ಆ್ಯಪ್ನಗರ

ಚಿರಂಜೀವಿ ಮನೆಗೆ ಬಂತು ಆದೋನಿಯ ವಿಶಿಷ್ಟ ಬೆಳ್ಳಿ ಮಂಟಪ

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಮುಖ್ಯವಾಗಿ ಆಂಜನೇಯ ಸ್ವಾಮಿ ಆರಾಧಕರು ಎಂಬುದು ಗೊತ್ತಿರುವ ಸಂಗತಿ. ಇದೀಗ ಪೂಜಾ ಕಾರ್ಯಕ್ರಮಗಳಿಗಾಗಿ ವಿಶಿಷ್ಟವಾಗಿ ತಯಾರಿಸಿಕೊಂಡಿರುವ ಬೆಳ್ಳಿ ಮಂಟಪವನ್ನು ಕರ್ನೂಲು ಜಿಲ್ಲೆಯ ಆದೋನಿಯಿಂದ ತರಿಸಿಕೊಂಡಿದ್ದಾರೆ.

Vijaya Karnataka Web 3 Aug 2019, 3:15 pm
ಮೆಗಾ ಸ್ಟಾರ್ ಚಿರಂಜೀವಿ ಸದ್ಯಕ್ಕೆ 'ಸೈರಾ' ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಚಿರಂಜೀವಿಗೆ ದೈವ ಭಕ್ತಿ ಜಾಸ್ತಿ. ಮುಖ್ಯವಾಗಿ ಆಂಜನೇಯ ಸ್ವಾಮಿಯ ಆರಾಧಕರು. ಇತ್ತೀಚೆಗೆ ಚಿರಂಜೀವಿ ಮನೆಗೆ ಹೊಸ ಬೆಳ್ಳಿ ಮಂಡಪ ಬಂದು ತಲುಪಿದೆ. ಇದನ್ನು ಪೂಜಾ ಕಾರ್ಯಕ್ರಮಗಳಿಗಾಗಿ ಚಿರಂಜೀವಿ ವಿಶೇಷವಾಗಿ ತಯಾರಿಸಿಕೊಂಡಿದ್ದಾರೆ.
Vijaya Karnataka Web chiranjeevi


ಕರ್ನೂಲು ಜಿಲ್ಲೆಯ ಆದೋನಿ ಕಂಚಿಗಾರ್ಲ ಬೀದಿಯಲ್ಲಿರುವ ರಂಗನ್ನ ಚಾರಿ ಸನ್ಸ್ ಅಂಡ್ ಮೆಟಲ್ ವರ್ಕ್ಸ್‌ನಲ್ಲಿ ಚಿರಂಜೀವಿ ಇದನ್ನು ತಯಾರಿಸಿಕೊಂಡಿದ್ದಾರೆ. ಕಳೆದ ಹಲವಾರು ದಿನಗಳಿಂದ ಈ ಬೆಳ್ಳಿ ಮಂಟಪ ತಯಾರಿಕೆಯಲ್ಲಿ ಮಗ್ನರಾದವರು ಕೊನೆಗೂ ಅದರ ಕೆಲಸಗಳನ್ನು ಪೂರ್ಣಗೊಳಿಸಿ ಬೆಳ್ಳಿ ಮಂಟಪವನ್ನು ಚಿರು ಮನೆಗೆ ತಲುಪಿಸಿದ್ದಾರೆ. [ಚಿರಂಜೀವಿ 'ವಿನಯ ವಿಧೇಯ ರಾಮ' ಚರಣ್ ಕಿವಿ ಹಿಂಡಿದ್ದು ಯಾಕೆ?]

ಬೆಳ್ಳಿ ಪಂಟಪದ ಜತೆಗೆ ಚಿರಂಜೀವಿ ಇರುವ ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇನ್ನೊಂದು ಕಡೆ ಸೈರಾ ಸಿನಿಮಾವನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ರಾಮ್ ಚರಣ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಯನತಾರಾ ಹೀರೋಯಿನ್.

ವಿಶೇಷ ಎಂದರೆ ಈ ಚಿತ್ರದ ಪಾತ್ರವರ್ಗದಲ್ಲಿ ಅಮಿತಾಭ್ ಬಚ್ಚನ್, ವಿಜಯ್ ಸೇತುಪತಿ, ತಮನ್ನಾ ಸಹ ಇದ್ದಾರೆ. ಇದಾದ ಬಳಿಕ ಚಿರಂಜೀವಿ 152ನೇ ಚಿತ್ರಕ್ಕೂ ಸಿದ್ಧವಾಗುತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌