ಆ್ಯಪ್ನಗರ

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಆಸ್ತಿ ಎಷ್ಟಿದೆ ಗೊತ್ತೇ?

ಬರಲಿರುವ ಲೋಕಸಭಾ ಚುನಾವಣೆಯಲ್ಲಿ, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ, ದಿವಂಗತ ಶಾಸಕ ಅಂಬರೀಷ್ ಪತ್ನಿ ಸುಮಲತಾ ಅವರು ನಿನ್ನೆ ನಾಮಪತ್ರ ಸಲ್ಲಿಸಿದ ನಂತರ, ಚುನಾವಣಾ ಆಯೋಗದ ಸೂಚನೆಯಂತೆ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

Vijaya Karnataka Web 21 Mar 2019, 1:21 pm
ಬರಲಿರುವ ಲೋಕಸಭಾ ಚುನಾವಣೆಯಲ್ಲಿ, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ, ದಿವಂಗತ ಶಾಸಕ ಅಂಬರೀಷ್ ಪತ್ನಿ ಸುಮಲತಾ ಅವರು ನಿನ್ನೆ ನಾಮಪತ್ರ ಸಲ್ಲಿಸಿದ ನಂತರ, ಚುನಾವಣಾ ಆಯೋಗದ ಸೂಚನೆಯಂತೆ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ನಟಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಸಲ್ಲಿಸಿದ ಅಫಿಡವಿಟ್ ನಂತೆ ಅವರು ಒಟ್ಟೂ '23 ಕೋಟಿ'ರೂ.ಗೂ ಅಧಿಕ ಆಸ್ತಿ ಹೊಂದಿದ್ದಾರೆ.
Vijaya Karnataka Web sumalatha1703


ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ
ಹೆಸರು : ಸುಮಲತಾ ಅಮರನಾಥ್
ವಿದ್ಯಾಭ್ಯಾಸ: ಎಸೆಸ್ಸೆಲ್ಸಿ
ಪತಿ: ದಿವಂಗತ ಎಂಎಚ್ ಅಮರನಾಥ್ ಅಲಿಯಾಸ್ ಅಂಬರೀಷ್
ಪುತ್ರ: ಅಭಿಷೇಕ್ ಗೌಡ
ವಯಸ್ಸು: 55 ವರ್ಷ
ವಿಳಾಸ: ಬೆಂಗಳೂರಿನ ಜೆಪಿ ನಗರ 2ನೇ ಹಂತದ 21ನೇ ಮುಖ್ಯರಸ್ತೆಯಲ್ಲಿ ಮನೆ.
* ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಹಕ್ಕು ಹೊಂದಿದ್ದಾರೆ.
* ಯಾವುದೇ ಕ್ರಿಮಿನಲ್ ಕೇಸ್ ಗಳು ಇವರ ವಿರುದ್ಧ ಇಲ್ಲ.
* 1 ಫೇಸ್ ಬುಕ್, 2 ಟ್ವಿಟ್ಟರ್ ಹಾಗೂ 2 ಇನ್ಸ್ಟಾಗ್ರಾಮ್ ಖಾತೆಗಳನ್ನು ಹೊಂದಿದ್ದಾರೆ.
* ಅಂಧ್ರಪ್ರದೇಶದ ಗುಂಟೂರಿನ ಸಂತ ಜೋಸೆಫ್ ಕಾನ್ವೆಂಟ್ ಬ್ರೊಡಿಪೇಟ್ ಶಾಲೆಯಲ್ಲಿ 1977-78ರಲ್ಲಿ ಎಸ್‌ಎಸ್‌ಎಲ್ ಸಿ

ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಘೋಷಿಸಿದ ಆಸ್ತಿ ಎಷ್ಟು?
ಸ್ಥಿರಾಸ್ತಿ: 17 ಕೋಟಿ ರೂ. ಪ್ಲಸ್

* ಸ್ಥಿರಾಸ್ತಿ ಮೌಲ್ಯ : 17,72,91,150 ರೂ.
* 41,00,000 ರು ಮೌಲ್ಯದ ಕೃಷಿ ಭೂಮಿ ಇದೆ.
* ಬೆಂಗಳೂರಿನ ಜೆಪಿ ನಗರದಲ್ಲಿ ಮನೆ, ಕಟ್ಟಡಗಳ ಮೌಲ್ಯ 17,72,91,150 ರೂ.
* 2017-18ರ ಅರ್ಥಿಕ ವರ್ಷದ ಐಟಿ ರಿಟರ್ನ್ಸ್ ನಲ್ಲಿ 1,33,15,757 ರೂ. ಆದಾಯ

ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಘೋಷಿಸಿದ ಆಸ್ತಿಗಳ ವಿವರ
ಚರಾಸ್ತಿ : 5 ಕೋಟಿ ರೂ. ಪ್ಲಸ್

* ಎಚ್ ಡಿಎಫ್ ಸಿ, ಸಿಟಿ ಬ್ಯಾಂಕ್, ಎಸ್ ಬಿಐ ಬ್ಯಾಂಕ್ ಗಳಲ್ಲಿ ಖಾತೆಗಳಿಂದ 12,70,363 ರೂ. ನಗದು ಹೊಂದಿದ್ದಾರೆ.
* ವಿಜಯ ಬ್ಯಾಂಕ್ ಷೇರು ,ಎಚ್ ಡಿ ಎಫ್ ಸಿ ಈಕ್ವಿಟಿ, ಎಚ್ ಡಿ ಎಫ್ ಸಿ ಯುಲಿಪ್, ವಿಮೆ, ಕೋಟಕ್ ಮಹೀಂದ್ರಾ ವಿಮೆ ಹೊಂದಿದ್ದಾರೆ
* ಚರಾಸ್ತಿ: 5,68,62,989 ರೂ.
* 1,66,81,189 ರೂ. ಮೌಲ್ಯದ ಚಿನ್ನ ಹಾಗೂ 12,57,545 ರೂ. ಮೌಲ್ಯದ ಬೆಳ್ಳಿ
ಸುಮಲತಾ ಆಸ್ತಿ ವಿವರ
ಸುಮಲತಾ ಅವರು 14 ಕೋಟಿ ರೂ. ಸಾಲ ಹೊಂದಿದ್ದಾರೆ

* ಸುಮಲತಾ ಅವರ ಒಟ್ಟೂ ಸಾಲ: 1,42,32,295 ರೂ.

* ಪ್ರಮೀಳಾ ಕೆಜಿ (ಯಾವುದೇ ಭದ್ರತೆ ಇಲ್ಲದ ಸಾಲ) 45,00,000 ರೂ.
* ಸಂತೋಷ್ ಡಿಟಿ (ಯಾವುದೇ ಭದ್ರತೆ ಇಲ್ಲದ ಸಾಲ) 95,00,000 ರೂ.
* ಸ್ಯಾಂಡಲ್ ವುಡ್ ಮೀಡಿಯಾ (ಯಾವುದೇ ಭದ್ರತೆ ಇಲ್ಲದ ಸಾಲ) 2,32,295 ರೂ.
* ಬ್ಯಾಂಕ್ ಇನ್ನಿತರ ಆರ್ಥಿಕ ಸಂಸ್ಥೆಗಳಿಂದ ಯಾವುದೇ ಬಗೆಯ ಸಾಲವನ್ನು ಹೊಂದಿಲ್ಲ, ಬಾಕಿ ಉಳಿಸಿಕೊಂಡಿಲ್ಲ.

ಇನ್ನು, ಸುಮಲತಾ ಅವರು ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿ " ತಾವು ಮಂಡ್ಯದ ಸೊಸೆ. ಅದರಲ್ಲೂ ಮುಖ್ಯವಾಗಿ ಮಂಡ್ಯದ ಮಳವಳ್ಳಿ ಸೊಸೆ. ದಿವಂಗತ ಅಂಬರೀಷ್ ಅವರು ಕನಸಾಗಿದ್ದ ಮಂಡ್ಯದ ಜನರ ಸೇವೆ ಮಾಡಲು ಚುನಾವಣೆಗೆ ನಿಂತಿದ್ದೇನೆ ಹೊರತೂ ಅಧಿಕಾರದ ಆಸೆಯಿಂದ ಅಲ್ಲ. ನನಗೆ ಅಧಿಕಾರದ ದಾಹ ಇದ್ದಿದ್ದರೆ ನಾನು ಈಗಿರುವ ಪಕ್ಷಗಳನ್ನೇ ಸೇರಿಕೊಂಡು ಅಧಿಕಾರ ಪಡೆದು ಹಾಯಾಗಿ ಇರಬಹುದಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆಲ್ಲುವ ರಿಸ್ಕ್ ತೆಗದುಕೊಳ್ಳಬೇಕಾಗಿರಲಿಲ್ಲ" ಎಂದು ಹೇಳಿ ಭಾರಿ ಚಪ್ಪಾಳೆ ಗಿಟ್ಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌