್ಣಕುಮಾರ್ ಎಂಬುವವರು ಸಂಗೀತ ನೀಡಿದ್ದರೆ, ಸತ್ಯನ್ ಸೂರ್ಯನ್ ಅವರು ಛಾಯಾಗ್ರಹಣ ಮಾಡಿದ್ದರು. 'ಯಾತ್ರಾ 2' ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ? ತಂತ್ರಜ್ಞರು ಯಾರು ಎಂಬ ಸಂಪೂರ್ಣ ವಿವರಗಳನ್ನು ನಿರ್ಮಾಪಕರು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.
'ಯಾತ್ರಾ 2' ಸಿನಿಮಾದಲ್ಲಿ ಜಗನ್ ಕಥೆ
ಇದೀಗ ಮತ್ತೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಆ ಹಿನ್ನೆಲೆಯಲ್ಲಿ ನಿರ್ದೇಶಕ ಮಹಿ ವಿ ರಾಘವ್ ‘ಯಾತ್ರಾ 2’ ಸಿನಿಮಾ ಶುರು ಮಾಡಿದ್ದಾರೆ. ವೈಎಸ್ಆರ್ ನಿಧನದ ನಂತರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ರಾಜಕೀಯ ಪಯಣ ಮತ್ತು ಅಧಿಕಾರಕ್ಕೆ ಬರಲು ಕಾರಣವಾದ ಪಾದಯಾತ್ರೆಯ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ತಯಾರಿಸಲಾಗುತ್ತಿದೆ. ಜಗನ್ ಪಾತ್ರದಲ್ಲಿ ತಮಿಳು ನಟ ಜೀವ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 'ಯಾತ್ರಾ' ಸಿನಿಮಾದ ಮುಂದುವರಿದ ಭಾಗದಂತಿರುವ 'ಯಾತ್ರಾ 2' ಸಿನಿಮಾದಲ್ಲಿ ವೈಎಸ್ಆರ್ಗೆ ಸಂಬಂಧಿಸಿದ ದೃಶ್ಯಗಳೂ ಇವೆ. ಹಾಗಾಗಿ, 'ಯಾತ್ರಾ'ದಲ್ಲಿ ವೈಎಸ್ಆರ್ ಪಾತ್ರ ಮಾಡಿದ್ದ ಮಮ್ಮುಟ್ಟಿ ಇಲ್ಲಿಯೂ ನಟಿಸಬೇಕಿದೆ. ಆದರೆ ಅದಕ್ಕಾಗಿ ಅವರು ಕೇಳಿರುವ ಸಂಭಾವನೆ ಮಾತ್ರ ಎಲ್ಲರಿಗೂ ಶಾಕ್ ನೀಡಿದೆ.ಸಂಭಾವನೆ ಮೂಲಕ ಶಾಕ್ ಕೊಟ್ಟ ಮಮ್ಮುಟ್ಟಿ
'ಯಾತ್ರಾ 2' ಸಿನಿಮಾವು ಜಗನ್ ಮೋಹನ್ ರೆಡ್ಡಿ ಅವರ ಸುತ್ತವೇ ಸಾಗಲಿದೆ. ಆದರೆ ಇಲ್ಲಿ ವೈಎಸ್ಆರ್ ಪಾತ್ರಕ್ಕೆ ಎರಡು ದೃಶ್ಯಗಳು ಇರಲಿದ್ದು, ಆ ಎರಡು ದೃಶ್ಯಗಳಲ್ಲಿ ನಟಿಸುವಂತೆ ಮಮ್ಮುಟ್ಟಿ ಅವರಿಗೆ ಆಫರ್ ನೀಡಿದಾಗ, ಅವರು 10 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ಸಂಭಾವನೆಯಯಾಗಿ ಕೇಳಿದ್ದಾರಂತೆ. ಇಷ್ಟೊಂದು ದೊಡ್ಡ ಮೊತ್ತವನ್ನು ಕೇಳಿರುವುದಕ್ಕೆ ನಿರ್ಮಾಪಕರು ಶಾಕ್ ಆಗಿದ್ದು, ಸಂಭಾವನೆಯನ್ನು ಕಡಿಮೆ ಮಾಡುವಂತೆ ಮಮ್ಮುಟ್ಟಿ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆಯಂತೆ.ಮುಂಬರುವ ವಿಧಾನಸಭಾ ಚುನಾವಣೆ ಬರುವುದಕ್ಕೂ ಮುನ್ನ ಈ ಸಿನಿಮಾವನ್ನು ನಿರ್ಮಿಸಿ, ರಿಲೀಸ್ ಮಾಡುವ ಉದ್ದೇಶ ನಿರ್ಮಾಪಕರಿಗೆ ಇದೆ. ಅಂದಹಾಗೆ, 2019ರ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ತೆರೆಗೆ ಬಂದಿದ್ದ 'ಯಾತ್ರಾ' ಚಿತ್ರಕ್ಕೆ ಭಾರಿ ರೆಸ್ಪಾನ್ಸ್ ಸಿಕ್ಕಿತ್ತು. ಸುಮಾರು 12 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿದ್ದ 'ಯಾತ್ರಾ' ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಸುಮಾರು 40 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿತ್ತು.
'ಯಾತ್ರಾ' ಬಯೋಪಿಕ್ನಲ್ಲಿ ಮಮ್ಮುಟ್ಟಿ ಜತೆಗೆ ಸುಹಾಸಿನಿ ಮಣಿರತ್ನಂ, ಜಗಪತಿ ಬಾಬು, ಅನಸೂಯಾ ಭಾರದ್ವಾಜ್, ಪೋಸಾನಿ ಕೃಷ್ಣ ಮುರಳಿ, ವಿನೋದ್ ಕುಮಾರ್, ರಾವ್ ರಮೇಶ್, ನಾಸರ್, ಪೃಥ್ವಿರಾಜ್, ಕಲ್ಯಾಣಿ, ರವಿ ಕಾಳೆ ಸೇರಿದಂತೆ ಅನೇಕರು ನಟಿಸಿದ್ದರು. ಕೃಷ್ಣಕುಮಾರ್ ಎಂಬುವವರು ಸಂಗೀತ ನೀಡಿದ್ದರೆ, ಸತ್ಯನ್ ಸೂರ್ಯನ್ ಅವರು ಛಾಯಾಗ್ರಹಣ ಮಾಡಿದ್ದರು. 'ಯಾತ್ರಾ 2' ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ? ತಂತ್ರಜ್ಞರು ಯಾರು ಎಂಬ ಸಂಪೂರ್ಣ ವಿವರಗಳನ್ನು ನಿರ್ಮಾಪಕರು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.