ಆ್ಯಪ್ನಗರ

ಮಾನ್ವಿತಾ ಕಾಮತ್ ಕನ್ನಡ, ಮರಾಠಿ ದ್ವಿಭಾಷಾ ಚಿತ್ರ

ನಂದಿತಾ ಯಾದವ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. ಮುಂಬೈ ಮತ್ತು ರಾಜಸ್ಥಾನದಲ್ಲಿ ಚಿತ್ರೀಕರಣ ನಡೆಯಲಿದೆ. ಪಾತ್ರವರ್ಗದಲ್ಲಿ ಅರುಣ್ ಸಾಗರ್, ರಾಜೇಶ್ ನಟರಂಗ ಜತೆಗೆ ಮಿಥುನ್ ಚಕ್ರವರ್ತಿ ಸಹ ಇದ್ದಾರೆ. ಇದೊಂದು ಪಯಣದಲ್ಲಿ ಸಾಗುವ ಟೀನೇಜ್ ಲವ್ ಸ್ಟೋರಿ ಆಗಿದೆ.

Vijaya Karnataka Web 22 Feb 2019, 3:32 pm
ಟಗರು ಬೆಡಗಿ ಮಾನ್ವಿತಾ ಕಾಮತ್ ಹೊಸ ಚಿತ್ರಕ್ಕೆ ರೆಡಿಯಾಗಿದ್ದಾರೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು ಕನ್ನಡ ಮತ್ತು ಮರಾಠಿಯಲ್ಲಿ ನಿರ್ಮಾಣವಾಗುತ್ತಿದೆ. ಮಾರ್ಚ್ 7ರಿಂದ ಚಿತ್ರೀಕರಣ ಆರಂಭವಾಗಲಿದೆ. ಮಾನ್ವಿತಾ ಜತೆಗೆ ಹೊಸಬರಾದ ಸುಮುಖ್ ಅಭಿನಯಿಸುತ್ತಿದ್ದಾರೆ.
Vijaya Karnataka Web manvitha


ನಂದಿತಾ ಯಾದವ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. ಮುಂಬೈ ಮತ್ತು ರಾಜಸ್ಥಾನದಲ್ಲಿ ಚಿತ್ರೀಕರಣ ನಡೆಯಲಿದೆ. ಪಾತ್ರವರ್ಗದಲ್ಲಿ ಅರುಣ್ ಸಾಗರ್, ರಾಜೇಶ್ ನಟರಂಗ ಜತೆಗೆ ಮಿಥುನ್ ಚಕ್ರವರ್ತಿ ಸಹ ಇದ್ದಾರೆ. ಇದೊಂದು ಪಯಣದಲ್ಲಿ ಸಾಗುವ ಟೀನೇಜ್ ಲವ್ ಸ್ಟೋರಿ ಆಗಿದೆ.

ಇದರ ಜತೆಗೆ ಮಾನ್ವಿತಾ ಕಾಮತ್ ಇನ್ನೆರಡು ಚಿತ್ರಗಳಲ್ಲೂ ಬಿಝಿಯಾಗಿದ್ದಾರೆ. ಒಂದು ಅನಿಲ್ ಕುಮಾರ್ ನಿರ್ದೇಶನದ ದಾರಿ ತಪ್ಪಿದ ಮಗ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಅವರ ವಸಿಷ್ಠ ಸಿಂಹ ನಾಯಕನಾಗಿರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ದಾರಿ ತಪ್ಪಿದ ಮಗ ಸಿನಿಮಾದಲ್ಲಿ ಧಿರೇನ್‌ ರಾಮ್‌ಕುಮಾರ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಮಾನ್ವಿತಾ ಕಾಮತ್ ಅಮೃತಸರಕ್ಕೆ ಭೇಟಿ ನೀಡಿದ್ದಾಗ ಬಾಹುಬಲಿ ಚಿತ್ರದ ನಾಯಕಿ ತಮ್ಮನ್ನಾ ಅಂದುಕೊಂಡು ಅವರನ್ನು ಮುತ್ತಿಕೊಂಡ ಪ್ರಸಂಗ ನಡೆದಿತ್ತು. ಶೂಟಿಂಗ್‌ಗಾಗಿ ಅಲ್ಲಿಗೆ ತೆರಳಿದ್ದ ಅವರಿಗೆ ಇಂಥದ್ದೊಂದು ಅನುಭವ ಆಗಿದ್ದು, ಪೊಲೀಸ್‌ ಸೆಕ್ಯೂರಿಟಿಯಲ್ಲಿ ಅವರು ಅಮೃತ್‌ಸರ್‌ದ ಗೋಲ್ಡನ್‌ ಟೆಂಪಲ್‌ ವೀಕ್ಷಿಸುವಂತಾಗಿದೆ.

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದಲ್ಲಿಅಮೃತ್‌ಸರ್‌ನಲ್ಲಿರುವ ಸಿಖ್‌ರ ಧಾರ್ಮಿಕ ಕ್ಷೇತ್ರ ಗೋಲ್ಡನ್‌ ಟೆಂಪಲ್‌ನಲ್ಲೂ ಚಿತ್ರೀಕರಣ ಮಾಡಲಾಗಿದೆ. ಈ ಶೂಟಿಂಗ್‌ಗಾಗಿ ತೆರಳಿದ ಸಂದರ್ಭದಲ್ಲಿ ಮಾನ್ವಿತಾರನ್ನು ನೋಡಿದ ಜನರು ಬಾಹುಬಲಿ ಹೀರೊಯಿನ್‌ ಎಂದೇ ಭಾವಿಸಿದ್ದಾರೆ. ಹಾಗಾಗಿ ಜನಜಂಗುಳಿ ಜಾಸ್ತಿಯಾದ ಕಾರಣ ಪೊಲೀಸರು ಸೆಕ್ಯುರಿಟಿ ನೀಡಿದ್ದಾರೆ. ಅಲ್ಲದೇ, ಮಾನ್ವಿತಾರಿಗೆ ವಿಶೇಷ ಅತಿಥಿ ಎಂದು ಪರಿಗಣಿಸಿ ಸೆಕ್ಯುರಿಟಿಯಲ್ಲಿ ಇಡೀ ಗೋಲ್ಡನ್‌ ಟೆಂಪಲ್‌ ತೋರಿಸಿದ್ದಾರೆ.

ನಾಗತಿಹಳ್ಳಿ ಅವರ ಹೊಸ ಸಿನಿಮಾದಲ್ಲಿ ಒಂದು ಟ್ರಾವೆಲ್‌ ಇದೆ. ಹಾಗಾಗಿ ವಿದೇಶಗಳಲ್ಲಿ ಮತ್ತು ಭಾರತದ ಹಲವು ಪ್ರದೇಶಗಳಲ್ಲಿ ಶೂಟ್‌ ಮಾಡಿದ್ದಾರೆ. ಚಿತ್ರ ತುಂಬಾ ರಿಚ್‌ ಆಗಿ ಮೂಡಿ ಬಂದಿದೆ. ಈ ಸಿನಿಮಾದಿಂದ ಹಲವು ಪ್ಲೇಸ್‌ಗಳಿಗೆ ವಿಸಿಟ್‌ ಮಾಡಿದಂತಾಯಿತು. ನಿರ್ದೇಶಕರು ತುಂಬಾ ಎನರ್ಜೆಟಿಕ್‌. ಉತ್ಸಾಹದಿಂದ ಸಿನಿಮಾ ಮಾಡ್ತಾರೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ವಾಘಾ ಬಾರ್ಡರ್‌, ಅಮೃತ್‌ಸರ್‌ಗಳಲ್ಲಿ ಶೂಟ್‌ ಮಾಡಿದ್ದೇವೆ' ಎನ್ನುವುದು ಮಾನ್ವಿತಾ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌