ಆ್ಯಪ್ನಗರ

ಕಾಡಿನ ಮಧ್ಯೆಕಾಣಿಸಿಕೊಂಡ ನಿಷಾ

ಕಿರಣ್‌ ಹೆಗಡೆ ನಿರ್ದೇಶನ ಮನರೂಪ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದೆ. ದಟ್ಟ ಕಾಡಿನಲ್ಲಿ ನಡೆಯುವ ಭಯಾನಕ ಘಟನೆಯ ಸುತ್ತ ಚಿತ್ರ ಇದೆ ಎನ್ನುವುದನ್ನು ಇದು ಹೇಳುತ್ತಿದೆ. ಚಿತ್ರದಲ್ಲಿ ನಿಷಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Vijaya Karnataka 28 Nov 2018, 5:00 am
ಕಿರಣ್‌ ಹೆಗಡೆ ನಿರ್ದೇಶನ ಮನರೂಪ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದೆ. ದಟ್ಟ ಕಾಡಿನಲ್ಲಿ ನಡೆಯುವ ಭಯಾನಕ ಘಟನೆಯ ಸುತ್ತ ಚಿತ್ರ ಇದೆ ಎನ್ನುವುದನ್ನು ಇದು ಹೇಳುತ್ತಿದೆ. ಚಿತ್ರದಲ್ಲಿ ನಿಷಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Vijaya Karnataka Web Nisha BR


ಬಹುತೇಕ ಹೊಸಬರೇ ನಟಿಸಿರುವ ಚಿತ್ರ ಮನರೂಪ. ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರ ಇದು. ಚಿತ್ರದ ಪೋಸ್ಟರ್‌ನಲ್ಲಿ ದಟ್ಟವಾದ ಕಾಡಿನ ಮಧ್ಯೆ ರಸ್ತೆಯಲ್ಲಿ ಕತ್ತಲಲ್ಲಿ ಕಾರೊಂದು ಹೋಗುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವ ಪೋಸ್ಟರ್‌ ಇದಾಗಿದೆ. ಅಲ್ಲದೆ, ಈ ಪೋಸ್ಟರ್‌ನಲ್ಲಿ 'ಎಪಿಸೋಡ್‌ ನೆವರ್‌ ಎಂಡ್ಸ್‌' ಎಂಬ ಟ್ಯಾಗ್‌ಲೈನ್‌ ಇರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ. ಸೂಪರ್‌ ಹಿಟ್‌ ಆದ 6-5=2 ಚಿತ್ರವನ್ನು ನೆನಪಿಸುವಂತಿದೆ.

ಯುವ ಜನಾಂಗದ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತಿರುವ ಇಂದಿನ ದಿನಗಳಲ್ಲಿ ಇದರ ಸುತ್ತ ಹೆಣೆದ ಮನೋವೈಜ್ಞಾನಿಕ ಚಿತ್ರ ಮನರೂಪ. ಯುವ ಪೀಳಿಗೆಯ ಭ್ರಾಮಕ ಜಗತ್ತಿನ ಬಗ್ಗೆ ಚಿತ್ರದಲ್ಲಿ ಕುತೂಹಲಕಾರಿಯಾಗಿ ತೋರಿಸಲಾಗಿದೆ ಎಂದಿದ್ದಾರೆ ನಿರ್ದೇಶಕ ಕಿರಣ್‌. ಕಿರುತೆರೆ ಕಲಾವಿದರಾದ ಅನುಷಾ ರಾವ್‌, ದಿಲೀಪ್‌ ಕುಮಾರ್‌ ಮತ್ತಿತರರು ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌