ಆ್ಯಪ್ನಗರ

Master Hirannaiah: ದೇವೇಗೌಡರ ಬಗ್ಗೆ ಮಾಸ್ಟರ್ ಹಿರಣ್ಣಯ್ಯ ಸಿಡಿಸಿದ್ದ ಜೋಕ್

ನಮ್ಮ ಮನೆಯಲ್ಲಿ ಯಾವುದೇ ಶುಭಕಾರ್ಯವಾಗಲಿ ನಾನು ದೇವೇಗೌಡರ ಮನೆಗೆ ಹೋಗಿ ಆಹ್ವಾನ ಪತ್ರಿಕೆ ಕೊಟ್ಟು ಬರುತ್ತೇನೆ. ನಾವಿಬ್ಬರೂ ಸಂವಿಧಾನ ರೂಪಿಸಿದ ದಿನದಿಂದ ಸ್ನೇಹಿತರು. ಕಾಯಿಲೆ ಬಿದ್ದಾಗಲೂ ಸ್ನೇಹಿತರೇ. ನನಗೆ ಆಪರೇಷನ್ ಆಗಿದ್ದಾಗ ನನ್ನ ಪಕ್ಕದ ವಾರ್ಡ್‌ನಲ್ಲಿ ಅವರೂ ಇದ್ದರು.

Vijaya Karnataka Web 2 May 2019, 1:22 pm
ಮಾಸ್ಟರ್ ಹಿರಣ್ಣಯ್ಯ ಅವರ ಹಾಸ್ಯಪ್ರಜ್ಞೆ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲಿಲ್ಲ. ಅವರ ನಾಟಕಗಳನ್ನು, ಹಾಸ್ಯೋತ್ಸವಗಳನ್ನು ನೋಡಿದವರಿಗೆ ಇದರ ಅರಿವಿದ್ದೇ ಇರುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಅವರು ಹೇಳಿದ್ದ ಜೋಕ್ ಇಂದಿಗೂ ನೆನಪಿಸಿಕೊಂಡರೆ ನಗು ಉಕ್ಕುತ್ತದೆ.
Vijaya Karnataka Web master-hirannaiah


ಪುಣ್ಯಾತ್ಮರಪ್ಪಾ ದೇವೇಗೌಡ್ರು, ಅವರು ಕೊಟ್ಟು ಹುಟ್ಟಿದ್ದಾರೆ, ನೆಗೆದು ಬಿದ್ದು ಹೋಗಾ, ನಾವೆಲ್ಲಾ ಸುಟ್ಟು ಹುಟ್ಟಿದ್ದೇವಲ್ಲಾ. ನಾನು ದೇವೇಗೌಡರ ಬಗ್ಗೆ ಒಂದು ಗಾದೆ ಮಾತು ಹೇಳುತ್ತಿರುತ್ತೇನೆ. ಮದುವೆ ಮನೆಗೆ ದೇವೇಗೌಡ್ರನ್ನ, ಸತ್ತವರ ಮನೆಗೆ ಸದಾನಂದ ಗೌಡ್ರನ್ನ ಕರೆಯಬಾರದು ಅಂತ..."

ದೇವೇಗೌಡ್ರನ್ನ ಮದುವೆ ಮನೆಗೆ ಕರೆದ, ಅವರ ಮುಖ ನೋಡಿದ ಗಂಡು ಹೆಣ್ಣು, ಇವರು ಯಾಕಾದರೂ ಮದುವೆಯಾಗುತ್ತಿದ್ದಾರೋ, ಪಾಪಿ ಸೂ.. ಮಕ್ಕಳು ಎಂದು ಏನೇನೋ ಅರ್ಥ ನಾವು ಕಲ್ಪಿಸಿಕೊಳ್ಳಬಹುದು. ಸದಾನಂದ ಗೌಡರನ್ನು ಸತ್ತವರ ಮನೆಗೆ ಕರೆದುಕೊಂಡು ಹೋಗಬಾರದು. "ಏನ್ರಿ ನಿಮ್ಮ ಅಪ್ಪ ಹೋಗ್ಬಿಟ್ರಂತೆ" ನಗುತ್ತಾ ಕೇಳಿ ಬಿಟ್ತಾರೆ!

ನಮ್ಮ ಮನೆಯಲ್ಲಿ ಯಾವುದೇ ಶುಭಕಾರ್ಯವಾಗಲಿ ನಾನು ದೇವೇಗೌಡರ ಮನೆಗೆ ಹೋಗಿ ಆಹ್ವಾನ ಪತ್ರಿಕೆ ಕೊಟ್ಟು ಬರುತ್ತೇನೆ. ನಾವಿಬ್ಬರೂ ಸಂವಿಧಾನ ರೂಪಿಸಿದ ದಿನದಿಂದ ಸ್ನೇಹಿತರು. ಕಾಯಿಲೆ ಬಿದ್ದಾಗಲೂ ಸ್ನೇಹಿತರೇ. ನನಗೆ ಆಪರೇಷನ್ ಆಗಿದ್ದಾಗ ನನ್ನ ಪಕ್ಕದ ವಾರ್ಡ್‌ನಲ್ಲಿ ಅವರೂ ಇದ್ದರು. ಯಾಕೆ ಬಂದಿದ್ದೀರ ಎಂದರೆ ವ್ಯಾಸಕ್ಟಮಿಗೆ (ಸಂತಾನಹರಣ ಶಸ್ತ್ರ ಚಿಕಿತ್ಸೆ) ಎಂದಿದ್ದರು ಗೌಡ್ರು. ಆಗಲೇ ಅವರಿಗೆ 75 ವರ್ಷ. ಇನ್ನೇನು ವ್ಯಾಸಕ್ಟಮಿ ಮಾಡಿಸುತ್ತಾರೆ. ಆ ರೀತಿ ಅವರು ತಮಾಷೆಗೆ ಹೇಳಿದ್ದರು ಎಂದಿದ್ದರು ಹಿರಣ್ಣಯ್ಯ.

ನಾವಿಬ್ಬರೂ ತಮಾಷೆಯಾಗಿ ಮಾತನಾಡುತ್ತಿದ್ದೆವು. ಹಾಗಾಗಿ ನಾನು ಅವರ ಬಗ್ಗೆ ಏನೇ ಜೋಕ್ ಹಾಸನದಲೇ ಮಾಡಿದರೂ ನನಗೆ ಎಕ್ಸ್‌ಕ್ಯೂಸ್ ಇದೆ. ನಾನು ನಿಜಲಿಂಗಪ್ಪ ಅವರು ತಾತ ಮೊಮ್ಮಗನ ತರಹ ಇದ್ದರೆ. ಇವರು ನಾವು ಸಮಕಾಲೀನರು. ಹಾಗಾಗಿ ನಮ್ಮ ಮೊಮ್ಮಗಳ ಮದುವೆ ಸಾರ್. ನಮ್ಮ ವಂಶದಲ್ಲಿ ಮೊಟ್ಟ ಮೊದಲ ಮೊಮ್ಮಗಳ ಮದುವೆ ಮಾಡುತ್ತಿದ್ದೇವೆ. ಅದನ್ನು ಮಾಡ್ತಾ ಇರುವುದು ದೊಡ್ಡದಲ್ಲ, ಅದನ್ನು ನೋಡ್ತಾ ಇದ್ದೀವಿ. ಇದು ನಮ್ಮ ಭಾಗ್ಯ. ಬನ್ನಿ ಎಂದೆ.

ಆ ದತ್‌ನನ್ನು ಕರೆದರು. ಏ ದತ್ತಾ ನಾಳೆ ನಾನು ಆಸ್ಪತ್ರೆಗೆ ಹೋಗ್ಬೇಕಲ್ಲಾ ಅದನ್ನು ಪೋಸ್ಟ್‌ಪೋನ್ ಮಾಡ್ಬಿಡು. ನಾಳಿದ್ದಕ್ಕೆ ಹಾಕ್ಕೋ. ರಿಸೆಪ್ಷನ್‌ಗೆ ಹೋಗೋಣ ಎಂದರು. ಸಾಮಾನ್ಯವಾಗಿ ದೊಡ್ಡವರು ಬರ್ತೀವಿ ಅಂತಾರೆ. ಆಮೇಲೆ ಬರೋದೇ ಇಲ್ಲ ಎಂದು ನಾನು ಅಂದುಕೊಂಡೆ. ಅಶೋಕ್, ಅನಂತ್ ಕುಮಾರ್ ಬಂದಿದ್ದಾರೆ. ಇನ್ನೊಂದು ಕಡೆ ದೇವೇಗೌಡ್ರು ಬಂದು ಬಿಟ್ರು.

ನಾನು ವಿರೋಧ ಪಕ್ಷದವರು ಇಬ್ಬರೂ ಸೇರಿಬಿಟ್ರಲ್ಲ ಎಂದುಕೊಂಡೆ. ಬಂದ್ರು ಹೆಗಲ ಮೇಲೆ ಕೈ ಹಾಕ್ಕೊಂಡು ನಗುನಗುತ್ತಾ ಎಲ್ಲರನ್ನೂ ಮಾತನಾಡಿಸಿಕೊಂಡು ಬಂದರು. ಆಗ ನನಗೇ ಅಚ್ಚರಿ ಆಯ್ತು. ಆಗ ನನ್ನ ಹಳೆ ಗಾದೆ ಮಾತನ್ನು ಬದಲಾಯಿಸಿದೆ. ಅದೇನೆಂದರೆ "ಮದುವೆ ಮನೆಗೆ ಯಡಿಯೂರಪ್ಪನನ್ನು ಕರೆಯಬಾರದು, ಸತ್ತವರ ಮನೆಗೆ ಸದಾನಂದ ಗೌಡರನ್ನು ಕರೆಯಬಾರದು" ಅಂತ ಎಂದು ಅವರು ಹಾಸ್ಯೋತ್ಸವದಲ್ಲಿ ಹೇಳಿದ್ದನ್ನು ಕೇಳಿದರೆ ಇಂದಿಗೂ ನಗು ಬಾರದೆ ಇರಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌