ಆ್ಯಪ್ನಗರ

ಖ್ಯಾತ ನಿರ್ದೇಶಕ ಮಣಿರತ್ನಂ ವಿರುದ್ಧ ನೆಟ್ಟಿಗರು ಕೆಂಡಾಮಂಡಲ

ತಮಿಳು ಚಿತ್ರೋದ್ಯಮದ ಖ್ಯಾತ ನಿರ್ದೇಶಕ ಮಣಿರತ್ನಂ ವಿರುದ್ಧ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ವೈರಮುತ್ತುಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿರುವುದು.

TIMESOFINDIA.COM 9 Sep 2019, 1:58 pm

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ತನ್ನ ಹೊಸ ಸಿನಿಮಾ ವಿಚಾರವಾಗಿ ಮಣಿರತ್ನಂ ತೆಗೆದುಕೊಂಡಿರುವ ನಿರ್ಧಾರವೊಂದು ನೆಟ್ಟಿಗರ ಪಿತ್ತ ಕೆರಳಿಸಿದೆ. ಮೀಟೂ ಆರೋಪ ಎದುರಿಸುತ್ತಿರುವ ಗೀತಸಾಹಿತಿ ವೈರಮುತ್ತುಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿರುವುದೇ ಇದಕ್ಕೆ ಕಾರಣ.
Vijaya Karnataka Web mani-ratnam


ಸ್ವಲ್ಪ ದಿನಗಳ ಹಿಂದೆ ಮೀಟೂ ಅಭಿಯಾನ ಜೋರಾಗಿ ಸದ್ದು ಮಾಡಿದ್ದು ಗೊತ್ತೇ ಇದೆ. ಚಿತ್ರೋದ್ಯಮದ ಹಲವಾರು ಮಂದಿ ಮಹಿಳೆಯರು ತಮಗಾದ ಲೈಂಗಿಕ ದೌರ್ಜನ್ಯದ ವಿರುದ್ಧ ಸೆಟೆದು ನಿಂತಿದ್ದು ಗೊತ್ತೇ ಇದೆ. ಮೀಟೂ ಅಭಿಯಾನದ ಮೂಲಕ ಹಲವಾರು ಮಂದಿಯ ಬಣ್ಣ ಬಯಲು ಮಾಡಿದ್ದರು.
ಚಿನ್ಮಯಿ #MeToo ಆರೋಪಕ್ಕೆ ಪ್ರತಿಕ್ರಿಯಿಸಿದ ಮೇನಕಾ ಗಾಂಧಿ

ತಮಿಳಿನ ಗೀತಸಾಹಿತಿ ವೈರಮುತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಾಯಕಿ, ಡಬ್ಬಿಂಗ್ ಕಲಾವಿದೆ ಚಿನ್ಮಯಿ ಶ್ರೀಪಾದ ಆರೋಪಿಸಿದ್ದರು. ಈ ರೀತಿ ಆರೋಪ ಎದುರಿಸುತ್ತಿರುವ ಹಲವಾರು ಸೆಲೆಬ್ರಿಟಿಗಳಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ.

ಆದರೆ ಖ್ಯಾತ ನಿರ್ದೇಶಕರಾಗಿ ಹೆಸರು ಮಾಡಿರುವ ಮಣಿರತ್ನಂ ತಮ್ಮ ಮುಂದಿನ ಸಿನಿಮಾ 'ಪೊನ್ನಿಯನ್ ಸೆಲ್ವನ್' ಚಿತ್ರಕ್ಕಾಗಿ ವೈರಮುತ್ತು ಕೈಯಲ್ಲಿ ಬರೋಬ್ಬರಿ 12 ಹಾಡುಗಳನ್ನು ಬರೆಸಿದ್ದಾರೆ. ಇದರಿಂದಾಗಿ ನೆಟ್ಟಿಗರು ಮಣಿರತ್ನಂ ವಿರುದ್ಧ ಹರಿಹಾಯುತ್ತಿದ್ದಾರೆ.

ಕೂಡಲೆ ವೈರಮುತ್ತುರನ್ನು ಈ ಚಿತ್ರದಿಂದ ಕೈಬಿಡಬೇಕೆಂದು ಆಗ್ರಹಿಸುತ್ತಿದ್ದಾರೆ. ವೈರಮುತ್ತು ಜತೆಗೆ ಈ ಚಿತ್ರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಸಹ ಇದ್ದು ಅವರ ಬಗ್ಗೆಯೂ ನೆಟ್ಟಿಗರು ಕುಪಿತರಾಗಿದ್ದಾರೆ.

2018ರಲ್ಲಿ ವೈರಮುತ್ತು ವಿರುದ್ಧ ಚಿನ್ಮಯಿ ಶ್ರೀಪಾದ ಆರೋಪಿಸುತ್ತಾ, ತಾನು 18 ವರ್ಷಗಳ ವಯಸ್ಸಿನಲ್ಲಿದ್ದಾಗ ವೈರಮುತ್ತು ತನ್ನ ಮೇಲೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಹೇಳಿ ಚಿತ್ರರಂಗಕ್ಕೆ ಶಾಕ್ ನೀಡಿದ್ದರು. #MeToo ಅಭಿಯಾನದ ಮೂಲಕ ಈ ಸಂಗತಿಯನ್ನು ಚಿನ್ಯಯಿ ಶ್ರೀಪಾದ ಬಹಿರಂಗಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌