ಆ್ಯಪ್ನಗರ

ಎರಡೇ ಎರಡು ಸೀನ್‌ನಲ್ಲಿ ನಟಿಸಲು ₹10 ಕೋಟಿ ಸಂಭಾವನೆ ಕೇಳಿದ್ರಾ ಮಮ್ಮುಟ್ಟಿ?

Mammootty Remuneration: ಮಲಯಾಳಂ 'ಸೂಪರ್ ಸ್ಟಾರ್' ಮಮ್ಮುಟ್ಟಿ ಅವರಿಗೆ ಈಗ 71 ವರ್ಷ. ಬಣ್ಣದ ಲೋಕಕ್ಕೆ ಕಾಲಿಟ್ಟು 5 ದಶಕಗಳೇ ಕಳೆದಿವೆ. ಇಂದಿಗೂ ಕೂಡ ಮಮ್ಮುಟ್ಟಿ ಅವರ ಚಾರ್ಮ್‌ ಕಮ್ಮಿ ಆಗಿಲ್ಲ. ಮಲಯಾಳಂ ಮಾತ್ರವಲ್ಲ, ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲೂ ಅವರಿಗೆ ಬೇಡಿಕೆ ಇದೆ. ಸದ್ಯ ಹೊಸ ಚಿತ್ರವೊಂದರಲ್ಲಿ ಅವರು ಎರಡೇ ಎರಡು ಸೀನ್‌ಗಳಲ್ಲಿ ನಟಿಸಬೇಕಾಗಿದೆ. ಅದಕ್ಕಾಗಿ ಬರೋಬ್ಬರಿ 10 ಕೋಟಿ ರೂಪಾಯಿಗೂ ಅಧಿಕ ಸಂಭಾವನೆಯನ್ನು ಮಮ್ಮುಟ್ಟಿ ಕೇಳಿದ್ದಾರೆ. ಅದು ಯಾವ ಸಿನಿಮಾ? ಆ ಪಾತ್ರ ಯಾವುದು? ಇಲ್ಲಿದೆ ಮಾಹಿತಿ.

Authored byಅವಿನಾಶ್ ಜಿ. ರಾಮ್ | Vijaya Karnataka Web 24 Jul 2023, 7:52 pm

ಹೈಲೈಟ್ಸ್‌:

  • ಮಲಯಾಳಂ 'ಸೂಪರ್ ಸ್ಟಾರ್' ಮಮ್ಮುಟ್ಟಿ ಅವರಿಗೆ ಭಾರಿ ಬೇಡಿಕೆ
  • ಚಿತ್ರರಂಗಕ್ಕೆ ಕಾಲಿಟ್ಟು 5 ದಶಕಗಳೇ ಕಳೆದರೂ ಕಮ್ಮಿಯಾಗದ ಮಮ್ಮುಟ್ಟಿ ಚಾರ್ಮ್
  • ಹೊಸ ಚಿತ್ರವೊಂದರಲ್ಲಿ 2 ಸೀನ್‌ನಲ್ಲಿ ನಟಿಸಲು 10 ಕೋಟಿ ಸಂಭಾವನೆ ರೂ. ಕೇಳಿದ್ರಾ ಮಮ್ಮುಟ್ಟಿ?
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web mammootty (1)
ಎರಡೇ ಎರಡು ಸೀನ್‌ನಲ್ಲಿ ನಟಿಸಲು ₹10 ಕೋಟಿ ಸಂಭಾವನೆ ಕೇಳಿದ್ರಾ ಮಮ್ಮುಟ್ಟಿ?
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ ಎಸ್‌ ರಾಜಶೇಖರ್ ರೆಡ್ಡಿ ಅವರ ರಾಜಕೀಯ ಜೀವನವನ್ನು ಆಧರಿಸಿದ 'ಯಾತ್ರಾ' ಸಿನಿಮಾವನ್ನು ಮಹಿ ವಿ ರಾಘವ್ ನಿರ್ದೇಶಿಸಿದ್ದರು. 2019ರಲ್ಲಿ ತೆರೆಕಂಡ ಈ ಸಿನಿಮಾ ಎಲ್ಲರ ಗಮನಸೆಳೆದಿತ್ತು. ವೈ ಎಸ್‌ ರಾಜಶೇಖರ್ ರೆಡ್ಡಿ ಅವರ ಪಾತ್ರದಲ್ಲಿ ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮಮ್ಮುಟ್ಟಿ ನಟಿಸಿದ್ದರು. 2019ರ ವಿಧಾನಸಭಾ ಚುನಾವಣೆಗೂ ಮುನ್ನ ತೆರೆಕಂಡಿದ್ದ 'ಯಾತ್ರಾ' ಸಿನಿಮಾ ರಾಜಕೀಯವಾಗಿ ಇಂಪ್ಯಾಕ್ಟ್ ಮಾಡಿತ್ತು.

'ಯಾತ್ರಾ 2' ಸಿನಿಮಾದಲ್ಲಿ ಜಗನ್‌ ಕಥೆ

ಇದೀಗ ಮತ್ತೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಆ ಹಿನ್ನೆಲೆಯಲ್ಲಿ ನಿರ್ದೇಶಕ ಮಹಿ ವಿ ರಾಘವ್ ‘ಯಾತ್ರಾ 2’ ಸಿನಿಮಾ ಶುರು ಮಾಡಿದ್ದಾರೆ. ವೈಎಸ್‌ಆರ್ ನಿಧನದ ನಂತರ ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿ ಅವರ ರಾಜಕೀಯ ಪಯಣ ಮತ್ತು ಅಧಿಕಾರಕ್ಕೆ ಬರಲು ಕಾರಣವಾದ ಪಾದಯಾತ್ರೆಯ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ತಯಾರಿಸಲಾಗುತ್ತಿದೆ. ಜಗನ್ ಪಾತ್ರದಲ್ಲಿ ತಮಿಳು ನಟ ಜೀವ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 'ಯಾತ್ರಾ' ಸಿನಿಮಾದ ಮುಂದುವರಿದ ಭಾಗದಂತಿರುವ 'ಯಾತ್ರಾ 2' ಸಿನಿಮಾದಲ್ಲಿ ವೈಎಸ್‌ಆರ್‌ಗೆ ಸಂಬಂಧಿಸಿದ ದೃಶ್ಯಗಳೂ ಇವೆ. ಹಾಗಾಗಿ, 'ಯಾತ್ರಾ'ದಲ್ಲಿ ವೈಎಸ್‌ಆರ್‌ ಪಾತ್ರ ಮಾಡಿದ್ದ ಮಮ್ಮುಟ್ಟಿ ಇಲ್ಲಿಯೂ ನಟಿಸಬೇಕಿದೆ. ಆದರೆ ಅದಕ್ಕಾಗಿ ಅವರು ಕೇಳಿರುವ ಸಂಭಾವನೆ ಮಾತ್ರ ಎಲ್ಲರಿಗೂ ಶಾಕ್ ನೀಡಿದೆ.

ಮಮ್ಮುಟ್ಟಿ ಸಿನಿಮಾದಲ್ಲಿ ಕಿಚ್ಚ

ಸಂಭಾವನೆ ಮೂಲಕ ಶಾಕ್ ಕೊಟ್ಟ ಮಮ್ಮುಟ್ಟಿ

'ಯಾತ್ರಾ 2' ಸಿನಿಮಾವು ಜಗನ್ ಮೋಹನ್ ರೆಡ್ಡಿ ಅವರ ಸುತ್ತವೇ ಸಾಗಲಿದೆ. ಆದರೆ ಇಲ್ಲಿ ವೈಎಸ್ಆರ್ ಪಾತ್ರಕ್ಕೆ ಎರಡು ದೃಶ್ಯಗಳು ಇರಲಿದ್ದು, ಆ ಎರಡು ದೃಶ್ಯಗಳಲ್ಲಿ ನಟಿಸುವಂತೆ ಮಮ್ಮುಟ್ಟಿ ಅವರಿಗೆ ಆಫರ್ ನೀಡಿದಾಗ, ಅವರು 10 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ಸಂಭಾವನೆಯಯಾಗಿ ಕೇಳಿದ್ದಾರಂತೆ. ಇಷ್ಟೊಂದು ದೊಡ್ಡ ಮೊತ್ತವನ್ನು ಕೇಳಿರುವುದಕ್ಕೆ ನಿರ್ಮಾಪಕರು ಶಾಕ್ ಆಗಿದ್ದು, ಸಂಭಾವನೆಯನ್ನು ಕಡಿಮೆ ಮಾಡುವಂತೆ ಮಮ್ಮುಟ್ಟಿ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆಯಂತೆ.

Andhra Pradesh Capital: ಸೆಪ್ಟೆಂಬರ್‌ನಿಂದ ವಿಶಾಖಪಟ್ಟಣದಿಂದ ಆಡಳಿತ: ಆಂಧ್ರ ಸಿಎಂ ಜಗನ್ ರೆಡ್ಡಿ ಘೋಷಣೆ
ಮುಂಬರುವ ವಿಧಾನಸಭಾ ಚುನಾವಣೆ ಬರುವುದಕ್ಕೂ ಮುನ್ನ ಈ ಸಿನಿಮಾವನ್ನು ನಿರ್ಮಿಸಿ, ರಿಲೀಸ್ ಮಾಡುವ ಉದ್ದೇಶ ನಿರ್ಮಾಪಕರಿಗೆ ಇದೆ. ಅಂದಹಾಗೆ, 2019ರ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ತೆರೆಗೆ ಬಂದಿದ್ದ 'ಯಾತ್ರಾ' ಚಿತ್ರಕ್ಕೆ ಭಾರಿ ರೆಸ್ಪಾನ್ಸ್ ಸಿಕ್ಕಿತ್ತು. ಸುಮಾರು 12 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿದ್ದ 'ಯಾತ್ರಾ' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 40 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿತ್ತು.

ಅಂದು ತಂದೆ, ಇಂದು ಪುತ್ರ; ಸಿಎಂ ಜಗನ್ ಮೋಹನ್ ರೆಡ್ಡಿ ಬಯೋಪಿಕ್‌ಗೆ ಶುರುವಾಯ್ತು ತಯಾರಿ
'ಯಾತ್ರಾ' ಬಯೋಪಿಕ್‌ನಲ್ಲಿ ಮಮ್ಮುಟ್ಟಿ ಜತೆಗೆ ಸುಹಾಸಿನಿ ಮಣಿರತ್ನಂ, ಜಗಪತಿ ಬಾಬು, ಅನಸೂಯಾ ಭಾರದ್ವಾಜ್‌, ಪೋಸಾನಿ ಕೃಷ್ಣ ಮುರಳಿ, ವಿನೋದ್ ಕುಮಾರ್, ರಾವ್ ರಮೇಶ್, ನಾಸರ್, ಪೃಥ್ವಿರಾಜ್, ಕಲ್ಯಾಣಿ, ರವಿ ಕಾಳೆ ಸೇರಿದಂತೆ ಅನೇಕರು ನಟಿಸಿದ್ದರು. ಕೃಷ್ಣಕುಮಾರ್ ಎಂಬುವವರು ಸಂಗೀತ ನೀಡಿದ್ದರೆ, ಸತ್ಯನ್ ಸೂರ್ಯನ್ ಅವರು ಛಾಯಾಗ್ರಹಣ ಮಾಡಿದ್ದರು. 'ಯಾತ್ರಾ 2' ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ? ತಂತ್ರಜ್ಞರು ಯಾರು ಎಂಬ ಸಂಪೂರ್ಣ ವಿವರಗಳನ್ನು ನಿರ್ಮಾಪಕರು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌